ಚಳ್ಳಕೆರೆ : ಇತಿಹಾಸ ಪೂರ್ವದಲ್ಲಿಯೂ ಛಾಯ ಚಿತ್ರಕ್ಕೆ ತನ್ನದೇ ಆದ ಅಸ್ತಿತ್ವ ಇತ್ತು, ಅದರಂತೆ ಅಂದಿನಿAದ ಇಂದಿನವರೆಗೂ ಛಾಯ ಚಿತ್ರ ತನ್ನ ಹಿರಿಮೆ ಎತ್ತಿಹಿಡಿದಿದೆ ಎಂದು ತಾಲೂಕು ಛಾಯ ಗ್ರಾಹಕರ ಸಂಘದ ನೂತನ ಅಧ್ಯಕ್ಷ ನೇತಾಜಿಪ್ರಸನ್ನ ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಫೋಟೋಗ್ರಾಫರ್ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನಲ್ಲಿ ನಡೆಯುವ ಇಂಟರ್ನ್ಯಾಷನಲ್ ಫೋಟೋಗ್ರಾಫಿ ಎಕ್ಸಿಬಿಷನ್ ಕಾರ್ಯಕ್ರಮದ ಪ್ರಚಾರ ಅಭಿಯಾನವನ್ನು ಕುರಿತು ಸಭೆ ನಡೆಸಿದರು.
ಇನ್ನೂ ರಾಜ್ಯ ಸಂಘದ ಉಪಾಧ್ಯಕ್ಷರಾದ ಎಚ್‌ಎಸ್.ನಾಗೇಶ್, ನಿರ್ದೇಶಕರಾದ ಸಂಪತ್‌ಕುಮಾರ್ , ಇಂಟರ್ನ್ಯಾಷನಲ್ ಫೋಟೋಗ್ರಾಫರ್ ಉಮಾಶಂಕರ್, ನಿರ್ದೇಶಕರಾದ ರವಿ ಅವರ ನೇತೃತ್ವದಲ್ಲಿ ಸಭೆ ನಡೆಯಿತು.

ಈ ಸಂದರ್ಭದಲ್ಲಿ ಸಂಘದ ನೂತನ ಅಧ್ಯಕ್ಷರಾದ ನೇತಾಜಿಪ್ರಸನ್ನ, ಗೌರವಾಧ್ಯಕ್ಷರಾದ ಪಿ.ರವೀಂದ್ರನಾಥ್, ಪ್ರಧಾನ ಕಾರ್ಯದರ್ಶಿಗಳಾದ ಶಾಂತಲಾ ಚಂದ್ರಶೇಖರ್, ಸಹಕಾರಿದರ್ಶಿ ರಘು, ಉಪಾಧ್ಯಕ್ಷರಾದ ತಿರುಮಲ ಕುಮಾರ್, ಸಂಘಟನಾ ಕಾರ್ಯದರ್ಶಿ ಪಟೇಲ್, ಖಜಾಂಚಿ ಅಪ್ಪಿ ಅಜಯ್, ನಿರ್ದೇಶಕರುಗಳಾದ ಪಿ.ಶ್ರೀನಿವಾಸಲು, ಮೃತ್ಯುಂಜಯ ನಿರಂಜನ್, ಆರ್.ಅಶೋಕ್, ಬಾನುಸುರೇಶ್, ದೇವರಾಜ್, ನರಸಿಂಹ ಓಬಣ್ಣ, ಪಂಚಮುಖಿ ಬಾಬು, ದಿವಾಕರ್, ವೆಂಕಟೇಶ್, ಕೊಟ್ರೇಶ್, ಬೈಯಣ್ಣ ಇತರರು ಇದ್ದರು.

Namma Challakere Local News
error: Content is protected !!