ಚಳ್ಳಕೆರೆ : ಬಿಜೆಪಿ ಮುಖಂಡರ ಮೇಲೆ ಹಲ್ಲೆ ಖಂಡಿಸಿ ಕಳೆದ ರಾತ್ರಿಯಿಂದ ನಿರಂತರವಾಗಿ ಧರಣಿಯಲ್ಲಿ ಪಾಲ್ಗೊಂಡು ಪ್ರತಿಭಟನೆ ಮಾಡುತ್ತಿರುವ ಬಿಜೆಪಿ ಮುಖಂಡರು

ಚುನಾವಣೆ ಹೊಸ್ತಿಲಲ್ಲ ಗಲಾಟೆ, ಕೋಮು ಗಲಭೆಗಳು ನಡೆಯುವುದು ಮಾಮೂಲು ಅದರಂತೆ 2023 ರ ವಿಧಾನಸಭೆ ಎಲೆಕ್ಷನ್ ಹೊತ್ತಲ್ಲಿ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ತುರುವನೂರು ಹೋಬಳಿಯ ಬೆಳಗಟ್ಟ ಗ್ರಾಮದ ಬಿಜೆಪಿ ಪಕ್ಷದ ಪ್ರಚಾರ ಮಾಡುವ ವೇಳೆ ಬಿಜೆಪಿ ಪಕ್ಷದ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ರವರ ಕಾರು ಮೇಲೆ ಹಲ್ಲೆ ನಡೆಸಿದ್ದಾರೆ.

ಇನ್ನೂ ಹಲ್ಲೆ ನಡೆಸಿದ ಕಿಡಿಗೇಡಿಗಳು ತಲೆ‌ಮರೆಸಿಕೊಂಡಿದ್ದಾರೆ, ಬೆಳಗಟ್ಟ ಗ್ರಾಮದಲ್ಲಿ ಪ್ರಚಾರ ಮುಗಿಸಿ ವಾಪಸ್ಸ್ ಬರುವ ವೇಳೆ ಈ ಘಟನೆ ನಡೆದಿದೆ,, ಈ ಘಟನೆ ಯಾರಿಂದ ಹಾಗಿದೆ ಯಾರು ಮಾಡಿಸಿದ್ದಾರೆ ಎಂಬಯದು ಪೊಲೀಸ್ ತನಿಖೆಯಿಂದ ಹೊರಬಿಳಬೇಕು.


ಈ ಘಟನೆಯಿಂದ ಕ್ಷೇತ್ರದಲ್ಲಿ ನಾಲ್ಕು ಜನ ಅಭ್ಯರ್ಥಿ ಗಳಲ್ಲಿ ಯಾರಿಗೆ ವರದಾನ ಹಾಗಬಹದು ಯಾವ ಪಕ್ಷಕ್ಕೆ ಅನೂಕುಲವಾದಿತು ಈ ಗಲಾಟೆಯಿಂದ ಎಂಬುದು ಸಾರ್ವಜನಿಕ ಚರ್ಚೆ ಹೇರಳವಾಗಿದೆ

ಇನ್ನೂ ಬಿಜೆಪಿ ಪಕ್ಷದ ಮುಖಂಡರು ಹೇಳುವ ಪ್ರಕಾರ ಕಾಂಗ್ರೇಸ್ ನವರೆ ಈ ಹಲ್ಲೆ ನಡೆಸಿ ಕ್ಷೇತ್ರದಲ್ಲಿ ರೌಡಿಸಂ ರಾಜಕೀಯ ಮಾಡುತ್ತಾರೆ ಎಂದು ಆರೋಪ ಮಾಡುತ್ತಿದ್ದಾರೆ

ಇನ್ನೂ ಜೆಡಿಎಸ್ ಪಕ್ಷದ ಮುಖಂಡರು ಇಬ್ಬರ ಜಗಳದಲ್ಲಿ ಅನುಕಪ ಸೃಷ್ಠಿ ಮಾಡಿಕೊಂಡು ಮತ ಗಿಟ್ಟಿಸಿಕೊಳ್ಳುತ್ತಾರೆ ಅಥವಾ ಪಕ್ಷೇತರ ಅಭ್ಯರ್ಥಿ ಸ್ಥಳಿಯ ವಾಗಿ ಈ ಹಲ್ಲೆ ಪ್ರಕರಣವನ್ನು ಯಾವ ರೀತಿಯಲ್ಲಿ ಮತದಾರರಿಗೆ ಮನವರಿಕೆ ಮಾಡುತ್ತಾ ಎರಡು ದಿನಗಳಲ್ಲಿ ಮತ ಪರಿವರ್ತನೆ ಮಾಡುತ್ತಾರೆ ಎಂಬುದು ಕಾದು ನೋಡಬೇಕಿದೆ.

ಇನ್ನೂ ಕಾಂಗ್ರೆಸ್ – ಬಿಜೆಪಿ ಆರೋಪಕ್ಕೆ ಪೊಲೀಸ್ ತನಿಖೆಯಿಂದ ಮಾತ್ರ ನಿಜವಾದ ಸತ್ಯಂಶ ಹೊರಬಿಳಲಿದೆ
ಯಾವ ಪಕ್ಚದವರು ಈ ಘಟನೆ ಮಾಡಿದ್ದಾರೆ ಯಾವ ಉದ್ದೇಶಕ್ಕೆ ಮಾಡಿದ್ದಾರೆ ಎಂಬುದು ಮಾತ್ರ ಪೊಲೀಸ್ ಇಲಾಖೆಯ ತನಿಖೆಯಿಂದ ಮಾತ್ರ ಸತ್ಯ ಹೊರಬಿಳಲಿದೆ.

Namma Challakere Local News
error: Content is protected !!