ಚಳ್ಳಕೆರೆ :
ಮಕ್ಕಳಲ್ಲಿ ಪ್ರಾಯೋಗಿಕ ಅನುಭವದೊಂದಿಗೆ ವೈಜ್ಞಾನಿಕ ಮನೋಭಾವ ಹೆಚ್ಚಿಸುವ ದೆಸೆಯಿಂದ” ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲೂಕಿನ 214 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ILP ಸಂಸ್ಥೆ ವತಿಯಿಂದ 354 ವಿಜ್ಞಾನ ಕಿಟ್ ಗಳ ವಿತರಣೆ ಹಾಗೂ ವಿಜ್ಞಾನ ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರ
ಚಿತ್ರದುರ್ಗ, – ಇಂಡಿಯಾ ಲಿಟರೆಸಿ ಪ್ರಾಜೆಕ್ಟ್ (ILP) ಎಲೂಸಿಯಾನ್ (Ellucian) ಹೈಯರ್ ಏಜುಕೇಶನ್ ಸಿಸ್ಟಮ್ ಇಂಡಿಯಾ ಲಿಮಿಟೆಡ್, ಬೆಂಗಳೂರು ಇವರ CSR ಸಹಭಾಗಿತ್ವದಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲೂಕಿನ 214 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ILP ಸಂಸ್ಥೆ ವತಿಯಿಂದ 354 ವಿಜ್ಞಾನ ಕಿಟ್ಗಳನ್ನು ವಿತರಿಸುವುದರೊಂದಿಗೆ ಒಂದು ದಿನದ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ತಾಲೂಕಿನ ಆದರ್ಶ ಶಾಲೆಯಲ್ಲಿ ಪ್ರತ್ಯೇಕ ಇಂಡಿಯಾ ಲಿಟರೆಸಿ ಪ್ರಾಜೆಕ್ಟ್ (ILP) ಎಲೂಸಿಯಾನ್ (Ellucian) ಬೆಂಗಳೂರು ಅವರ ಸಹಯೋಗದಲ್ಲಿ ವಿಜ್ಞಾನ ಶಿಕ್ಷಕರಿಗೆ ವಿಜ್ಞಾನ ಕಿಟ್ ವಿತರಣೆ ಹಾಗೂ ತರಬೇತಿಯನ್ನು ನೀಡಲಾಯಿತು.
ಸುರೇಶ್ ಕೆ.ಎಸ್. ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಧ್ಯಕ್ಷತೆ ವಹಿಸಿಕೊಂಡು ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ತಿಪ್ಪೇಸ್ವಾಮಿ, ಪ್ರಬಾರಿ ಕ್ಷೇತ್ರ ಸಮನ್ವಯಾಧಿಕಾರಿಗಳು ಯವರು ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಐ ಎಲ್ ಪಿ ಸಂಸ್ಥೆಯ ಲತಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ. ಗ್ರಾಮೀಣ ಭಾಗ ಕಟ್ಟಕಡೆಯ ಮಗುವೂ ಕೂಡ ವೈಜ್ಞಾನಿಕ ಮನೋಭಾವ ಹೊಂದಲು, ಪ್ರಾಯೋಗಿಕ ಅನುಭವ ಬಹು ಮುಖ್ಯವಾಗಿದೆ, ರಾಷ್ಟ್ರೀಯ ವಿಜ್ಞಾನ ದಿನಾಚರಣೆಯೂ ಒಂದು ದಿನಕ್ಕೆ ಸೀಮಿತವಾಗದೇ, ನಿರಂತರ ಪಾಠಬೋಧನೆಯಲ್ಲಿ ಶಿಕ್ಷಕರು ಮಕ್ಕಳಿಗೆ ಅನುಭವ ನೀಡುವಂತಾಗಲಿ ಎಂಬ ಆಶಯದೊಂದಿಗೆ, ವೈಜ್ಞಾನಿಕ ಮನೋಭಾವ ಮಕ್ಕಳಲ್ಲಿ ಬೆಳೆಸುವುದು ನಮ್ಮನಿಮ್ಮೆಲ್ಲರ ಜವಾಬ್ದಾರಿ, ಆ ದಿಸೆಯಲ್ಲಿ ಈ ಕಾರ್ಯಕ್ರಮ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶರತ್ ಕುಮಾರ, ಭಾರ್ಗವ, ಪ್ರದೀಪ್ ಎಲೂಸಿಯಾನ್ ಸಂಸ್ಥೆಯ ಪ್ರತಿನಿಧೀಗಳು ಮಾತನಾಡಿ , ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವದ ಬೆಳವಣಿಗೆ ಮತ್ತು ಗ್ರಾಮೀಣ ಪ್ರತಿಭೆಗಳ ಆನಾವರಣವನ್ನು ಪ್ರೋತ್ಸಾಹಿಸಲು ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸದಾ ಜೊತೆಯಾಗಿರುವುದಾಗಿ ತಿಳಿಸಿದರು.
