ಚಳ್ಳಕೆರೆ :
ಬಳ್ಳಾರಿ ಬೆಳಗಾಯಿತು ದಿನಪತ್ರಿಕೆ ಚಳ್ಳಕೆರೆ ವರದಿಗಾ ರರಾಗಿ ಸೇವೆಸಲ್ಲಿಸಿದ ಟಿಜೆ ತಿಪ್ಪೇಸ್ವಾಮಿ ಗೆ ಸನ್ಮಾನ
ಚಳ್ಳಕೆರೆ ವಾಲ್ಮೀಕಿ ಜಯಂತೋತ್ಸವ ಸಮಿತಿಯಲ್ಲಿ 15 ವರ್ಷ ಪ್ರಧಾನ ಕಾರ್ಯದರ್ಶಿಯಾಗಿ 2ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಹಾಗೂ ಚಳ್ಳಕೆರೆ ನಾಗರೀಕರ ಹೋರಾಟ ಸಮಿತಿ ಅಧ್ಯಕ್ಷರಾಗಿ ನಾಗರಿಕರ ಮೂಲಭೂತ ಸಮಸ್ಯೆ ಹಾಗೂ ಶೋಷಿತರ,ದಲಿತರ ಪರವಾಗಿ ಹೋರಾಟ ಮಾಡಿದ ಕೀರ್ತಿ, ಪತ್ರಕರ್ತರಾಗಿ,ಲೇಖಕರಾಗಿ,ಕನ್ನಡ ಪರ ಹೋರಾಟಗಳು ಸೇರಿದಂತೆ.ಕನ್ನಡ ಸಾಹಿತ್ಯಕ್ಕೆ, ಎರಡು ಕವನ ಸಂಕಲನಗಳ ಕೊಡಿಗೆ. ಪ್ರಕಟಿತ ಗೊಳ್ಳಲು ಸಿದ್ದ ವಾದ ಕೆಲವು ಕೃತಿಗಳು, ಪ್ರಸ್ತುತ ಚಳ್ಳಕೆರೆ ತಾಲ್ಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ರಾಗಿ ಕಾರ್ಯ ನಿರ್ವಹಿಸುತ್ತಿದ್ದ ಟಿಜೆ ತಿಪ್ಪೇಸ್ವಾಮಿ ಜಿಲ್ಲಾ ಮಟ್ಟದ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತಕ್ಕೆ ಭಾಜನರಾಗಿ ಅಭಿನಂದನೆ ಸ್ವೀಕರಿಸಿದ್ದಾರೆ.
ವೈವಾಹಿಕ ಜೀವನಕ್ಕೆ 1991ರ ಲ್ಲಿಕೆ.ಎಲ್.ಗೀತಾoಜ ಲಿ ಅವರೊಂದಿಗೆ ವಿವಾಹ,ಇವರಿಗೆ ಒಬ್ಬ ಪುತ್ರಿ ಹಾಗೂ ಮೊಮ್ಮಗಳು.ಇವರು ಪ್ರಶಸ್ತಿಗೆ ಆಯ್ಕೆ ಯಾದ್ದರಿಂದ ಚಿತ್ರದುರ್ಗನಾಯಕ ಸಮಾಜ ಹಾಗೂ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಮತ್ತು ಚಿತ್ರನಾಯಕರ ವೇದಿಕೆ ರಾಜ್ಯ ಸಂಘದ ರಾಜ್ಯ ಅಧ್ಯಕ್ಷ ಕೆ.ಟಿ.ಪ್ರಶಾಂತ್ ಸೇರಿ ದಂತೆ ಜಿಲ್ಲೆಯ ಕನ್ನಡ ಪರ ಸಂಘಟನೆಗಳು ಮತ್ತು ವಾಲ್ಮೀಕಿ ನಾಯಕ ಸಮಾಜ ಶುಭಕೋರಿದ್ದಾರೆ.

