ಚಳ್ಳಕೆರೆ :
ಚಿತ್ರದುರ್ಗ: ಪಾಕಿಸ್ತಾನಿ ಪ್ರಜೆಗಳನ್ನು ಗುರುತಿಸಿ
ಗಡಿಪಾರು ಮಾಡಿ
ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಪಾಕಿಸ್ತಾನಿ
ಪ್ರಜೆಗಳಿದ್ದರೆ, ಅವರನ್ನು ಗುರುತಿಸಿ ಗಡಿಪಾರು ಮಾಡುವಂತೆ
ಆದೇಶಿಸಿದ್ದು, ಅದರಂತೆ ರಾಜ್ಯ ಸರ್ಕಾರವು ಪಾಕಿಸ್ತಾನಿ
ಪ್ರಜೆಗಳನ್ನು ಚಿತ್ರದುರ್ಗದಲ್ಲಿ ಗುರುತಿಸಿ ಅವರನ್ನು ಗಡಿಪಾರು
ಮಾಡುವಂತೆ ಒತ್ತಾಯಿಸಿ, ಬಿಜೆಪಿ ಮುಖಂಡರು ಇಂದು ಅಪರ
ಜಿಲ್ಲಾಧಿಕಾರಿ ಬಿಟಿ ಕುಮಾರಸ್ವಾಮಿಗೆ ಮನವಿಯನ್ನು ಸಲ್ಲಿಸಿದರು.
ಕೇಂದ್ರದ ಆದೇಶದಂತೆ ರಾಜ್ಯ ಸರ್ಕಾರ ಕೆಲಸ ಮಾಡಲು
ವಿಳಂಬ ಮಾಡುತ್ತಿದೆ. ಕೂಡಲೇ ಕಾರ್ಯ ಪ್ರವೃತ್ತರಾಗಬೇಕೆಂದು
ಒತ್ತಾಯಿಸಿದರು.

