ಗೌರಸಮುದ್ರ ಮಾರಿ ದೇವಿಯ ಹಿನ್ನಲೆ ತಿಳಿಯಬೇಕೆ..!?
ಸೆ.19ರಂದ ನಡೆಯುವ ದೇವಿ ಜಾತ್ರೆಗೆ ಲಕ್ಷಾಂತರ ಭಕ್ತರು ಸಾಕ್ಷಿ.!
ಮಧ್ಯಾಹ್ನದ ಗೌರಸಮುದ್ರ ಮಾರಿ ದೇವಿ ಜಾತ್ರೆಗೆ ಸಕಲ ಸಿದ್ದತೆ
ನಮ್ಮ ಚಳ್ಳಕೆರೆ ನ್ಯೂಸ್ ಡೆಸ್ಕ್ ವರದಿ : ರಾಮಾಂಜನೇಯ.ಕೆ ಚನ್ನಗಾನಹಳ್ಳಿ
ಚಳ್ಳಕೆರೆ : ಬರದನಾಡು ಎಂದು ಹಣೆ ಪಟ್ಟಿಕೊಂಡ ಚಳ್ಳಕೆರೆಯಲ್ಲಿ ಕುಡಿಯುವ ನೀರಿಗೆ, ದನಗಳ ಮೇವಿಗೆ ಬರವಿರಬಹುದು ಆದರೆ ಹಬ್ಬ ಹರಿದಿನಗಳಿಗೆ ಯಾವುದೇ ರೀತಿಯಲ್ಲಿ ಬರವಿಲ್ಲ, ಮಳೆ ಬರಲಿ ಬಿಡಲಿ, ಬಿತ್ತಿದ ಬೆಳೆ ಕೈಗೆ ಸಿಗಲಿ ಬಿಡಲಿ ಆದರೆ ಚಿತ್ರದುರ್ಗ ಜಿಲ್ಲೆಯ ಐತಿಹಾಸಿಕ ಜಾತ್ರೆಗಳಲ್ಲಿ ಬಹುದೊಡ್ಡ ಜಾತ್ರೆಗಳಲ್ಲಿ ಎರಡನೆ ದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಗೌರಸಮುದ್ರ ಮಾರಿ ಹಬ್ಬಕ್ಕೆ ಸಲ್ಲುತ್ತದೆ.
ಬುಡಕಟ್ಟು ಸಂಪ್ರಾದಯಕ್ಕೆ ಒಂದಾದ ಗೌರಸಮುದ್ರ ಮಾರಮ್ಮ ಜಾತ್ರೆ ಈ ಭಾಗದ ಸಂಸ್ಕೃತಿಯ ಪ್ರತೀಕವಾಗಿದೆ. ತಾಲ್ಲೂಕಿನ ಬಹುದೊಡ್ಡ ಜಾತ್ರೆಗಳಲ್ಲಿ ಒಂದಾದ ಹೊರಹೊಮ್ಮಿದೆ ಈ ಜಾತ್ರೆಗೆ ವಿಶೇಷವಾದ ಈ ಭಾಗದಲ್ಲಿ ಪ್ರತಿ ವರ್ಷಗಳಿಗೊಮ್ಮೆ ನಡೆಯುವ ಜಾತ್ರೆಗೆ ಕರ್ನಾಟಕದಿಂದ, ಆಂಧ್ರಪ್ರದೇಶದವರೆಗೂ ಲಕ್ಷಾಂತರ ಭಕ್ತರನ್ನು ತನ್ನತ ಸೇಳೆಯುವ ಶಕ್ತಿ ಈ ದೇವಿಗಿದೆ ಎನ್ನುತ್ತಾರೆ. ಈ ದೇವಿಗೆ ಲಕ್ಷಾಂತರ ಭಕ್ತರು ಈ ಜಾತ್ರೆಗೆ ಸಾಕ್ಷಿಯಾಗುತ್ತಾರೆ.
