ಚಳ್ಳಕೆರೆ :
ಹಾಲು ಒಕ್ಕೂಟ ಶೀತಲೀಕರಣ ಕೇಂದ್ರ ಚಿತ್ರದುರ್ಗ ಜಿಲ್ಲಾ ವಿಭಾಗದಿಂದ ತಾಲೂಕು ವಾರು ಸುಮಾರು 37 ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸಂಬಂಧಪಟ್ಟ ಸಲಕರಣೆಗಳನ್ನು ಜಿಲ್ಲಾಹಾಲು ಒಕ್ಕೂಟದ ನಿರ್ದೇಶಕರುಗಳಾದ ಜಿಪಿ ರೇವಣಸಿದ್ದಪ್ಪ. ಬಿ.ಸಿ .ಸಂಜೀವ್ ಮೂರ್ತಿ. ಜಿ.ಬಿ .ಶೇಖರಪ್ಪ ಇವರುಗಳು ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಗಳಿಗೆ ವಿತರಣೆ ಮಾಡಿದರು.
ಇದೇ ಸಂಧರ್ಭದಲ್ಲಿ ಶಿಮುಲ್ ಹಾಲು ಒಕ್ಕೂಟದ ನಿರ್ದೇಶಕ ಬಿಸಿ.ಸಂಜೀವಮೂರ್ತಿ ಮಾತನಾಡಿ, ಶಿಮುಲ್ ನಿಂದ ನೀಡಿದ ಸಲಕರಣೆಗಳನ್ನು ರೈತರು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಆರ್ಥಿಕವಾಗಿ ಮುಂದೆ ಬರಬಹುದು, ಎಂದರು
ಈ ಸಂದರ್ಭದಲ್ಲಿ ಶೀತಲೀಕರಣ ಕೇಂದ್ರ ಚಿತ್ರದುರ್ಗದ ಉಪ ವ್ಯವಸ್ಥಾಪಕರಾದ ಮುಕುಂದ ನಾಯಕ್ , ಆಡಳಿತ ಮಂಡಳಿಯ ವರು ಹಾಗೂ ಉಪಸ್ಥಿತರಿದ್ದರು.

