ಚಳ್ಳಕೆರೆ :
ಚಿತ್ರದುರ್ಗ: ಸುಳ್ಳು ವದಂತಿಗಳಿಗೆ ಕಣ್ಣೀರಿಟ್ಟ
ರೇಣುಕಾಸ್ವಾಮಿ ತಂದೆ
ರೇಣುಕಾ ಸ್ವಾಮಿ ಕೊಲೆ ಆರೋಪಿ ದರ್ಶನ್ ಅವರಿಂದ
ಹಣವನ್ನು ಪಡೆದಿಲ್ಲ, ಆದರೂ ಸುದ್ದಿ ವದಂತಿಗಳು ಹರಡುತ್ತಿವೆ
ಎಂದು ರೇಣುಕಾಸ್ವಾಮಿ ತಂದೆ ಶಿವನಗೌಡ್ರು ಕಣ್ಣೀರಿಟ್ಟರು.
ಚಿತ್ರದುರ್ಗದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತಾಡಿ, ನಾವು
ಯಾರನ್ನು ಭೇಟಿಮಾಡಿಲ್ಲ, ನಮ್ಮನ್ನು ಯಾರೂ ಭೇಟಿ ಮಾಡಿಲ್ಲ.
ಇಂತಹ ಸುಳ್ಳು ಸುದ್ದಿಯಿಂದ ನಮಗೆ ಬಹಳಷ್ಟು ನೋವು ತಂದಿದೆ.
ನಾವು ಯಾವ ಕಾರನ್ನು ಬುಕ್ ಮಾಡಿಲ್ಲ. ನಮಗೆ ಸ್ಕೂಟರ್ ರಿಪೇರಿ
ಮಾಡಲು ದುಡ್ಡಿಲ್ಲ. ಇಂತಹ ಸ್ಥುತಿಯಲ್ಲಿದ್ದೇವೆಂದು ಹೇಳಿದರು.

