ಚಳ್ಳಕೆರೆ : ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೂ ಕೂಡ ಸರ್ಕಾರದಿಂದ ಕೂಡ ಮಾಡುವಂತಹ ಸೌಲಭ್ಯಗಳನ್ನು ಪರಿಪೂರ್ಣವಾಗಿ ತಲುಪಿಸಿದಾಗ ಮಾತ್ರ ಅಧಿಕಾರಿ ಮತ್ತು ನೌಕರರ ಸೇವೆ ಸಾರ್ಥಕ ವೆನಿಸುತ್ತದೆ ಎಂದು ತಹಶಿಲ್ದಾರ ಎನ್. ರಘುಮೂರ್ತಿ ಹೇಳಿದರು

ಅವರು ಇಂದು ನಾಯಕನಹಟ್ಟಿ ಪಟ್ಟಣದಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಮಾಜದಲ್ಲಿ ಇನ್ನೂ ಅದೆಷ್ಟು ಜನರು ಬೇರೆ ಬೇರೆ ಕಾರಣಗಳಿಂದ ಸರ್ಕಾರಿ ಸೌಲಭ್ಯವನ್ನು ಪಡೆದಿಲ್ಲ ಇಂತಹ ವ್ಯಕ್ತಿಗಳನ್ನು ಗುರುತಿಸುವ ಕಾರ್ಯ ಅಧಿಕಾರಿ ನೌಕರರಿಂದ ಮಾತ್ರವಲ್ಲದೆ ಚುನಾಯಿತ ಪ್ರತಿನಿಧಿಗಳು ಸಂಘ ಸಂಸ್ಥೆಯವರು ಮತ್ತು ವಿದ್ಯಾವಂತರಿಂದಲೂ ಆಗಬೇಕಿದೆ ಇಂಥ ಕಾರ್ಯಗಳನ್ನು ಮಾಡಿದಾಗ ಮಾತ್ರ ಸಮಾಜದ ಋಣವನ್ನು ನಾವು ತೀರಿಸಿದಂತೆ ಆಗುತ್ತದೆ .

ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾವಂತರು ಬಡವರು ಮತ್ತು ಅಸಹಾಯಕರು ಇರುವುದರಿಂದ ಇಂತಹ ಕಾರ್ಯಗಳನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಸಾರಿಗೆ ಸಚಿವರು ಸೂಚಿಸಿದ್ದು ಯಾವುದೇ ಕಾರಣಕ್ಕೂ ಸೌಲಭ್ಯವಂಚಿತರು ತಾಲೂಕಿನಲ್ಲಿ ಉಳಿಯದ ಹಾಗೆ ಮಾಡುವ ಕೈ ಕಾರ್ಯವನ್ನು ತಾಲೂಕು ಆಡಳಿತ ಕೈಗೊಂಡಿದೆ.

ಇದಕ್ಕೆ ಎಲ್ಲಾ ತಾಲೂಕಿನ ಪ್ರತಿನಿಧಿಗಳು ಹಾಗೂ ಗೌರವ ನಾಗರಿಕರು ಸಹಕಾರ ಮುಖ್ಯವಾಗುತ್ತದೆ, ಈ ಭಾಗದಲ್ಲಿ ಈಗಾಗಲೇ ರೂ.1000 ಪದವೀಧರರಿಗೆ ಉಚಿತವಾಗಿ ಆನ್ಲೈನ್ ಸ್ಪರ್ಧಾತ್ಮಕ ಪರೀಕ್ಷೆಯ ಪಠ್ಯವನ್ನು ಪ್ರಯೋಜಿಕತ್ವದ ಮುಖಾಂತರ ಸಚಿವರು ಮತ್ತು ಜಿಲ್ಲಾಧಿಕಾರಿಗಳ ಆಶಯದಂತೆ ಒದಗಿಸಲಾಗಿದೆ ಮುಂದೆಯೂ ಕೂಡ ಇಂಥ ಕಾರ್ಯಗಳು ತಾಲೂಕು ಆಡಳಿತದಿಂದ ನಡೆಯುತ್ತವೆ ಗೌರವಾನ್ವಿತ ನಾಗರೀಕರು ಈ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು

ಈ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಸ್ವಾಮಿ ಮಾತನಾಡಿ ಚಳ್ಳಕೆರೆ ತಾಲೂಕಿನ ಕಂದಾಯ ಇಲಾಖೆಯ ಅಧಿಕಾರಿ ನೌಕರರ ಬದ್ಧತೆಯಿಂದ ಮತ್ತು ಕ್ರೀಯಾ ತ್ಮಯಾತ್ಮಕ ಕೆಲಸದಿಂದ ಚಿತ್ರದುರ್ಗಾ ಜಿಲ್ಲೆ ಮತ್ತು ಚಳ್ಳಕೆರೆ ತಾಲ್ಲೂಕು ರಾಜ್ಯದಲ್ಲಿ 3ನೇ ರಾಂಕ್ ಪಡೆದಿದೆ ಇಂತಹ ಇನ್ನೂ ಹೆಚ್ಚು ಕಾರ್ಯಗಳು ತಾಲೂಕಿನ ಕಂದಾಯ ಇಲಾಖೆಯಿಂದ ನಡೆಯಲಿ ಎಲ್ಲ ಸಾರ್ವಜನಿಕರು ಇದರ ಸದು ಪಯೋಗ ಪಡೆಯಬೇಕೆಂದು ವಿನಂತಿಸಿದರು ಕಾರ್ಯಕ್ರಮದಲ್ಲಿ ಒಟ್ಟು 50ಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಯಿತು

ಕಾರ್ಯಕ್ರಮದಲ್ಲಿ ನಾಯಕನಹಟ್ಟಿ ನಾಡಕಚೇರಿ ಉಪತಾಶಿಲ್ದಾರ್ ಸುಧಾ, ರಾಜಸ್ವನಿರೀಕ್ಷಕ ಚೇತನ್ ಕುಮಾರ್, ಗ್ರಾಮ ಲೆಕ್ಕಧಿಕಾರಿಗಳಾದ ಹರೀಶ್ ಉಮಾ ಮುಂತಾದವರು ಉಪಸ್ಥಿತರಿದ್ದರು

Namma Challakere Local News
error: Content is protected !!