ರಾಮಾಂಜನೇಯ ಚನ್ನಗಾನಹಳ್ಳಿ
ಚಳ್ಳಕೆರೆ : ರೈತ ದೇಶದ ಬೆನ್ನುಲುಬು ಎನ್ನುತ್ತವೆ ಆದರೆ ಇತ್ತೀಚಿನ ದಿನಮಾನಗಳಲ್ಲಿ ರೈತರ ಕಷ್ಟ ಹೇಳುತಿರಲಾಗಿದೆ ಇದ್ದ ಕೃಷಿ ಭೂಮಿಗಳು ಇಂದು ರಿಯಲ್ ಎಷ್ಟೆಟೆಟ್ ಹಾಗಿ ಮಾರ್ಪಡುತ್ತಿವೆ ಇಂತಹ ಸಂದಿಗ್ದ ಪರಸ್ಥಿಯಲ್ಲಿ ಇಲ್ಲೊಬ್ಬ ರೈತ ಮಾತ್ರ ತನ್ನ 5 ಎಕರೆ ಜಮೀನಿನಲ್ಲಿ ತರವೇವಾರಿ ಬೆಳೆ ಬೆಳೆದು ಇತರ ರೈತರಿಗೆ ಮಾದರಿಯಾಗಿದ್ದಾನೆ
ಕೇವಲ ಐದು ಎಕರೆ ಜಮೀನಿನಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚಿನ ಜಾತಿ ಮರಗಿಡಗಳನ್ನು ಬೆಳೆಸುವುದರ ಮೂಲಕ ಉತ್ತಮ ಫಸಲು ತೆಗೆಯುವುದರ ಮೂಲಕ ಪ್ರಗತಿಪರ ರೈತನಾಗಿ ಹೊರಹೊಮ್ಮಿದ ರೈತನ ಯಶೋಗಾಥೆ ಇಂದು ತೋರಿಸುತ್ತೆವೆ.
ಬಯಲು ಸೀಮೆಯಲ್ಲಿ ನೀರಿನ ಕೊರತೆ ಇರುವ ಆ ದಿನಗಳಲ್ಲಿ ಕೊಳವೆ ಬಾವಿಗಳಲ್ಲಿ ನೀರು ಕೂಡ ಬತ್ತಿ ಹೊಗುವ ದಿನಮಾನಗಳಲ್ಲಿ ತೋಟಗಳು ಒಳಗುವ ಸಮಯದಲ್ಲಿ ಇಡೀ ರೈತ ಕುಲಕ್ಕೆ ಮಾದರಿ ಎಂಬAತೆ ಕೇವಲ ಒಂದುವರೆ ಇಂಚು ನೀರಿನಲ್ಲಿ ಬಯಲು ಸೀಮೆಯಲ್ಲಿ ಹಸಿರುಕರಣ ಮಾಡಿದ ದಿಮಂತ ರೈತ ಎಂದರೆ ಅದು ಆರ್.ಎ.ದಯಾನಂದ ಮೂರ್ತಿ ಸಮಯದಲ್ಲಿ ದಿಡ್ಡ ಹೆಜ್ಜೆಯಿಂದ ಹಚ್ಚ ಹಸಿರಿನ ತೆಂಗು ಮಾವು ನೀರಳೆ ಪೇರಳೆ ನುಗ್ಗೆಕಾಯಿ ಬಾರಿ ಕಾಯಿ ಈಗೇ ಇನ್ನೂ ಅನೇಕ ಸಸಿಗಳನ್ನು ನೆಟ್ಟು ಅವುಗಳನ್ನು ಸಂರಕ್ಷಿಸಿ ಅದರಿಂದ ಆದಾಯವನ್ನು ಪಡೆಯುತ್ತಿದ್ದಾನೆ ಇನ್ನೂ ಖುದ್ದಾಗಿ ಗ್ರಾಹಕರಿಗೆ ಮನೆಗೆ ಹೋಗಿ ನೇರವಾಗಿ ಮಾರುಕಟ್ಟೆಯಲ್ಲಿರುವ ದರಕ್ಕಿಂತ ಕಮ್ಮಿ ಇದರಲ್ಲಿ ಗ್ರಾಹಕರಿಗೆ ಕೊಟ್ಟು ಆದರ್ಶ ರೈತನಾಗಿ ಇಂದು ಡಾಕ್ಟರೇಟ್ ಪದವಿಗೆ ಅರ್ಹರಾಗಿದ್ದಾನೆ.
ಕೆವಲ ರೈತನಲ್ಲದೆ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಅಪ್ರತಿಮ ವೀರ ಎಂದರೆ ಅದು ದಯಾನಂದ ಮೂರ್ತಿ ಮಾತ್ರ ಇಂತಹ ರೈತನಿಗೆ ಕರ್ನಾಟಕ ರಾಜ್ಯದ ಹೆಮ್ಮೆಯ ಕೃಷಿಕ ಎಂದು ಎಸಿಯ ವೇದಿಕೆ ಕಲ್ಚರ್ ರಿಸರ್ಚ್ ಯುನಿವರ್ಸಿಟಿ ಡಾಕ್ಟರೇಟ್ ಪದವಿ ನೀಡಿ ಡಾ. ದಯಾನಂದ ಮೂರ್ತಿ ಗೆ ಗೌರವಿಸಿದೆ.
