ಚಿತ್ರದುರ್ಗ: ಮೂರು ದಿನಗಳಲ್ಲಿ ಸಂಪೂರ್ಣ ಮಾಹಿತಿ
ನೀಡಲಾಗುತ್ತದೆ
ಚಿತ್ರದುರ್ಗದ ಜಿಲ್ಲಾ ನ್ಯಾಯಾಲಯವು ಪೋಕೋ ಪ್ರಕರಣದಲ್ಲಿ
ಶ್ರೀ ಮುರುಘಾಶ್ರೀ ಅವರನ್ನು ನಿರ್ದೋಷಿ ಎಂದು ತೀರ್ಪು ನೀಡಿದೆ.
ನಿವೃತ್ತ ನ್ಯಾಯಾಧೀಶರು ವಸ್ತ್ರಮರ್, ಹಿರಿಯ ವಕೀಲ ಸಿ. ವಿ
ನಾಗೇಶ್ ಮಾರ್ಗದರ್ಶನ ಹಾಗೂ ಬಸವಕುಮಾರ ಸ್ವಾಮೀಜಿಗಳು,
ನೊಣವಿನಕೆರೆ ಅಜ್ಜಯ್ಯ ಆಶೀರ್ವಾದದೊಂದಿಗೆ ಈ ಜಯ
ಲಭಿಸಿದೆ ಎಂದು ಶ್ರೀಗಳ ಪರ ವಕೀಲ ಕೆಬಿಕೆ ಸ್ವಾಮಿ ತಿಳಿಸಿದರು.
ಬುಧವಾರ ಚಿತ್ರದುರ್ಗದಲ್ಲಿ ತೀರ್ಪಿನ ಬಳಿಕ ಮಾಧ್ಯಮಗಳೊಂದಿಗೆ
ಮಾತನಾಡಿದ ಅವರು, ಮುಂದಿನ ಮೂರು ದಿನಗಳಲ್ಲಿ ಸಂಪೂರ್ಣ
ಮಾಹಿತಿ ನೀಡುವುದಾಗಿ ಹೇಳಿದರು.