ಈ ವಿಜ್ಞಾನ ಕಿಟ್ಗಳೊಂದಿಗೆ, ವಿದ್ಯಾರ್ಥಿಗಳು ಸುಲಭವಾಗಿ 150+ ವಿಜ್ಞಾನ ಪ್ರಯೋಗಗಳನ್ನು ಮಾಡಬಹುದು ಮತ್ತು ಪ್ರಾಯೋಗಿಕ ಕಲಿಕೆಯ ಅನುಭವವನ್ನು ಪಡೆಯಬಹುದು. ಹೆಚ್ಚುವರಿಯಾಗಿ, ಈ ಉಪಕ್ರಮವು 5ನೇ ತರಗತಿಯಿಂದ 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಈ ಕಿಟ್ಗಳ ಬಳಕೆಯನ್ನು ಕಾರ್ಯಗತಗೊಳಿಸಲು ವಿಜ್ಞಾನ ಶಿಕ್ಷಕರಿಗೆ ತರಬೇತಿ ಇಂದು ನೀಡಲಾಯಿತು.
ಮುಖ್ಯ ಅತಿಥಿಗಳು :
ಅಶೋಕರೆಡ್ಡಿ ಮುಖ್ಯೋಪಾಧ್ಯಾಯರು, ಶರತ್ ಕುಮಾರ, ಹಿರಿಯ ಮ್ಯಾನೇಜರ್, ಪೆಸಿಲಿಟೀಸ್, ಎಲೂಸಿಯಾನ್ ಬೆಂಗಳೂರು.
ಭಾರ್ಗವ, ಎಲೂಸಿಯಾನ್ ಬೆಂಗಳೂರು.
ಪ್ರದೀಪ್ ಎಲೂಸಿಯಾನ್ ಬೆಂಗಳೂರು
, ಲಲಿತಾ, ಸಂಪನ್ಮೂಲ ವ್ಯಕ್ತಿ ಮತ್ತು ತರಬೇತಿಧಾರರು, ಇಂಡಿಯಾ ಲಿಟರೆಸಿ ಪ್ರಾಜೆಕ್ಟ್,
ಲೀಲಾವತಿ ಸಿ.ಎಸ್. ನೋಡಲ್ ಅಧಿಕಾರಿಗಳು ಡಯಟ್, ಚಿತ್ರದುರ್ಗ.
ಶ್ರೀ ತಿಪ್ಪೇಸ್ವಾಮಿ, ಪ್ರಬಾರಿ ಕ್ಷೇತ್ರ ಸಮನ್ವಯಾಧಿಕಾರಿಗಳು, ಚಿತ್ರದುರ್ಗ , ಶಿಕ್ಷಕರಾದ ವಿಜಯಲಕ್ಷ್ಮಿ, ಮಂಜುನಾಥ ಬೆಸ್ತರ, ಪ್ರಾಜೆಕ್ಟ್ ಮ್ಯಾನೆಜರ್, ಇಂಡಿಯಾ ಲಿಟರೆಸಿ ಪ್ರಾಜೆಕ್ಟ್,
ಐ ಎಲ್ ಪಿ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು, ತರಬೇತಿ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು.
