ಚಳ್ಳಕೆರೆ : ವಿಜ್ಞಾನ ನಗರಿ ಚಳ್ಳಕೆರೆ ಕ್ಷೇತ್ರದ 2023ರ ವಿಧಾನ ಸಭಾ ಚುನಾವಣೆಗೆ ಉರಿಯಾಳುಗಳು ಈಗಾಗಲೇ ಪಿಕ್ಸ್ ಹಾಗಿದ್ದಾರೆ
ಕಳೆದ ಏಪ್ರಿಲ್ 13ರಿಂದ ಪ್ರಾರಂಭವಾದ ನಾಮಪತ್ರ ಸಲ್ಲಿಕೆಗೆ ಆಯಿಲ್ ಸಿಟಿಯಲ್ಲಿ ಕಣಕ್ಕಿಳಿದ ಎಲ್ಲಾ ಅಭ್ಯರ್ಥಿಗಳು ಒಬ್ಬ ಒಬ್ಬಾಬರಾಗಿ ನಾಮಪತ್ರ ಸಲ್ಲಿಸಿದ್ದಾರೆ
ಅದರಂತೆ ವಿವಿಧ ಪಕ್ಷದ ನಾಯಕರುಗಳು ತಾ ಮುಂದು ನೀ ಮುಂದೆ ಎಂಬAದತೆ ನಾಮಪತ್ರ ಸಲ್ಲಿಸಿದರೆ ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ಮಾತ್ರ ಅಮಾವಾಸ್ಯೆ ದಿನವನ್ನು ಲೆಕ್ಕಿಸದೆ ಮತದಾರರ ಪ್ರಭುಗಳೆ ನನಗೆ ಶ್ರೀರಕ್ಷೆ ಎಂದು ನಾಮಪತ್ರ ಕೊನೆಯ ದಿನವಾದ ಇಂದು ಎರಡು ನಾಮಪತ್ರ ಸಲ್ಲಿಸಿದ್ದಾರೆ.
ಇನ್ನೂ ಆಯಿಲ್ ಸಿಟಿಯ ಅಖಾಡಕ್ಕೆ ಸಜ್ಜಾದ ಉರಿಯಾಳುಗಳು ಮಾತ್ರ ತಮ್ಮ ಶಕ್ತಿ ಪ್ರದರ್ಶನಕ್ಕೆ ನಾಮಪತ್ರ ಸಲ್ಲಿಕೆಯೆ ಅಖಾಡವಾಗಿ ಬಳಸಿಕೊಂಡಿರುವುದು ಸತ್ಯ ಅದರಂತೆ ಮೊದಲಿಗೆ ಕಣಕ್ಕಿಳಿದ ಪಕ್ಷೇತರ ಅಭ್ಯರ್ಥಿ ಆರ್.ಅಂಜಮ್ಮ ನಂತರ ಕೆಆರ್‌ಎಸ್ ಪಕ್ಷದಿಂದ ಬೋಜರಾಜ್, ಬಿಜೆಪಿಯಿಂದ ಆರ್.ಅನಿಲ್‌ಕುಮಾರ್ ನಂತರ ಜೆಡಿಎಸ್ ಪಕ್ಷದ ಎಂ.ರವೀಶ್‌ಕುಮಾರ್, ಕಾಂಗ್ರೇಸ್ ಪಕ್ಷದ ಹಾಲಿ ಶಾಸಕ ಟಿ.ರಘುಮೂರ್ತಿ ಇನ್ನೂ ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ಕಣದಲ್ಲಿ ಇದ್ದಾರೆ. ಇನ್ನೂ ಒಬ್ಬರು ಎರಡು ನಾಮಪತ್ರ ಸಲ್ಲಿಸಿದರೆ ಬಿಜೆಪಿ ಪಕ್ಷದ ಆರ್.ಅನಿಲ್ ಕುಮಾರ್ ಮಾತ್ರ ಮೂರು ನಾಮಪತ್ರ ಸಲ್ಲಿಸಿದ್ದಾರೆ.
ಇನ್ನೂ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ಕೆ.ಟಿ ಕುಮಾರಸ್ವಾಮಿ ಬೆಳಿಗ್ಗೆ 11 ಗಂಟೆಯೊಳಗೆ ನಾಮಪತ್ರ ಸಲ್ಲಿಸಿ ನಂತರ ರೋಡ್ ಶೋ ಮೂಲಕ ತೆರೆದ ವಾಹದನಲ್ಲಿ ಬೃಹತ್ ಮೆರವಣೆಗೆಯಲ್ಲಿ ಎಪಿಎಂಸಿ ಮಾರುಕಟ್ಟೆಯಿಂದ ತಾಲೂಕು ಕಛೇರಿಗೆ ದಾವಿಸಿದರು
ಇನ್ನೂ ರಾಜಾಕೀಯ ಪಕ್ಷಗಳನ್ನು ತ್ಯಜಿಸಿದ ಹಲವು ಮುಖಂಡರು ಕಾರ್ಯಕರ್ತರು ಪಕ್ಷೇತರ ಅಭ್ಯರ್ಥಿಗೆ ಬೆಂಬಲಕ್ಕೆ ನಿಂತಿರುವುದು ದೃಶ್ಯ ಕಂಡು ಬಂದಿತು
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಕೆಟಿ.ಕುಮಾರಸ್ವಾಮಿ ರವರು ಬಯಲು ಸೀಮೆ ಅಭಿವೃದ್ದಿಗೆ ಕಂಕಣ ಬದ್ದನಾಗಿದ್ದೆನೆ ಕಳೆದ ಹತ್ತು ವರ್ಷಗಳಲ್ಲಿ ಈ ಹಿಂದೆ ಆಳ್ಬಿಕೆ ಮಾಡಿದ ಹಲವು ಅಭಿವೃದ್ದಿ ಮಾಡದೆ ಉದ್ಯೋಗ ನೀಡದೆ ಜನರನ್ನು ನಿರುದ್ಯೋಗಿಗಳಾಗಿ ಮಾಡಿದ್ದರೆ ಕೇವಲ ಕಮಿಷನ್ ಪಡೆಯುವ ಮೂಲಕ ಅವರ ಭದ್ರವಾಗಿದ್ದಾರೆ ಇನ್ನೂ ಬೆಂಗಳೂರು ತುಮಕೂರು ಮೂಲದ ಹೊರ ಅಭ್ಯರ್ಥಿಳಿಗೆ ಕ್ಷೇತ್ರದ ಜನರು ಮಣೆ ಹಾಕುವುದಿಲ್ಲ ಆದ್ದರಿಂದ ಈ ಬಾರಿ ಸುಮಾರು 10 ಸಾವಿರ ಮತಗಳ ಅಂತರದಿAದ ಗೆಲುವ ಪಡೆಯುತ್ತೆನೆ ಎಂದರು.

Namma Challakere Local News
error: Content is protected !!