ಚಳ್ಳಕೆರೆ : ಚಳ್ಳಕೆರೆ ನಗರದ ಜಿ.ಟಿ.ಟಿ.ಸಿ. ಕಾಲೇಜಿನ ಮುಖ್ಯದ್ವಾರ ಮತ್ತು ಕಾಂಪೌAಡ್ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಸ್ಥಳೀಯ ಕ್ಷೆತ್ರದ ಶಾಸಕ ಟಿ.ರಘುಮೂರ್ತಿ ಪಾಲ್ಗೊಂಡು ಪೂಜೆ ಸಲ್ಲಿಸಿದರು.
ಸರ್ಕಾರಿ ಕೌಶಲ್ಯ ಅಭಿವೃದ್ಧಿ ಮತ್ತು ತಾಂತ್ರಿಕ ಕಾಲೇಜಿನ ವಿಶೇಷ ಅಭಿವೃದ್ಧಿ ಅನುದಾನದಡಿ ಮೀಸಲಿಟ್ಟಿರುವ ಸು.40.ಲಕ್ಷ ರೂ.ಗಳ ಅನುದಾನದಲ್ಲಿ ಮುಖ್ಯದ್ವಾರ ಮತ್ತು ಕಾಂಪೌAಡ್ ನಿರ್ಮಾಣದ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿ ಬಯಲು ಸೀಮೆಯ ಹಣೆ ಪಟ್ಟಿ ಎಂಬುದು ಕಳಚಿ ಈಗ ವಿಜ್ಞಾನ ನಗರಿಯಾಗಿ ಹೊರಹೊಮ್ಮಿದೆ, ಅದ್ದರಿಂದ ಅದಕೆ ತಕ್ಕಂತೆ ಪೂರಕವಾದ ಶಿಕ್ಷಣಕ್ಕೆ ಹಾಗೂ ಉದ್ಯೋಗಕ್ಕೆ ನೆರವಾಗಲೆಂದು ಜಿಟಿಟಿಸಿ ಕೇಂದ್ರ ಚಳ್ಳಕೆರೆ ನಗರದಲ್ಲಿ ಸ್ಥಾಪಿತವಾಗಿ ಸ್ಥಳೀಯ ಯುವಕರಿಗೆ ನೆರವಾಗಲಿದೆ ಅದ್ದರಿಂದ ಹೆಚ್ಚಿನದಾಗಿ ಉದ್ಯೋಗ ಪಡೆಯಲು ಇದು ಸಹಕಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ತಿಪ್ಪೇಸ್ವಾಮಿ, ನಗರಸಭೆ ಅಧ್ಯಕ್ಷ ಸುಮಕ್ಕ ಅಂಜನಪ್ಪ, ನಗರಸಭೆ ಸದಸ್ಯೆ ಕವಿತಾ ಬೋರಯ್ಯ, ಸುಜಾತ ಪ್ರಹ್ಲಾದ್, ರಮೇಶ್ ಗೌಡ, ರಾಘವೇಂದ್ರ, ಮುಖಂಡರುಗಳಾದ ಪ್ರಹ್ಲಾದ್, ವೀರಭದ್ರಪ್ಪ, ಮುಖಂಡರು, ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Namma Challakere Local News
error: Content is protected !!