ಇಂಡಿಯಾ ಲಿಟರಸಿ ಪ್ರಾಜೆಕ್ಟ್ ಕುರಿತಂತೆ:
ಇಂಡಿಯಾ ಲಿಟರಸಿ ಪ್ರಾಜೆಕ್ಟ್ (ILP), 2000 ಇಸವಿಯಲ್ಲಿ, ಮುಖ್ಯವಾಗಿ ದೂರದ ಗ್ರಾಮೀಣ ಬಡ ಸರ್ಕಾರಿ ಶಾಲೆಗಳ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ಭಾರತದಾದ್ಯಂತ ಶಿಕ್ಷಣ ಕ್ಷೇತ್ರದಲ್ಲಿ ಪರಿವರ್ತನೆ ತರುವ ಉದ್ದೇಶದೊಂದಿಗೆ ಸ್ಥಾಪಿತವಾಯಿತು. ಸಂಸ್ಥೆಯ ಬಹುತೇಕ ಉಪಕ್ರಮಗಳು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ, ತಾಂತ್ರಿಕ, ತಾರ್ಕಿಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಮತ್ತು 21ನೇ ಶತಮಾನಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದರ ಮೇಲೆ ಕೇಂದ್ರೀಕೃತವಾಗಿವೆ ಮತ್ತು ಅಗತ್ಯ ಔದ್ಯೋಗಿಕ ಕೌಶಲ್ಯಗಳೊಂದಿಗೆ ಅವರನ್ನು ಸಮರ್ಥಗೊಳಿಸುವುದಾಗಿದೆ.
ಸಂಸ್ಥೆಯ ಪ್ರಧಾನ ಉದ್ದೇಶ ಸರ್ಕಾರದ, ಶಾಲಾ ಪೂರ್ವ ಹಂತ ಮತ್ತು ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಮತ್ತು ನಿರಂತರಗೊಳಿಸುವ ಜೊತೆಗೆ ಗುಣಮಟ್ಟದ ಶಿಕ್ಷಣ ಎಲ್ಲರೂ ಹೊಂದುವುದನ್ನು ಖಾತ್ರಿಪಡಿಸುವುದಾಗಿದೆ. ವಿಸ್ತೃತವಾದ ಅರ್ಥೈಸುವಿಕೆಯನ್ನು ನಿಶ್ಚಿತಗೊಳಿಸುವ ನಿಟ್ಟಿನಲ್ಲಿ ನಾವು ನಾವಿನ್ಯದ ಮತ್ತು ವೈವಿಧ್ಯಮಯ ಕಲಿಕಾ ವಿಧಾನವನ್ನು ನಿರ್ಮಿಸುತ್ತಿದ್ದೇವೆ. ವಿಶೇಷವಾಗಿ ವಿದ್ಯಾರ್ಥಿಗಳನ್ನು ಅವರ ವಿಶಿಷ್ಟ ಕೌಶಲ್ಯಗಳು ಮತ್ತು ಸಾಮರ್ಥ್ಯಗಳೊಂದಿಗೆ ಸರಿಹೊಂದುವ ವೃತ್ತಿಜೀವನಕ್ಕೆ ಮಾರ್ಗದರ್ಶನ ಮಾಡುವ ಮೂಲಕ ಸಬಲಗೊಳಿಸುವ ಹಾಗೂ ಸಾಮರ್ಥ್ಯಕ್ಕೆ ಅನುಗುಣವಾಗಿ ಯಶಸ್ವಿ ಭವಿಷ್ಯಕ್ಕಾಗಿ ಅವರನ್ನು ಸಜ್ಜುಗೊಳಿಸುವ ಉದ್ದೇಶ ಹೊಂದಲಾಗಿದೆ.
