ಚಳ್ಳಕೆರೆ ನ್ಯೂಸ್ :
ಕೋಟೆ ನಾಡಿನಲ್ಲಿ ಮದಕರಿನಾಯಕರ ಪುಣ್ಯ ಸ್ಮರಣೆ
ಆಚರಣೆ
ಚಿತ್ರದುರ್ಗ ಪಾಳೇಗಾರರ ದೊರೆ ಮದಕರಿ ನಾಯಕರ ಪುಣ್ಯ
ಸ್ಮರಣೆಯನ್ನು ಚಿತ್ರದುರ್ಗದಲ್ಲಿ ನಡೆಸಲಾಯಿತು.
ನಾಯಕ
ಸಮಾಜ ಹಾಗೂ ಮದಕರಿ ಅಭಿಮಾನಿ ಬಳಗದಿಂದ ಕಾರ್ಯಕ್ರಮ
ಆಯೋಜಿಸಲಾಗಿತ್ತು.
ಮದಕರಿ ನಾಯಕ ಸರ್ಕಲ್ ನಲ್ಲಿರುವ
ಮದಕರಿ ನಾಯಕ ಕಂಚಿನ ಪ್ರತಿಮೆಗೆ ಹಾಗೂ ಭಾವಚಿತ್ರಕ್ಕೆ
ಚಿತ್ರದುರ್ಗ ಶಾಸಕ ಕೆ ಸಿ ವೀರೇಂದ್ರ ಪಪ್ಪಿ, ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹಾಗೂ
ನಾಯಕ ಸಮಾಜದ
ಬಂಧುಗಳು ಹಾಗೂ ಮದಕರಿ ಅಭಿಮಾನಿ ಬಳಗದ
ಕಾರ್ಯಕರ್ತರು ಪುಷ್ಪಾರ್ಚನೆ ಮಾಡಿದರು.