ಚಿತ್ರದುರ್ಗ : ಚಿತ್ರದುರ್ಗ ಲೋಕಸಭಾ ಕ್ಷೇತ್ರದ
ಚುನಾವಣಾ ಸಂಬಂಧ ಈಗಾಗಲೇ ಅಧಿಸೂಚನೆ
ಹೊರಡಿಸಲಾಗಿದ್ದು,

ಮಾರ್ಚ್ 30ರಂದು ಒಬ್ಬ ಅಭ್ಯರ್ಥಿ
ನಾಮಪತ್ರ ಸಲ್ಲಿಸಿದ್ದಾರೆ.

ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ
(ಕಮ್ಯೂನಿಸ್ಟ್) ಪಕ್ಷದ ಅಭ್ಯರ್ಥಿಯಾಗಿ ಸುಜಾತ ಡಿ.ಅವರು
ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಅವರಿಗೆ
ನಾಮಪತ್ರ ಸಲ್ಲಿಸಿದರು.

ಮಾರ್ಚ್ 28 ರಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿದ್ದು,
ಸಾರ್ವತ್ರಿಕ ರಜಾದಿನ ಹೊರತುಪಡಿಸಿ, ಪ್ರತಿ ದಿನ ಬೆಳಿಗ್ಗೆ 11
ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ
ಸ್ವೀಕಾರ ಮಾಡಲಾಗುತ್ತದೆ.

ಏಪ್ರಿಲ್ 04 ನಾಮಪತ್ರ ಸಲ್ಲಿಕೆಗೆ
ಕೊನೆಯ ದಿನವಾಗಿದೆ.

Namma Challakere Local News
error: Content is protected !!