ಚಳ್ಳಕೆರೆ :
ಚಿತ್ರದುರ್ಗ: ಕೃಷಿ ಇಲಾಖೆ ವಿರುದ್ಧ ಪ್ರತಿಭಟಿಸಿದ ರೈತರು
ಕೃಷಿಇಲಾಖೆಯಿಂದ ರೈತರಿಗೆ ವಿತರಣೆ ಮಾಡಿರುವ ತೊಗರಿ ಬಹಳ
ಬೀಜಗಳು ಕಳಪೆಯಾಗಿವೆ. ಇದಕ್ಕೆ ಯಾರು ಹೊಣೆ ಎಂದು ಕೃಷಿ
ಇಲಾಖೆ ವಿರುದ್ಧ ರೈತರು ಇಂದು ಆಕ್ರೋಶ ವ್ಯಕ್ತಪಡಿಸಿದರು.
ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಬಳಿಯಿಂದ ಪ್ರತಿಭಟನೆ ನಡೆಸಿ
ಮಾತಾಡಿದ ರೈತ ಮುಖಂಡ ಸ್ವಾಮಿ, ಇಷ್ಟು ದಿನಗಳು ಬೀಜಗಳ
ಕಂಪನಿಗಳು ಕಳಪೆ ಬೀಜ ಕೊಡುತ್ತಿದ್ದರು, ಆದರೆ ಈಗ ಕೃಷಿ
ಇಲಾಖೆಯೇ ಕೊಟ್ಟಿದ್ದು, ಬೇಲಿಯೇ ಎದ್ದು ಹೊಲ ಮೇಯ್ದಂತೆ
ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