ಐತಿಹಾಸಿಕ ಹಿನ್ನಲೆ:
ಭಾದ್ರಪದ ಮಾಸದ ಸೆಪ್ಟಂಬರ್‌ತಿAಗಳಲ್ಲಿ ಮಂಗಳವಾರ ನಡೆಯುವ ಮಾರಿ ಹಬ್ಬ ಊರತುಂಬೆಲ್ಲ ಸಡಗರ ಸಂಭ್ರಮ. ಚಳ್ಳಕೆರೆ ತಾಲ್ಲೂಕಿನ ಗೌರಸಮುದ್ರ ಗ್ರಾಮದ ಬಳಿ ಇರುವ ತುಮ್ಮಲು ಎಂಬಲ್ಲಿ ಮಾರಮ್ಮನ ಸಮಾಧಿ ಇದೆ, ಮತ್ತು ಈ ಸಮಾಧಿ ಬಳಿ ವರ್ಷಕ್ಕೊಮ್ಮೆ ದೊಡ್ಡ ಜಾತ್ರೆ ನಡೆಯುತ್ತದೆ. ಸಮೀಪದ ಪಾಳೆಯಗಾರ ಪಟ್ಟುಗಾಳದ ರಾಯದುರ್ಗ ಹಾಗೂ ನಿಡಗಲ್ಲು ಪಾಳೆಯಗಾರರಿಗೆ ಸಂಬಧಿಸಿದAತೆ ಮಾರಿಯ ಜೀವನದ ಘಟನೆಗಳನ್ನು ಕುರಿತು ನಂಬಲರ್ಹವಾದ ಹಾಗೂ ಆದರ ಪೂರ್ವದಂತ ಕಥೆಗಳು ಇವೆ. ಈ ದೇವಿಯನ್ನು ಆನಾದಿಕಾಲದಿಂದಲೂ ದುರ್ಗಿ, ಕಾಳಿ, ಮಹೇಶ್ವರಿ, ಇಂತೆಲ್ಲ ಹೆಸರುಗಳಿದ ಮತ್ತು ಮಧ್ಯನ ವೇಳೆ ತನ್ನ ಜಾತ್ರೆಯನ್ನು ಆಚರಿಸುಕೊಳ್ಳುವುದರಿಂದ “ಮಧ್ಯಾನದ ಮಾರಿ” ಎಂತಲು ಕರೆಯುತ್ತಾರೆ. ಮಾರಿ ಮಾನವ ಜನ್ಮದಲ್ಲಿ ಹುಟ್ಟಿ ಸಾಧನೆಯ ಸಿದ್ದಿಪಡೆದು ದೈವತ್ವ ಪಡೆತಿದ್ದಾಳೆ ಎಂಬುದರಲ್ಲಿ ಸಂಶಯವಿಲ್ಲ ಎಂಬುದು ದೃಡನಂಬಿಕೆ.
ಗೌರಸಮುದ್ರ ಊರಿನ ಹಿನ್ನಲೆ”
ಗೌರಸಂದ್ರ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ತಾಲ್ಲೂಕು ಕೇಂದ್ರದಿAದ ಈಶಾನ್ಯಕ್ಕೆ 30 ಕಿ.ಮೀ ದೂರದಲ್ಲಿದೆ ಗಡಿ ಹಂಚಿಯನಲ್ಲಿ ಆರವತ್ತರ ದಶಕದಲ್ಲಿ ಮಾರಮ್ಮ ಗುಡಿ ಕೇವಲ ಕಾವಡೆ ಹುಲ್ಲಿನ ಗುಡಿಸಲು, ಗುಡಿಯಾಗಿದ್ದು ಈಗ ಊರೊಳಗೆ ಭವ್ಯ ದೇಗುಲವಾಗಿ ಮಾರ್ಪಟಿದೆ. ಈಕೆಯ ಪಕ್ಕದಲ್ಲಿ ಮ್ಯಾಸ ಬೇಡರ ಬೊಮ್ಮಬೇಡರ ಗುಡಿ ಕೂಡ ಇದೆ. ಈ ಗ್ರಾಮವನ್ನು