ಚಳ್ಳಕೆರೆ ನ್ಯೂಸ್ :

ಪೌರಾಯುಕ್ತರನ್ನು ಅಮಾನತ್ತು ಮಾಡಬೇಕು

ಚಿತ್ರದುರ್ಗ ನಗರಸಭಾ ಕೌನ್ಸಿಲ್ ಸಭಾಂಗಣದಲ್ಲಿ
ಸಂಬಂಧಪಡದವರನ್ನು ಕೂರಿಸಿಕೊಂಡು, ಅಕ್ರಮವಾಗಿ ಪ್ರಗತಿ
ಪರಿಶೀಲನೆ ಸಭೆ ನೆಡೆಸಿದ, ಪೌರಾಯುಕ್ತರ ಮೇಲೆ ಕಾನೂನು ಕ್ರಮ
ಕೈಗೊಳ್ಳುವಂತೆ ನಗರಸಭೆಯ ಹಲವು ಸದಸ್ಯರು ಜಿಲ್ಲಾಡಳಿತಕ್ಕೆ
ಮನವಿ ಮಾಡಿದ್ದಾರೆ.

ಜೂ. 24 ರಂದು ನೆಡೆದ ಸಭೆಯಲ್ಲಿ ಅಭಿವೃದ್ಧಿ
ವಿಚಾರಗಳ ಬಗ್ಗೆ ಕಾನೂನು ಬಾಹಿರ ಸಭೆ ನಡೆಸಿದ್ದಾರೆ.

ಸರ್ಕಾರಿ
ಶಿಷ್ಠಚಾರ ಗಾಳಿಗೆ ತೂರಿದ್ದಾರೆ. ಆದ್ದರಿಂದ ಪೌರಾಯುಕ್ತರ ಮೇಲೆ
ಕಾನೂನು ಕ್ರಮ ಜರುಗಿಸಿ, ಅಮಾನತ್ತು ಮಾಡಲು ಆಗ್ರಹಿಸಿದರು.

Namma Challakere Local News
error: Content is protected !!