ಚಳ್ಳಕೆರೆ ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪ ಹೊಸಪೇಟೆ ನಗರಸಭೆಗೆ ವರ್ಗಾವಣೆ
ಚಳ್ಳಕೆರೆ : ಕಳೆದ ಹಲವು ವರ್ಷಗಳ ಕಾಲ ಭ್ರಷ್ಟರಿಗೆ ಹಾಗೂ ಮಧ್ಯಮರ್ತಿಗಳಿಗೆ ಸಿಂಹ ಸ್ವಪ್ನವಾಗಿದ್ದ ಪೌರಾಯುಕ್ತ ಸಿ.ಚಂದ್ರಪ್ಪ ನ ಮೇಲೆ ಹಲವು ಸಭೆಗಳಲ್ಲಿ ದೂರುಗಳ ಸುರಿಮಳೆ ಗೈಯುತ್ತಿದ್ದ ಹಲವರಿಗೆ ಕೊಂಚ ನೀರಾಳವಾಗಿದೆ.
ಚಳ್ಳಕೆರೆ ನಗರದಲ್ಲಿ
ಖಡಕ್ ಅಧಿಕಾರಿಯಾಗಿ ಹಲವು ವರ್ಷಗಳಕಾಲ ಚಳ್ಳಕೆರೆ ನಗರಸಭೆಯಲ್ಲಿ ಪೌರಾಯುಕ್ತರಾಗಿ ಸೇವೆ ಸಲ್ಲಿಸಿ ಪೌರಾಯುಕ್ತ ಸಿ.ಚಂದ್ರಪ್ಪ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಹೊಸಪೇಟೆ ನಗರಸಭೆಯಲ್ಲಿ ಸೇವೆ ಸಲ್ಲಿಸಿದ್ದರು.
ಆದರೆ ಅತೀ ಕಡಿಮೆ ಅವಧಿಯಲ್ಲಿ ಉತ್ತಮ ಸೇವೆಯನ್ನು ಪರಿಗಣಿಸಿದ ಅಲ್ಲಿನ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಖಾಲಿಯಿದ್ದ ಪೌರಾಯುಕ್ತರ ಹುದ್ದೆಗೆ ಬರಲೇಬೇಕು ಎಂದು ಆಹ್ವಾನಿಸಿದ ಹಿನ್ನೆಲೆಯಲ್ಲಿ ಹಾಗೂ ಸರಕಾರವೇ ವರ್ಗಾವಣೆ ಅಡಿಯಲ್ಲಿ ಈ ಖಡಕ್ ಅಧಿಕಾರಿಯನ್ನು ಚಳ್ಳಕೆರೆ ನಗರಸಭೆ ಯಿಂದ ಹೊಸಪೇಟೆ ನಗರಸಭೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಅದರಂತೆ ಇಂದು ಜು.15 ರಂದು ಚಳ್ಳಕೆರೆ ನಗರಸಭೆಯಿಂದ ಬಿಡುಗಡೆಯಾಗುವ ಸಾಧ್ಯತೆಗಳು ಇವೆ.
ಇನ್ನೂ ಚಳ್ಳಕೆರೆ ನಗರಸಭೆಯಲ್ಲಿ ಪೌರಾಯುಕ್ತರ
ಖಾಲಿಯಾದ ಸ್ಥಾನಕ್ಕೆ ಕೆಆರ್ ಪೇಟೆ ಮೂಲದ ಕೆಜಿಎಪ್ ನಲ್ಲಿ ಖಡಕ್ ಅಧಿಕಾರಿಯಾಗಿ ಸುಮಾರು ಬಾರಿ ವರ್ಗಾವಣೆ ಭಾಗ್ಯಗಳನ್ನು ಹೊತ್ತಿರುವ ಜಗದೀಶ್ ರೆಡ್ಡಿ ಇವರು ಈ ಸ್ಥಾನಕ್ಕೆ ಬರುವ ಸಾಧ್ಯತೆಗಳು ದಟ್ಟವಾಗಿ ಹಬ್ಬಿವೆ.
ಇನ್ನೂ ಜುಲೈ 15 ರ ಇಂದು ಸರಕಾರ ವರ್ಗಾವಣೆ ನೀಡಿದರೆ, ಅಧಿಕಾರ ಅವಹಿಸಲಿದ್ದಾರೆ ಇಲ್ಲವಾದರೆ ಅದಿವೇಷನ ಮುಗಿಯವರೆಗೂ ಖಾಲಿ ಹುದ್ದೆ ಇರಲಿದೆ ಚಳ್ಳಕೆರೆ ನಗರಸಭೆಯಲ್ಲಿ ಎಂದು ಕೆಲವರ ಅಭಿಪ್ರಾಯವಾಗಿದೆ.