ಹಿಂದೆ ಗೌರಿ-ಚಂದ್ರ, ಎಂದು ಕರೆಯುತ್ತಿದ್ದರು, ಎಂದು ಪ್ರತಿಥಿ ಇದೆ, ಕಾಲ ಕ್ರಮೇಣ ಉಚ್ಚಾರದಲ್ಲಿ ಗೌರ ಚಂದ್ರ, ಗೌರ್ಚಂದ್ರ, ಗೌಸಂದ್ರ, ಗೌರಸಮುದ್ರವಾಯಿತು, ಆನಂತರ ಇತ್ತಿಚೀನ ಸರ್ಕಾರಿ ದಾಖಲೆಗಳ ಪ್ರಕಾರ ಗೌರಸಮುದ್ರ ಎಂದಿದ್ದಾರೆ. ಇಲ್ಲಿನ ಮಾರಮ್ಮನ ಮೂಲೆ ನೆಲೆ ಗೌರಸಮದ್ರದ ತುಮ್ಮಲು ಎಂಬ ವಿಶಾಲವಾದ ಜಾಗದಲ್ಲಿ ಹುತ್ತದ ರೂಪದಲ್ಲಿ ಸ್ವರೂಪದಲ್ಲಿ ಮಾರಮ್ಮನ ಮೆರೆಮೂರ್ತಿ ಗ್ರಾಮದಲ್ಲಿ ಸಾಮಾನ್ಯವಾಗಿ ಮತ್ತು ಚಳ್ಳಕೆರೆಯಲ್ಲಿ ಕಾಗದ ಮತ್ತು ಬಳೆ ತಯಾರಾಗುತ್ತಿತ್ತು ಈ ಕಾಗದದ ಅಳತೆಗಳು ‘ಗಜ’ ಎಂದು ಹೆಸರಿತ್ತು.
ದೀಪದ ಕಂಬದ ವಿಶೇಷ.:
ಯರಮಂಚನಾಯಕ ಆಗೀನ ಕಾಲದ ದೊರೆಯಾಗಿ ದೇವತೆಯ ಸೇವೆ ಮಾಡುತ್ತಿದ್ದು, ದೇವರ ನಂಬಿಕೆಯ ಪ್ರತೀಕವಾಗಿದೆ. ದೇವಿಯು ಗೌರ ಸಮುದ್ರದಿಂದ ತುಮ್ಮಲುಗೆ ಹೋಗುವ ಹಾದಿಯ ಮಧ್ಯದಲ್ಲಿ ಬಾವುಟ ಇಡಿದು ಮುಂದೆ ಸಾಗಬೇಕು ಮತ್ತು ಈ ತುಮ್ಮಲಿನಲ್ಲಿ ಯರಮಂಚನಾಯಕ ಸುಮಾರು 20 ಅಡಿ ಎತ್ತರದ ಸುಂಧರ ಕಲಾತ್ಮಾಕವಾದ ದೀಪ ಏರಿಸುವ ಕಲ್ಲಿನ ಕಂಬ ನೆಡಿಸಿ (ಸೂರ್ಯನಿಗೆ ನಮಸ್ಕಾರ)ನೀಡಿ ಪವಾಡ ಮೇರೆದ ಈ ಜಾತ್ರೆಯಲ್ಲಿ ಮಾರಿಯ ಹರಕೆ ತೀರಿಸಲು ಭಕ್ತಧಿಗಳು ಬಾಯಿಗೆ ಬಾಯಿ ಬೀಗ ಮತ್ತು ಬೇವಿನ ಸೀರೆ, ಮತ್ತು ಇನ್ನಿತರೆ ಹರಕೆಗಳನ್ನು ತೀರಿಸುತ್ತಾರೆ. ಒಂದತ್ತಿನಿAದ ಸುಮಾರು 9 ಜನ ಭಕ್ತಾದಿಗಳು ಒಬ್ಬರ ಮೇಲೆ ಒಬ್ಬರು ನಿಂತು ಸಮೃಧ್ದಿಯ ಸಂಕೇತವಾದ ದೀಪವನ್ನು ಹಚ್ಚಿ ಧೇವಿಗೆ ಶರಣಾಗುತ್ತಾರೆ.
