ಉರಿ‌ಬೇಸಿಗೆಗೆ ತಾಳೆಕಾಯಿ (ಹಣ್ಣು) ಮಹತ್ವ ನಿಮಗೆ ಗೊತ್ತೆ…?

ಬಿಸಿಲಿನ ಬೇಗೆಯಿಂದ ದೇಹ ತಂಪಾಗಿಸಲು ಈ ಹಣ್ಣು ಸವಿಯಿರಿ..!!

ಚಳ್ಳಕೆರೆ ನ್ಯೂಸ್ :
ಬೇಸಿಗೆ ಕಾಲದಲ್ಲಿ ನಮ್ಮ ದಾಹವನ್ನು ತಣಿಸಲು ನಿಸರ್ಗ ನಮಗೆ
ತನ್ನ ಹಲವಾರು ಉತ್ಪನ್ನಗಳನ್ನು ವರದಾನವಾಗಿ ಕೊಡುತ್ತಿದೆ.

ಬಿಸಿಲಿನ ತಾಪವನ್ನು ತಣಿಸಿಕೊಳ್ಳಲು ಎಳನೀರು, ನಿಂಬೆಹಣ್ಣು‌ ಜ್ಯೂಸ್, ಕರ್ಬುಜ ಹಣ್ಣು, ಹಲಸಿನ
ಹಣ್ಣು. ಇವೆಲ್ಲವೂ ಸಹ ಬೇಸಿಗೆ ಕಾಲದಲ್ಲಿ ಜನರ ದೇಹವನ್ನು
ತಂಪು ಮಾಡಲು ತಯಾರಿರುತ್ತವೆ.

ಎಲ್ಲಾ ಪ್ರದೇಶಗಳಲ್ಲಿಯೂ
ಇವುಗಳು ಸಿಗುತ್ತವೆ.

ಆದರೆ ಕರಾವಳಿ ಪ್ರದೇಶದ ಭಾಗದಲ್ಲಿ ಬೇಸಿಗೆ ಕಾಲದಲ್ಲಿ ಹೆಚ್ಚಾಗಿ
ಕಂಡುಬರುವ ತಾಳೆ ಹಣ್ಣು (ತಾಟಿ ಹಣ್ಣು, ಐಸ್ ಆ್ಯಪಲ್ ಅಥವಾ
ಈರೋಳ್) ಎಂದು ಜನರ ಕಳೆಯುತ್ತಾರೆ ಎಂದು ಹೇಳಬಹುದು.

ಅದರಲ್ಲೂ ಮಟಮಟ ಮಧ್ಯಾಹ್ನದ ಬಿಸಿಲಿನಲ್ಲಿ ತಾಟಿ ಹಣ್ಣಿನ
ಜ್ಯೂಸ್ ಅಥವಾ ಈ ಹಣ್ಣಿನ ತೊಳೆಗಳನ್ನು ತಿನ್ನಬೇಕು ಎಂದು
ಪ್ರತಿಯೊಬ್ಬರೂ ಸಹ ಅಂದುಕೊಳ್ಳುತ್ತಾರೆ.

ಇನ್ನೂ ಮಧ್ಯ ಕರ್ನಾಟಕ ಭಾಗದಲ್ಲಿ ಕೊಂಚ ಈ ಹಣ್ಣುಗಳ ಸಂಖ್ಯೆ ಇಳಿಮುಖ ವಾದರು ಪಕ್ಕದ‌ಆಂದ್ರದ ಗಡಿ ಭಾಗದಿಂದ ವರ್ತಕರು ತಂದು ಮಾರಾಟ ಮಾಡುವುದು ಕಾಣಬಹುದು.

ಚಳ್ಳಕೆರೆ ನಗರದ ವಾಲ್ಮೀಕಿ ವೃತ್ತ, ನೆಹರು ವೃತ್ತ ಹಾಗೂ ಬೆಂಗಳೂರು ರಸ್ತೆಯಲ್ಲಿ ಈ ಹಣ್ಣಿನ ಗಾಡಿಗಳನ್ನು ಮಾರಾಟ ಮಾಡುವುದು ಕಾಣಬಹುದು.

ಇನ್ನೂ ಉರಿ‌ಬೇಸಿಗೆಗೆ ಹಣ್ಣಿನ ಬೆಲೆ ದುಬಾರಿಯಾದರು ದೇಹದ ತಂಪಿಗೆ ಅನಿವಾರ್ಯವಾಗಿ ಹಣ್ಣು ಕರೀದಿ ಮಾಡುತ್ತಿದ್ದಾರೆ.

ಅದು ಅಲ್ಲದೆ ಇದು
ವರ್ಷಕ್ಕೆ ಕೇವಲ ಒಂದು ಬಾರಿ ಬರುವ ಬೆಳೆ ಮಾತ್ರ.
ನೋಡಲು ಪುಟ್ಟ ತೆಂಗಿನ ಕಾಯಿ ರೀತಿ ಕಾಣುವ ತಾಟಿ ಹಣ್ಣು
ಮರದಲ್ಲಿ ಗುಂಪು ಗುಂಪಾಗಿ ಕಂಡು ಬರುತ್ತವೆ.

