ಚಳ್ಳಕೆರೆ ನ್ಯೂಸ್ :
ಅಬಕಾರಿ ಉಪ ಆಯುಕ್ತರು, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ರವರ ನಿರ್ದೇಶನ ಹಾಗೂ ಅಬಕಾರಿ ಉಪ ಅಧೀಕ್ಷಕರು, ಹಿರಿಯೂರು ಉಪ ವಿಭಾಗ ಮತ್ತು ಅಬಕಾರಿ ನಿರೀಕ್ಷಕರು ಚಳ್ಳಕೆರೆ ವಲಯ ರವರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ನಿರೀಕ್ಷಕರು1 ಮತ್ತು 2 ಚಳ್ಳಕೆರೆ ವಲಯ ಇವರು ಮತ್ತು ಚಳ್ಳಕೆರೆ ವಲಯ ಸಿಬ್ಬಂದಿಯೊಂದಿಗೆ 2024 ರ ಲೋಕಸಭಾ ಚುನಾವಣೆಯ ಪ್ರಯುಕ್ತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಚಳ್ಳಕೆರೆ ನಗರದಲ್ಲಿ ಗಸ್ತು ಕಾರ್ಯ ನಿರ್ವಹಿಸುತ್ತಿರುವಾಗ ಬಂದ ಖಚಿತ ಮಾಹಿತಿ ಮೇರೆಗೆ ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯ ಎ.ಪಿ.ಎಂ.ಸಿ ಮಾರುಕಟ್ಟೆ ಎದುರು ಬೆಳಿಗ್ಗೆ 11.00 ಗಂಟೆ ಸಮಯದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ದ್ವಿ ಚಕ್ರ ವಾಹನದಲ್ಲಿ ದಯಾನಂದ .ಟಿ ಬಿನ್ ತಮ್ಮಣ್ಣ ದೊಡ್ಡೇರಿ ಗ್ರಾಮದ ಎಂಬಾತನು ಒಂದು ಚೀಲದಲ್ಲಿ 82 ಟೆಟ್ರಾ ಪ್ಯಾಕ್ ಒಟ್ಟು 7.380ಲೀಟರ್ ಅಕ್ರಮ ಮದ್ಯವನ್ನು ಸಾಗಿಸುತ್ತಿದ್ದು ಎನ್ನಲಾಗಿದೆ.

ಓರ್ವ ವ್ಯಕ್ತಿಯನ್ನು ಹಾಗೂ ದ್ವಿಚಕ್ರ ವಾಹನವನ್ನು ಜಪ್ತುಪಡಿಸಿಕೊಂಡು ಪ್ರಕರಣ ದಾಖಲಿಸಿದೆ.

ಒಟ್ಟು ಮದ್ಯದ ಮೌಲ್ಯ 3280 ರೂ
ದ್ವಿಚಕ್ರ ವಾಹನದ ಮೌಲ್ಯ 65,000ರೂ
ಒಟ್ಟಾರೆ 68,280 ರೂ ಆಗಿರುತ್ತದೆ,

ಇದೇ ಸಂಧರ್ಭದಲ್ಲಿ ದಾಳಿಯಲ್ಲಿದ್ದ ಅಬಕಾರಿ ನಿರೀಕ್ಷಕರಾದ ಸಿ.ನಾಗರಾಜ್, ಅಬಕಾರಿ ಉಪ ನೀರೀಕ್ಷಕರಾದ ಡಿಟಿ.ತಿಪ್ಪಯ್ಯ, ರೇಖಾ, ಮುಖ್ಯ ಪೇದೆ ನಾಗರಾಜ್, ಸೋಮಶೇಖರ್, ಮಂಜುಳಾ ಇತರರು ಇದ್ದರು‌

Namma Challakere Local News
error: Content is protected !!