ಈಗೇ ದೀಪದ ಕಲಂಬವನ್ನು ಏರಿ ಹಣತೆ ಹಚ್ಚಿದ ನಂತರ ಹೊಸದಾಗಿ ಬೆಳೆದ ಈರುಳ್ಳಿ ಸೂರು ಬಿಡುತ್ತಾರೆ, ಮತ್ತು ಸಂಜೆಗತ್ತಲು ಕವಿಯದ ಮುನ್ನೆವೇ ಜಾಗ ಬಿಡುವ ಪಧ್ದತಿ ಹಲವು ದಶಕಗಳಿಂದ ಇದೆ.
ಗೌರಸಮುದ್ರ ಮಾರಮ್ಮನಿಗೆ 14 ಜನ ಸೌರದವರು ಬಾದ್ಯಸ್ತರಾಗಿರುತ್ತಾರೆ :
ಒಂದೇನೆ ಬಂಗಾರಿ, ಕೊಡಗಿನವನು, ಯಂಜಿಮತ್ತಿನವನು, ಬಿಡರಾಮಲ್ಲನು, ದ್ಯಾವರಪ್ಪ, ಸೂಲಿಕನ, ಚೆಂಟಿನವನು ಪಟ್ಟನವನು, ಎಮಲಬ್ಬವನರು ಬಿಲ್ಲೆಬೋರನವನು, ಸಿಲುಕಿನವನು, ಸುಕ್ಕೆಪಾಪನವನು, ಕನಕನವನು, ಮುಡೇಲನವನು, ಇದ್ದರು ಎಂದು ಪುರ್ವಕರ ಬಲವಾದ ನಂಬಿಕೆ.
ಬಾಕ್ಸ್ ಮಾಡಿ :
1.ಸೆ.18ಕ್ಕೆ ಪ್ರಾರಂಭವಾದ ಮಾರಿ ದೇವಿ ಜಾತ್ರೆಯು ಸೆ.19 ರಂದು ತುಮಲು ಪ್ರದೇಶದಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಜರುಗುವ ಜಾತ್ರೆಗೆ ಸಾರ್ವಜನಿಕರ ಭಕ್ತಿ ಭಾವನೆಗಳಿಗೆ ದಕ್ಕೆಯುಂಟಾಗದAತೆ ದೇವಿ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ, ಸರಕಾರ ದೇವಿ ಹುಂಡಿಹಣದಲ್ಲಿ ಶೇ.50ರಷ್ಟು ಮೊತ್ತ ನೀಡಿದರೆ ದೇವಿ ಜಾತ್ರೆ ಇನಷ್ಟು ಭಕ್ತಿಯಿಂದ ಮಾಡಬಹುದು, ಈಗಾಗಲೇ ಪೊಲೀಸ್ ಇಲಾಖೆ ಸೂಕ್ತವಾದ ನಿದೆರ್ಶನದ ಮೂಲಕ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗುತ್ತದೆ.—ಎನ್.ವೈ.ಗೋಪಾಲಕೃಷ್ಣ ಶಾಸಕರು, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ

2.ಗೌರಸಮುದ್ರ ಮಾರಮ್ಮ ದೇವಿ ಜಾತ್ರೆಗೆ ರಾಜ್ಯವಲ್ಲದೆ ಆಂದ್ರದ ಭಕ್ತಾಧಿಗಳೆ ಹೆಚ್ಚು ಇನ್ನೂ ಲಕ್ಷಾಂತರ ಭಕ್ತರು ಈ ದೇವಿಗೆ ಜಾತ್ರೆಗೆ ಆಗಮಿಸುವ ನೀರಿಕ್ಷೆಯಿದೆ ಈಗಾಗಲೇ ಗ್ರಾಮ ಪಂಚಾಯಿತಿವತಿಯಿAದ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ, ಅದೇ ರೀತಿಯಲ್ಲಿ ಸರಕಾರ ದೇವಿ ಜಾತ್ರೆಗೆ ಸರಿದೂಗಿಸುವಷ್ಟು ಅನುದಾನ ನೀಡಬೇಕು, ಒಟ್ಟಾರೆ ಜಾತ್ರೆಗೆ ಬರುವ ಭಕ್ತಾಧಿಗಳಿಗೆ ಕೊರೆತಯಾಗದಂತೆ ಸಿದ್ದತೆ ಮಾಡಿಕೊಳ್ಳಲಾಗಿದೆ.- ಎಂ.ಓಬಣ್ಣ ಅಧ್ಯಕ್ಷ ಗೌರಸಮುದ್ರ ಗ್ರಾಪಂ.
