ಚಳ್ಳಕೆರೆ ನ್ಯೂಸ್ :

ಚಳ್ಳಕೆರೆ ತಾಲೂಕು ನಗರಂಗೆರೆ ಗ್ರಾಮದ ಹತ್ತಿರ ಅಕ್ರಮ ಮರಳು ಸಾಗಾಟ ಮಾಡುವ ಲಾರಿ ಪತ್ತೆಯಾಗಿದೆ

ಸರ್ಕಾರದ ಯಾವುದೇ ಪರವಾನಿಗೆ ಪಡೆಯದೆ ಅಕ್ರಮವಾಗಿ ಮರಳು ಸಾಗಿಸಿ ಹೆಚ್ಚಿನ ಲಾಭ ಪಡೆಯಲು ಹೋಗಿ ಮರಳು ತುಂಬಿಕೊಂಡು ಟೌನ್ ಕಡೆ ಬರುವ ಸಂದರ್ಭದಲ್ಲಿ ವಾಹನ ಪೊಲೀಸರ ವಶಕ್ಕೆ ಸಿಕ್ಕಿದೆ.

ಸರ್ಕಾರದ ಖನಿಜ ಸಂಪತ್ತಾದ ಮರಳನ್ನು ಸಾಗಿಸುವಾಗ ಡಿವೈಎಸ್ಪಿ ಬಿಟಿ.ರಾಜಣ್ಣ ಹಾಗೂ ಸಿಪಿಐ ಕೆ ಕುಮಾರ್ ಅವರು ನೇತೃತ್ವದ ತಂಡ ಟಿಪ್ಪರ್ ಲಾರಿಯ ಚಾಲಕ ಹಾಗೂ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ

Namma Challakere Local News
error: Content is protected !!