ಏಷ್ಯಾದಲ್ಲೆ ಅತೀ ಕಡಿಮೆ ಮಳೆ ಬಿಳುವ ಪ್ರದೇಶವೆಂದರೆ ಅದು ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಇಂತಹ ಮಳೆ ಬಾರದ ಬರಡು ಭೂಮಿಯಲ್ಲಿ ಒಬ್ಬ ಕೃಷಿಕ ಹಲವಾರು ಮಿಶ್ರ ಬೆಳೆಗಳನ್ನು ಬೆಳೆದು ಏಷ್ಯಾ ವೇದಿಕೆ ಕಲ್ಚರ್ ರಿಸರ್ಚ್ ಇನ್ವರ್ಸಿಟಿಯಿಂದ ಡಾಕ್ಟರೇಟ್ ಪದವಿಗೆ ಬಾಜಿನರಾಗಿದ್ದಾರೆ ಇಂಥವರ ಆದರ್ಶವನ್ನು ನಾವು ತಿಳಿದುಕೊಂಡು ನಮ್ಮ ನಮ್ಮ ಜಮೀನಿನಲ್ಲಿ ಮಿಶ್ರ ಬೆಳೆ ಹಣ್ಣುಗಳನ್ನು ಬೆಳೆದು ರೈತರ ಸಂಕಷ್ಟಗಳನ್ನು ಈಡೇರಿಸಿಕೊಳ್ಳಬೇಕೆಂದು ಡಾಕ್ಟರ್ ತಿಪ್ಪೇಸ್ವಾಮಿ ಹೇಳಿದ್ದಾರೆ.
ಬಾಕ್ಸ್ :
ನಾನು ಮೂಲತಹ ಒಬ್ಬ ಕ್ರೀಡಾ ಪಡು ಆದರೆ ಆ ಒಂದು ನೋವಿನಿಂದ ಇಂದು ರೈತನಾಗಿ ಡಾಕ್ಟರೆಟ್ ಗೆ ಬಾಜನರಾಗಿದ್ದೆನೆ ನನ್ನ ಚಿಕ್ಕ ವಯಸ್ಸಿನಲ್ಲಿ ಬೆಂಗಳೂರಿಗೆ ಹೋಗಿ ಹೋಂ ಗಾರ್ಡ್ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡುತ್ತಿದೆ ಅದು ಸರಿ ಹೋಗದ ಕಾರಣ ಮುರಳಿ ಚಳ್ಳಕೆರೆಗೆ ಬಂದು ನಮ್ಮ ತಂದೆಯವರ ನೀಡಿದ ಐದು ಎಕರೆ ಜಮೀನಿನಲ್ಲಿ ವಿದೇಶಿ ಸಸಿಯನ್ನು ಬೆಳೆದು ಜನಮನ ಗಳಿಸಿದ್ದೇನೆ ನಾನು ಮಲೇಶಿಯಾ ನೆದರ್ಲ್ಯಾಂಡ್, ರಷಾ, ಥಾಯ್ಲ್ಯಾಂಡ್ ಇನ್ನು ಅನೇಕ ದೇಶಗಳಿಗೆ ಹೋಗಿ ಅಲ್ಲಿ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ನಮ್ಮ ಜಮೀನಿನಲ್ಲಿ ಹಲವಾರು ಬೆಳೆಗಳನ್ನು ಬೆಳೆದು ನಾನು ನೇರವಾಗಿ ಗ್ರಾಹಕರಿಗೆ ಕೊಡುತ್ತೇನೆ ಇದರಿಂದಾಗಿ ಪ್ರತಿಯೊಬ್ಬ ರೈತರು ತಮ್ಮ ಬೆಳೆಗಳನ್ನು ನೇರವಾಗಿ ಮಾರುಕಟ್ಟೆಗೆ ಹೋಗದೆ ಗ್ರಾಹಕರಿಗೆ ಕೊಟ್ಟರೆ ಉತ್ತಮ ಆದಾಯ ಸಿಗುತ್ತದೆ– ಡಾ.ಆರ್.ಎ. ದಯಾನಂದ ಮೂರ್ತಿ

ಈ ಸಂದರ್ಭದಲ್ಲಿ ನಿವೃತ್ತ ಪ್ರೊ. ನಾಗರಾಜ್, ಪ್ರೋ.ಡಾ.ದೇವಪ್ಪ, ಉದ್ಯಮಿ ಗಿರೀಶ್, ಕಾಲ್ವೆಹಳ್ಳಿ ಜಿಬಿ ಪಾಲಣ್ಣ, ಉಮೇಶ್ ಬ್ಯಾನೆರ್ಜಿ, ಆಮ್ ಆದ್ಮಿ ಪಕ್ಷದ ಪಾಪಣ್ಣ ಸೇರಿದಂತೆ ಅನೇಕ ಮುಖಂಡರುಗಳು ಭಾಗಿಯಾಗಿದ್ದರು

Namma Challakere Local News
error: Content is protected !!