ತೆಂಗಿನಕಾಯಿಯ
ರೀತಿ ಇದನ್ನು ಸಿಪ್ಪೆ ಸುಲಿದು ಒಳಗೆ ಹಲಸಿನ ತೊಳೆಯಂತಹ
ಮೂರು ತೊಳೆಗಳು ಕಾಣಸಿಗುತ್ತವೆ.

ತಿನ್ನಲು ಸ್ವಲ್ಪ ಹುಳಿ ಮತ್ತು ಸಿಹಿ ಪ್ರಭಾವವನ್ನು ಹೊಂದಿರುವ
ಇವುಗಳು ಹೆಂಡ ತಯಾರು ಮಾಡುವಲ್ಲಿ ಹೆಚ್ಚು ಉಪಯೋಗಕ್ಕೆ
ಬರುತ್ತವೆ ಎಂದು ಹೇಳುತ್ತಾರೆ.

ತಾಟಿ ಹಣ್ಣಿನ ಅಥವಾ ತಾಳೆ ಹಣ್ಣಿನ
ಕೆಲವು ಆರೋಗ್ಯ ಉಪಯೋಗಗಳು ನೋಡುವುದಾದರೆ.

ಬೇಸಿಗೆ ಕಾಲದಲ್ಲಿ ಪ್ರತಿಯೊಬ್ಬರಿಗೂ ತಮ್ಮ ದೇಹದ ತಾಪಮಾನ
ಅಧಿಕವಾಗಿ ಕಂಡುಬರುತ್ತದೆ.

ಬೇಸಿಗೆಯ
ಬಿಸಿಲಿನಿಂದ ಬಳಲಿ ಸುಸ್ತಾಗಿರುವವರಿಗೆ
ತಾಟಿ ಹಣ್ಣಿನಲ್ಲಿ ದೇಹದ ತಾಪಮಾನವನ್ನು ತಂಪು ಮಾಡುವ ಗುಣ
ಲಕ್ಷಣಗಳು ಹೆಚ್ಚಾಗಿವೆ.

ಹಾಗಾಗಿ ಇವುಗಳಿಂದ ಜ್ಯೂಸ್ ತಯಾರು
ಮಾಡಿ ಸವಿಯಬಹುದು.

ಮೊದಲೇ ಹೇಳಿದಂತೆ ತಾಟಿ ಹಣ್ಣಿನಲ್ಲಿ ನಮ್ಮ ದೇಹಕ್ಕೆ ಅಗತ್ಯವಾಗಿ
ಬೇಕಾದ ಕೆಲವು ಬಗೆಯ ಪೌಷ್ಟಿಕ ಸತ್ವಗಳು ಎನ್ನಲಾದ
ಸೋಡಿಯಂ ಮತ್ತು ಪೊಟಾಶಿಯಂ ಅಂಶಗಳು ಹೆಚ್ಚಾಗಿ
ಕಂಡುಬರುತ್ತವೆ.

ಬೇಸಿಗೆ ಕಾಲದಲ್ಲಿ ಕೆಲವರಿಗೆ ರಕ್ತದ ಒತ್ತಡದಲ್ಲಿ ಏರುಪೇರು
ಉಂಟಾಗುತ್ತದೆ. ಇದರಿಂದ ಆರೋಗ್ಯದಲ್ಲಿ ಸುಸ್ತು ಆಯಾಸ
ಜೊತೆಗೆ ಹೃದಯದ ತೊಂದರೆಗಳು ಸಹ ಕಾಣಿಸಿಕೊಳ್ಳುತ್ತವೆ.


ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಲು ತಾಟಿ ಹಣ್ಣಿನ ಸೇವನೆ
ಮಾಡಬಹುದು.
ನಮ್ಮ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಉಂಟಾಗದಂತೆ
ನೋಡಿಕೊಂಡು ದೇಹದಲ್ಲಿರುವ ಎಲ್ಲಾ ಬಗೆಯ ಎಲೆಕ್ಟೋಲೈಟ್
ಅಂಶಗಳ ಸಮತೋಲನವನ್ನು ಕಾಯ್ದುಕೊಂಡು ಅತ್ಯುತ್ತಮ
ಆರೋಗ್ಯ ನಿರ್ವಹಣೆಯನ್ನು ಮಾಡಿಕೊಳ್ಳಬಹುದು.
ಸರ್ವ ರೋಗಗಳಿಗೂ ದಿವ್ಯಷಧಿ ತಾಳೆ ಹಣ್ಣು.