ಬಾಕ್ಸ್ ಮಾಡಿ :
3.ಜಾತ್ರೆಯಲ್ಲಿ ಕಾನೂನು ಸುವ್ಯಸ್ಥೆ ಕಾಪಾಡಲು 4 ಡಿವೈಎಸ್‌ಪಿ, 10 ಮಂದಿ ಇನ್ಸೆಕ್ಟೆರ್, 20ಪಿಎಸ್‌ಐ, 500 ಸಿಬ್ಬಂದಿ, 150ಹೋಂ ಗಾರ್ಡ್ನ್ನು ನಿಯೋಜಿಸಲಾಗಿದೆ, ಇನ್ನೂ ವಾಹನಗಳ ತಪಾಸಣೆಗಾಗಿ 5 ಚೆಕ್ ಪೋಸ್ಟ್, 14 ಕಡೆ ಸಿಸಿಟಿವಿ ಕ್ಯಾಮಾರಾ ಅಳವಡಿಸಲಾಗುವುದು, ಪ್ರಣಿಬಲಿ ನಿಷೇಧದ ಬಗೆ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸಲಾಗುವುದು ದೇವಸಸ್ಥಾನ ಒಳಗೆ ಭಕ್ತಾಧಿಗಳ ದರ್ಶನಕ್ಕೆ ಬ್ಯಾರಿಕೇಡ್ ವ್ಯವಸ್ಥೆ, ಪೊಲೀಸ್ ಸಹಾವಣಿ ಕೇಂದ್ರ, ಡಾಗ್ ಸ್ವಾ÷್ಕಡ್, ತಾಂತ್ರಿಕ ವಿಭಾಗದಿಂದ ತಪಾಸಣೆ ಇನ್ನೂ ಸಾರ್ವಜನಿಕರು ಪೊಲೀಸ್ ನಿಗಧಿ ಪಡೆಸಿದಿ ಸ್ಥಳದಲ್ಲಿ ವಾಹನ ನಿಲ್ಲಿಸಬೇಕು ಎಂದು ಡಿವೈಎಸ್‌ಪಿ ರಾಜಣ್ಣ ವಿಶ್ವವಾಣಿಗೆ ಮಾಹಿತಿ ನೀಡಿದ್ದಾರೆ.

ಪೋಟೋ, 1 ಗೌರಸಮುದ್ರ ಮಾರಮ್ಮ ದೇವಿ ಜಾತ್ರೆಗೆ ಸಿದ್ದಗೊಂಡಿರುವ ಅಮ್ಮನವರು
ಪೋಟೋ, 2 ಗೌರಸಮುದ್ರ ತುಮ್ಮಲಿನಲ್ಲಿರುವ ಮಾರಮ್ಮ ದೇವಿ ಗುಡಿಯ ಮುಂದಿನ ದೀಪದ ಕಂಬದ ನೋಟ.
ಪೋಟೋ, 3 ಗೌರಸಮುದ್ರ ಮಾರಮ್ಮ ದೇವಿ ಗುಡಿಯ ನೋಟ.

1.ಎನ್.ವೈ.ಗೋಪಾಲಕೃಷ್ಣ
2.ಓಬಣ್ಣ. ಅಧ್ಯಕ್ಷ ಗ್ರಾಪಂ.

Namma Challakere Local News
error: Content is protected !!