50 ಲಕ್ಷದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕ ಎನ್ ವೈ ಗೋಪಾಲ್ ಕೃಷ್ಣ

ನಾಯಕನಹಟ್ಟಿ:: ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ ಹತ್ತಿರದಲ್ಲಿದ್ದು ಶೀಘ್ರದಲ್ಲಿ ರಸ್ತೆಯನ್ನು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಗುತ್ತಿಗೆದಾರರಿಗೆ ಸೂಚನೆ ನೀಡಿದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕ ಎನ್ ವೈ ಗೋಪಾಲಕೃಷ್ಣ ರವರು.
ಅವರು ಶುಕ್ರವಾರ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಒಳ ಮಠದ ಸಮುದಾಯ ಭವನ ಮುಂಭಾಗದಲ್ಲಿರುವ ಚಳ್ಳಕೆರೆ ರಸ್ತೆ (ರಾಷ್ಟ್ರೀಯ ಹೆದ್ದಾರಿ 45 ರಲ್ಲಿ)ಕಿ.ಮೀ.308.00 ರಿಂದ 309.00. ರವರಿಗೆ ರಸ್ತೆ ಅಭಿವೃದ್ಧಿಯ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಶೀಘ್ರದಲ್ಲಿ ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ ಮಾರ್ಚ್ 26ರಂದು ಜರಗಲಿದೆ ಆದ್ದರಿಂದ ಗುತ್ತಿಗೆದಾರರು ಶೀಘ್ರದಲ್ಲೇ ರಸ್ತೆ ಗುಣಮಟ್ಟದಿಂದ ಕೂಡಿರಬೇಕು ಎಂದು ಗುತ್ತಿಗೆದಾರರಿಗೆ ಸೂಚನೆಯನ್ನು ನೀಡಿದರು.

ಇದೇ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಬಾಲರಾಜ್, ಬಂಡೆ ಕಪಿಲೆ ಓಬಣ್ಣ, ನೇರಲಗುಂಟೆ ಸೂರನಾಯಕ, ಪ್ರಭುಸ್ವಾಮಿ, ವಕೀಲ ಉಮಾಪತಿ, ಬಗರ್ ಹುಕುಂ ಕಮಿಟಿ ಪಿ ಜಿ ಬೋರನಾಯಕ, ಲೋಕೋಪಯೋಗಿ ಇಲಾಖೆಯ ವಿಜಯ ಭಾಸ್ಕರ್, ಅಕೀಮ್, ಗುತ್ತಿಗೆದಾರ ಕರೀಂ, ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಟಿ. ಬಸಪ್ಪ ನಾಯಕ, ಎನ್ ಮಹದೇವಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಬಿ ತಿಪ್ಪೇಸ್ವಾಮಿ, ವರವು ಕಾಟಯ್ಯ ,ಶಂಕರಮೂರ್ತಿ, ಆರ್ ಬಸಪ್ಪ, ರೇಖಲಗೆರೆ ಅಶೋಕ್, ಶ್ರೀಕಾಂತ್, ನಾಯಕನಹಟ್ಟಿ ಓಬಳೇಶ್, ಪಿಎಸ್ಐ ಕೆ. ಶಿವಕುಮಾರ್, ಇತರರು ಇದ್ದರು

Namma Challakere Local News
error: Content is protected !!