ನಿರ್ಜಲೀಕರಣ ಸಮಸ್ಯೆಯಿಂದ ದೂರವಾಗಬಹುದು
ಬೇಸಿಗೆ ಕಾಲದಲ್ಲಿ ಈ ದೇಹದಿಂದ ನೀರಿನ ಅಂಶ ಸಾಕಷ್ಟು
ಪ್ರಮಾಣದಲ್ಲಿ ಬೆವರಿನ ರೂಪದಲ್ಲಿ ಹರಿದು ಹೊರಬರುತ್ತದೆ.
ಇದರ ಜೊತೆಗೆ ನಾವು ಸೇವನೆ ಮಾಡುವ ಆಹಾರ ಜೀರ್ಣ
ಮಾಡುವ ಪ್ರಕ್ರಿಯೆಯಲ್ಲಿ ಸಾಕಷ್ಟು ನೀರಿನ ಅಂಶ
ಬಳಕೆಯಾಗುತ್ತದೆ.

ಮೂತ್ರ ವಿಸರ್ಜನೆಯಲ್ಲಿ ಅಪಾರ ಪ್ರಮಾಣದ ನೀರಿನ ಅಂಶ
ನಮ್ಮ ದೇಹದಿಂದ ನಷ್ಟವಾಗುತ್ತದೆ. ಆದರೆ ಈ ಎಲ್ಲಾ
ವಿಚಾರಗಳಿಂದ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ
ಉಂಟಾಗುತ್ತದೆ.

ಹಣ್ಣಿನ ಜ್ಯೂಸ್
ತಾಟಿ ಹಣ್ಣಿನಲ್ಲಿ ಅಪಾರ ಪ್ರಮಾಣದಲ್ಲಿ ಕ್ಯಾಲೊರಿ ಅಂಶಗಳು
ಇರುವ ಕಾರಣ ದೇಹದ ಶಕ್ತಿ ಮತ್ತು ಸದೃಢತೆಗೆ ಯಾವುದೇ ಕೊರತೆ
ಉಂಟಾಗುವುದಿಲ್ಲ.
ಬೇಸಿಗೆ ಕಾಲದಲ್ಲಿ ವಿಪರೀತ ಆಯಾಸ ಸುಸ್ತು ಎದುರಿಸುವವರು
ಈ ಹಣ್ಣಿನ ತೊಳೆಗಳನ್ನು ಆಗಾಗ ನಿಯಮಿತವಾಗಿ ಸೇವನೆ
ಮಾಡುವ ಅಭ್ಯಾಸ ಮಾಡಿಕೊಳ್ಳಬಹುದು. ಇದರಿಂದ ದೀರ್ಘ
ಕಾಲದವರೆಗೆ ದೇಹದಲ್ಲಿ ಚೈತನ್ಯ ಹಾಗೆ ಉಳಿಯುತ್ತದೆ.

ಬೇಸಿಗೆಯಲ್ಲಿ ಕಂಡುಬರುವ ಆರೋಗ್ಯದ ಸಾಕಷ್ಟು ಸಮಸ್ಯೆಗಳು
ಇದರಿಂದ ದೂರವಾಗುತ್ತವೆ.

ದೇಹದ ತೂಕದ ವಿಷ್ಯದಲ್ಲಿ
ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎನ್ನುವವರು
ಗಮನಿಸಬೇಕಾದ ಒಂದು ಅಂಶ
ತಾಟಿ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶ ಮತ್ತು ಕ್ಯಾಲೊರಿ
ಅಂಶಗಳು ಇರುವ ಕಾರಣ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು
ಎನ್ನುವವರು ಸ್ವಲ್ಪ ಆಲೋಚನೆ ಮಾಡಬೇಕು.
ಏಕೆಂದರೆ ಇದರಿಂದ ದೇಹದ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತ
ಹಾಗಾಗಿ ಬೆಳಗಿನ ಖಾಲಿ ಹೊಟ್ಟೆಯಲ್ಲಿ ನಿಂಬೆ ಹಣ್ಣಿನ ರಸ
ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಸಾಧ್ಯವಾದಷ್ಟು ನಿಮ್ಮ
ಆಹಾರ ಪದ್ಧತಿಯಲ್ಲಿ ಇತಂಹ ಹಣ್ಣುಗಳ ಸೇವನೆ ಉತ್ತಮ ಎನ್ನಬಹುದು.

ಇಂತಹ
ಇನ್ನಷ್ಟು ಮಾಹಿತಿಗಾಗಿ ನಮ್ಮ ಚಳ್ಳಕೆರೆ ಟಿವಿಯಲ್ಲಿ ಪ್ರತಿದಿನ ಸಂಜೆ 8 ಗಂಟೆಗೆ ವೀಕ್ಷಿಸಿ , ಹಾಗೂ ಯೂಟ್ಯೂಬ್ ನಲ್ಲಿ ಮಾಹಿತಿ ದೊರೆಯಲಿದೆ.

Namma Challakere Local News
error: Content is protected !!