ಚಳ್ಳಕೆರೆ : ವಿಶ್ವ ಹಿಂದೂ ಪರಿಷತ್ ಬಜರಂಗದಳದ ವತಿಯಿಂದ ಆಮ್ಮಿಕೊಂಡಿದ್ದ ಐದನೇ ವರ್ಷದ ವಿಶ್ವ ಹಿಂದೂ ಮಹಾಗಣಪತಿಯ ಮಹೋತ್ಸವದ ಬೃಹತ್ ಶೋಭಾಯಾತ್ರೆ ನಗರದ ಪ್ರಮುಖ ರಾಜ ಬೀದಿಗಳಲ್ಲಿ ಅದ್ದೂರಿಯಾಗಿ ಸಾಗಿತು.
ನಗರದ ಕ್ಷೇತ್ರ ಶಿಕ್ಷಣಾಧಿಗಳ ಕಛೇರಿ ಆವರಣದಲ್ಲಿ ವಿಶ್ವಹಿಂದೂ ಪರಿಷತ್ ಬಜರಂಗದಳದ ವತಿಯಿಂದ ಐದನೇ ವರ್ಷದ ಮಹಾ ಹಿಂದೂ ಗಣಪತಿ ಪ್ರತಿಷ್ಠಾಪನೆ ಮಾಡಿದ್ದರು ಸೆ.30 ರಂದು ಶನಿವಾರ ಶೋಭಾಯ್ರಾಗೆ ನಗರದ ಪ್ರಮುಖರು ಮೆರವಣಿಗೆಗೆ ಚಾಲನೆ ನೀಡಿದರು.
ನಗರದ ಬಿಇಓ ಆವರಣದಿಂದ ಚಾಲನೆಗೊಂಡ ಮೆರವಣಿಗೆ ವಾಲ್ಮೀಕಿ ವೃತ್ತದಿಂದ ಅಂಬೇಡ್ಕೆರ್ ವೃತ್ತ ಹಾಗೂ ನೆಹರು ವೃತ್ತ ಬಸವೇಶ್ವರ ವೃತ್ತದಿಂದ ವಾಪಸ್‌ಹಾಗಿ ಮತ್ತೆ ಬಳ್ಳಾರಿ ರಸ್ತೆಯ ಮೂಲಕ ಸಾವಿರಾರು ಜನಸಾಗರದ ಮೂಲಕ ಸಾಗಿತು ಈ ಬೃಹತ್ ಮೆರವಣಿಗೆಯಲ್ಲಿ ತಾಲೂಕಿನ ವಿವಿಧ ಭಾಗದ ಪಡ್ಡೆ ಹುಡುಗರು, ಹುಡುಗಿಯರು ಕುಣಿದು ಕುಪ್ಪಳಿಸಿದ್ದು ವಿಶೇಷವಾಗಿ ಕಂಡು ಬಂದಿತು, ಡಿಜೆ ಸೌಂಡ್‌ಗೆ ಹದಿಹರೈದವರು ಜೊತೆಗೆ ಮಹಿಳೆಯರು ಹೆಜ್ಜೆಹಾಕಿದರು.
ಮೆರವಣಿಗೆಯಲ್ಲಿ ಮೂರು ಡಿಜೆ ಸೌಂಡ್ ಸಿಸ್ಟ್ಂ,ಗೆ ಯುವಕರು ಹುಚ್ಚೆದ್ದು ಕುಣಿದರು, ನಗರದ ಪ್ರಮುಖ ರಾಜ ಬೀದಿಗಳಲ್ಲಿ ಬೃಹತ್ ಮೆರವಣಿಗೆಗೆ ತಾಲೂಕಿನ ಸಾವಿರಾರು ಜನಸಂಖ್ಯೆ ಸಾಕ್ಷಿಯಾಯಿತು.
ವಿಶ್ವ ಹಿಂದು ಭಜರಂಗದಳ ಪದಾಧಿಕಾರಿಗಳಾದ ಡಾ.ಮಂಜುನಾಥ್, ಸೋಮಶೇಖರ್ ಮಂಡಿಮಠ್, ಬಾಳೆಕಾಯಿರಾಮದಾಸ್, ಮಾಜಿ ಸದಸ್ಯ ಜಿ.ಪಿ.ಜಯಪಾಲಯ್ಯ, ಬಾಳೆಮಂಡಿವೆAಕಟೇಶ್, ಮಾತೃಶ್ರೀ ಮಂಜುನಾಥ್, ಇತರರು ಭಾಗವಸಿದ್ದರು.
ಬಿಗಿ ಪೊಲೀಸ್ ಬಂದ್‌ಬಸ್ತ್ :
ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದAತೆ ಮುಂಜ್ರಾಗತ ಕ್ರಮವಾಗಿ ಬಿಎಸ್‌ಎಪ್ ತುಕಡಿ, ಸಿಪಿಐ., ಪಿಎಸ್‌ಐ., ಎಎಸ್‌ಐ., ಹೆಚ್‌ಸಿ-ಪಿಸಿ. ಮಹಿಳಾ ಪೊಲೀಸ್, ಹೆಚ್‌ಸಿ. ನೆಮಿಸಿಲಾಗಿತ್ತು, ಪ್ರಮುಖ ವೃತ್ತಗಳಲ್ಲಿ ಮೆರವಣಿಗೆ ಸಾಗುವ ಸ್ಥಳಗಳಲ್ಲಿ ಹೈ ಅಲರ್ಟ್ ಮಾಡಲಾಗಿತ್ತು. ಡಿವೈಎಸ್‌ಪಿ ಬಿಟಿ.ರಾಜಣ್ಣ, ವೃತ್ತ ನಿರೀಕ್ಷಕ ಸಮೀವುಲ್ಲಾ, ಇನ್ಸೆ÷್ಪಕ್ಟೆರ್ ಆರ್‌ಎಪ್.ದೇಸಾಯಿ,, ಪಿಎಸ್‌ಐ ಕೆ.ಸತೀಶ್‌ನಾಯ್ಕ್, ಪಿಎಸ್‌ಐ ಶಿವರಾಜ್, ಪಿಎಸ್‌ಐ ಧರೇಪ್ಪಾ, ಸಿಬ್ಬಂದಿಯೊAದಿಗೆ ಭದ್ರತೆಯಿಂದ ಮೆರವಣಿಗೆ ಸಾಗಿತು.
ಪೋಟೋ.1.ಚಳ್ಳಕೆರೆ ನಗರದ ವಿಶ್ವಹಿಂದು ಮಹಾಗಣಪತಿ ಬೃಹತ್ ಶೋಭಾಯಾತ್ರೆಯಲ್ಲಿ ನೆರೆದಿದ್ದ ಜನಸ್ತೋಮ.
ಪೋಟೋ.2.ಚಳ್ಳಕೆರೆ ನಗರದ ವಿಶ್ವಹಿಂದು ಮಹಾಗಣಪತಿ ಬೃಹತ್ ಶೋಭಾಯಾತ್ರೆಗೆ ಮಹಿಳಾ ಮಣಿಯರ ನೃತ್ಯ

Namma Challakere Local News
error: Content is protected !!