ಚಳ್ಳಕೆರೆ :
ಚಳ್ಳಕೆರೆ ತಾಲೂಕಿನ ಚೌಳೂರು ಗ್ರಾಮದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ಮತ್ತು ಶ್ರೀ ದುರ್ಗಾಂಬಿಕ ದೇವಿ ದೇವರುಗಳ ಆರತಿ ಹಾಗೂ ಮಂಡಲ ಪೂಜಾ ಕಾರ್ಯಕ್ರಮ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ಇನ್ನು ಗ್ರಾಮದ ಹದಿಹರಿಯದ ಯುವತಿಯರು ಉರುಮೆ ಹಾಗೂ ತಮಟೆ ವಾಧ್ಯಕ್ಕೆ ಹೆಜ್ಜೆ ಹಾಕುತ್ತ ಸಂಭ್ರಮಿಸಿದ್ದಾರೆ.
ಇತಿಹಾಸ ಪ್ರಸಿದ್ಧ ದೇವರುಗಳ ಆರಾಧನೆಗೆ ಸುತ್ತಲಿನ ನೂರಾರು ಗ್ರಾಮಗಳ ಭಕ್ತಾದಿಗಳು ಆಗಮಿಸಿ, ದೇವರ ಕೃಪೆಗೆ ಪಾತ್ರರಾಗಿದ್ದಾರೆ.
ಅದರಂತೆ ಯಜಮಾನರು, ಪೂಜಾರರು, ಕೋಲ್ಕಾರರು, ಶ್ರೀ ವೆಂಕಟೇಶ್ವರ ಸ್ವಾಮಿ ಮತ್ತು ಶ್ರೀ ದುರ್ಗಾಂಬಿಕ ದೇವರ ಗುಡಿಕಟ್ಟೆಗೆ ಸೇರಿದ ಚೌಳೂರು ಬಸವೇಶ್ವರ ಕಾಲೋನಿ, ಪರುಶುರಾಂಪುರ ಬೊಮ್ಮನಕುಂಟೆ, ಪುಟ್ಲಾರಲ್ಲಿ ಕೊರ್ಲಕುಂಟೆ, ಬೃಂದಾವನಳ್ಳಿ ಮತ್ತು ಭರಮಸಾಗರ ಕೋಡಿಹಳ್ಳಿ ಗ್ರಾಮಗಳ ಅಣ್ಣ-ತಮ್ಮಂದಿರು ಸರ್ಕಾರಿ ಹಾಲಿ ಮತ್ತು ನಿವೃತ್ತ ನೌಕರರು, ನೆಂಟರು ಮತ್ತು ಚೋಳೂರು ಗ್ರಾಮದ ಸಮಸ್ತ ಭಕ್ತಾದಿಗಳು ಭಾಗಿಯಾಗಿದ್ದರು.

