ಚಳ್ಳಕೆರೆ :
ಅಂಬೇಡ್ಕರ್ ಅವರ ಸಮಾಜಮುಖಿ ಮತ್ತು ಅಭಿವೃದ್ಧಿಯ ಕಲ್ಪನೆಗಳು ಭಾರತೀಯರ ಊಹೆಗು ಕೂಡ ನಿಲುಕದ್ದಾಗಿತ್ತು ಎಂದು ನಿವೃತ ಕೆ ಎ ಎಸ್ ಅಧಿಕಾರಿ ಎನ್ ರವಿಮೂರ್ತಿ ಹೇಳಿದರು
ಅವರು ಗೌರಿಪುರ ಗ್ರಾಮದಲ್ಲಿ 134 ನೇ ಅಂಬೇಡ್ಕರ್ ಜಯಂತಿಯನ್ನು ಉದ್ದೇಶಿಸಿ ಮಾತನಾಡಿ ಸ್ವಾತಂತ್ರ್ಯದ ಪೂರ್ವದಲ್ಲಿ ಶೋಷಿತರಿಗೆ ಕನಸು ಕಾಣುವಂತಹ ಅವಕಾಶಗಳೇ ಕಣ್ಮರೆಯಾಗಿದ್ದವು ಇಂತಹ ಕನಸುಗಳನ್ನು ಈ ಸಮುದಾಯಗಳಿಗೆ ಬಿತ್ತಿದ್ದು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು
ಇವರು ಸಂವಿಧಾನವನ್ನು ಬರೆಯದೆ ಹೋಗಿದ್ದಲ್ಲಿ ವರುಣಾಶ್ರಮದಲ್ಲಿ ಇದ್ದಂತ ಅನಿಷ್ಟಗಳೇ ಮುಂದುವರೆದು ಆಯಾ ಕುಲ ಕಸಬುಗಳನ್ನೇ ಅವರ ಪೋಷಕರು ಮಕ್ಕಳಿಗೆ ಕಲಿಸುತ್ತಿದ್ದರು ಶೋಷಿತರಿಗೆ ಮತ್ತು ಮಹಿಳೆಯರಿಗೆ ವಿಮೋಚನೆ ಸಿಗುತ್ತಿರಲಿಲ್ಲ ಅಸಮಾನತೆ ಸತ್ತು ಹೋಗಿದ್ದ ಕಾಲದಲ್ಲಿ ಜಾತಿ ಎಂಬ ವಿಷ ವರ್ತು ಲದಲ್ಲಿ ಒತ್ತಡದಲ್ಲಿ ಈ ಸಮಾಜವನ್ನು ಬಂಧಿಸಿದ ಸಂದರ್ಭದಲ್ಲಿ ಇಂಥವರಿಗೆ ವಿಮೋಚನೆ ದಿಕ್ಕು ತೋರಿಸಿದ್ದು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಆದರ್ಶಗಳು ಸರ್ವಕಾಲಿಕವಾದದ್ದು ಇವರ ಕನಸಿನಂತೆ ಶೋಷಿತ ಸಮುದಾಯಗಳು ತಮ್ಮ ಕುಟುಂಬದ ಮಕ್ಕಳನ್ನು ದೇಶದ ಸತ್ಪ್ರಜೆಯನ್ನಾಗಿ ಮಾಡಿ ನೋವಿನಲ್ಲಿರುವವರ ಮುಖದಲ್ಲಿ ನಗುತರಿಸುವಂತ ಕೆಲಸವನ್ನು ಮಾಡಿರಿ ಎಂದು ತಮ್ಮ ತಮ್ಮ ಮಕ್ಕಳಿಗೆ ಪ್ರೇರೇಪಣೆ ನೀಡುವುದರ ct ಜೊತೆಗೆ ಉನ್ನತ ವ್ಯಾಸಂಗ ಮತ್ತು ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಳ್ಳಿ ಎಂದು ಹೇಳಿದರು ಇದೇ ಸಂದರ್ಭದಲ್ಲಿ ಅಂಬೇಡ್ಕರ್ ವಿಮೋಚನಾ ಸಂಘದ ಅಧ್ಯಕ್ಷ ಭದ್ರಣ್ಣ ಮಹಾಲಿಂಗಪ್ಪ ಚಂದ್ರಣ್ಣ ಮತ್ತೆ ತರು ಉಪಸ್ಥಿತರಿದ್ದರು

