ನಾಯಕನಹಟ್ಟಿ:ಫೆ.14. ಸಮೀಪದ ನೇರಲಗುಂಟೆ ಗ್ರಾಮದಲ್ಲಿ ಬುಧವಾರ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು.
ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬೆಳಗಿನದಲ್ಲಿ ಭಕ್ತರು ಧ್ವಜ ಹಾಗೂ ನಾನಾ ಬಣ್ಣಗಳ ಹೂಗಳಿಂದ ರಥವನ್ನು ವಿಶೇಷವಾಗಿ ಅಲಂಕರಿಸಿ ಮಧ್ಯಾಹ್ನ 11 ಗಂಟೆ ಸುಮಾರಿಗೆ ರಥಕ್ಕೆ ಅನ್ನಸಂಪರ್ಪಣೆ ನೆರವೇರಿಸಿ ಮಧ್ಯಾಹ್ನ 2 ಗಂಟೆಗೆ ರಥೋತ್ಸವಕ್ಕೆ ಚಾಲನೆ ನೀಡಿದರು ಗ್ರಾಮದ ಮುಖ್ಯ ರಸ್ತೆಯಲ್ಲಿ ನಡೆದ ರಥೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿನ ಭಕ್ತರು ಭಾಗವಹಿಸಿ ಭಕ್ತಿ ಸಮರ್ಪಿಸಿದರು. ರಥ ಸಂಚರಿಸುವ ದಾರಿ ಯದ್ದಕ್ಕೂ ಭಕ್ತರು ಬಾಳೆಹಣ್ಣು ಮಂಡಕ್ಕಿ ಎರಚುತ್ತಿದರು.ರಥೋತ್ಸವದಲ್ಲಿ ಜಾನಪದ ಶೈಲಿಯ ಕೋಲಾಟ ಡೊಳ್ಳು ಹಾಗೂ ನವಿಲು ಕುಣಿತ ವೀರಗಾಸೆ ಗಮನ ಸೆಳೆದವು.
ರಥೋತ್ಸವಕ್ಕೆ ಬಣ್ಣಬಣ್ಣದ ಬಾವುಟ ಸಾವಿರಾರು ಹೂ ಮಾಲೆ ಹಾಕಿ ಅಲಂಕರಿಸಿದ್ದರು.

ಮುಕ್ತಿ ಬಾವುಟ ಹರಾಜು ಪ್ರಕ್ರಿಯೆ ನಡೆಯಿತು ಗ್ರಾಮದ. ವಿ ಜಿ ತಿಪ್ಪೇಶ್ ರೆಡ್ಡಿ, 1,25,000 ರೂ. ಶ್ರೀ ಆಂಜನೇಯ ಸ್ವಾಮಿಯ ಮುಕ್ತಿ ಬಾವುಟವನ್ನು ಪಡೆದುಕೊಂಡುರು.
ಶ್ರೀ ಆಂಜನೇಯ ಸ್ವಾಮಿ ರಥೋತ್ಸವಕ್ಕೆ ಮಾಜಿ ಶಾಸಕ ಎಸ್ ತಿಪ್ಪಸ್ವಾಮಿ. ಚಾಲನೆ ನೀಡಿದರು.

ನೂರಾರು ಭಕ್ತರು ರಥೋತ್ಸವಕ್ಕೆ ಕೈ ಹಾಕಿ ಜೈ ಆಂಜನೇಯ ಜೈ ಆಂಜನೇಯಂದು ಘೋಷಣೆಯನ್ನು ಕೂಗುತ್ತಾ ಭಕ್ತರು ರಥವನ್ನು ಎಳೆದರು.

ಇನ್ನೂ ರಥೋತ್ಸವದ ವೇಳೆ ಭಕ್ತರು ನೆರೆದಿದ್ದ ಜನಸಮೋಹವನ್ನು ನೋಡಿ ಕಣ್ತುಂಬಿ ಕೊಂಡರು.

ಇದೇ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯೆ ಶಶಿರೇಖಾ ಮುತ್ತಯ್ಯ, ಎಸ್ ಚಂದ್ರಣ್ಣ, ಬೊಂಬಾಯಿ ತಿಪಯ್ಯ, ಬೂದಿ ಪಾಪಯ್ಯ, ಜಿ.ರಾಜಣ್ಣ, ತಿಪ್ಪೇಸ್ವಾಮಿ, ಕೆ ಪಿ. ಬೋರನಾಯಕ, ರಾಘವರೆಡ್ಡಿ, ಚಂದ್ರಣ್ಣ, ಜಿ. ಚಂದ್ರಣ್ಣ, ರಾಮಣ್ಣ, ನಾಗರಾಜ್,ಎಸ್ ಟಿ ಡಿ. ತಿಪ್ಪೇಶ್, ನೇರಲಗುಂಟೆ ಗ್ರಾಮದ ಸಮಸ್ತ ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.

Namma Challakere Local News
error: Content is protected !!