ಚಳ್ಳಕೆರೆ :
ಹೊಳಲ್ಕೆರೆ: ಅರ್ಜಿ ವಜಾ ಗೊಳಿಸಿದ ಜಿಲ್ಲಾ
ನ್ಯಾಯಾಲಯ
ಹೊಳಲ್ಕೆರೆ ಕ್ಷೇತ್ರದ ಸಿರಿಗೆರೆ ತರಳಬಾಳು ಮಠದ ಸಂಬಂಧ
ಹಿರೆಕೆರೂರಿನ ಎಸ್ ಎಸ್ ಪಾಟೀಲ್ ಮತ್ತು ಇತರರು
ಸಲ್ಲಿಸಿದ್ದ ಮಧ್ಯಂತರ ಅರ್ಜಿ ಬುಧವಾರ ಚಿತ್ರದುರ್ಗ ಜಿಲ್ಲಾ
ನ್ಯಾಯಾಲಯ ವಜಾಗೊಳಿಸಿದೆ ಎಂದು ಮಠ ಪ್ರಕಟಣೆ ತಿಳಿಸಿದೆ.
ಟ್ರಸ್ಟ್ ಡೀಡ್ ವಿರುದ್ಧ ಮಧ್ಯಂತರ ಅರ್ಜಿ ನ್ಯಾಯಾಲಯಕ್ಕೆ
ಸಲ್ಲಿಕೆಯಾಗಿದ್ದವು. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
ಯಾರಿಗೂ ಗೊತ್ತಿಲ್ಲದೆ ಮಠದ ಟ್ರಸ್ಟ ಡೀಡ್ ನೋಂದಣಿ
ಮಾಡಿದ್ದಾರೆ. ಯಾವುದೇ ಕಾರ್ಯ ನಿರ್ವಹಣೆ ಮಾಡಬಾರದೆಂದು
ತಾತ್ಕಾಲಿಕ ತಡೆಯಾಜ್ಞೆ ಕೋರಲಾಗಿತ್ತು.