ನಮ್ಮ ಕಾರ್ಯ ವಿಧಾನವು ಪರಿಣಾಮಕಾರಿ ಅನುಷ್ಠಾನ ಮತ್ತು ನಿರ್ದಿಷ್ಟ ಗುರಿಯನ್ನು ಹೊಂದಿರುವ ವಿವಿಧ ಕಾರ್ಯತಂತ್ರಗಳನ್ನು ಒಳಗೊಂಡಿದೆ. ಅದರಂತೆ ಸ್ಥಳೀಯ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಕಾರ್ಯಪ್ರವೃತ್ತರಾಗುವುದು, ತಳಮಟ್ಟದಲ್ಲಿ ಪ್ರಾಯೋಗಿಕ ಉಪಕ್ರಮಗಳನ್ನು ಉತ್ತೇಜಿಸುವುದು, ಇದಲ್ಲದೆ, ವಿವಿಧ ಎನ್ಜಿಒಗಳು, ಸಿಎಸ್ಆರ್ಗಳು ಮತ್ತು ಫೌಂಡೇಶನ್ಗಳೊಂದಿಗಿನ ಪಾಲುದಾರಿಕೆಗಳ ಮೂಲಕ ನಮ್ಮ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸುವುದು ಮತ್ತು ಪರಿಣಾಮವನ್ನು ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ. ಸ್ವಯಂಸೇವೆಯ ಮೌಲ್ಯವನ್ನು ಒತ್ತಿ ಹೇಳುತ್ತಾ, ವ್ಯಕ್ತಿಗಳಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸುವುದನ್ನು ನಾವು ಪ್ರೋತ್ಸಾಹಿಸುತ್ತೇವೆ. ಬಹುಮುಖ್ಯವಾಗಿ, ಸಮುದಾಯದ ಸುಸ್ಥಿರತೆಗಾಗಿ ನಿರಂತರ ಬದಲಾವಣೆ ಮತ್ತು ಸಬಲೀಕರಣವನ್ನು ಉತ್ತೇಜಿಸುಸುವ ಕುರಿತಂತೆ ಸ್ಥಳೀಯ ಮಟ್ಟದಲ್ಲಿ ಸಮುದಾಯದ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳುತ್ತೇವೆ.
ಎಲ್ಯೂಷಿಯನ್ ಸಂಸ್ಥೆ
ಎಲ್ಯೂಷಿಯನ್ ಇಂಡಿಯಾ ಎಲ್ಯೂಷಿಯನ್ಗೆ ಪ್ರಮುಖ ಅಭಿವೃದ್ಧಿ ಮತ್ತು ನಾವೀನ್ಯತೆ ಕೇಂದ್ರವಾಗಿದ್ದು, ಅದರ ಜಾಗತಿಕ ಉನ್ನತ ಶಿಕ್ಷಣ ತಂತ್ರಜ್ಞಾನ ಪರಿಹಾರಗಳನ್ನು ಬೆಂಬಲಿಸುತ್ತದೆ. ಬೆಂಗಳೂರಿನಲ್ಲಿ ನೆಲೆಗೊಂಡಿರುವ ಎಲ್ಯೂಷಿಯನ್ ಇಂಡಿಯಾ ಸಾಫ್ಟ್ವೇರ್ ಅಭಿವೃದ್ಧಿ, ಕ್ಲೌಡ್ ಸೇವೆಗಳು, ಗ್ರಾಹಕ ಬೆಂಬಲ ಮತ್ತು ಉತ್ಪನ್ನ ನಾವೀನ್ಯತೆಗಳ ಮೇಲೆ ಕೇಂದ್ರೀಕರಿಸುತ್ತದೆ. ವಿಶ್ವವಿದ್ಯಾನಿಲಯಗಳು ಕಾರ್ಯಾಚರಣೆಗಳನ್ನು ಸುಗಮಗೊಳಿಸಲು ಸಹಾಯ ಮಾಡುವ ಬ್ಯಾನರ್, ಸಹೋದ್ಯೋಗಿ ಮತ್ತು ಇತರ SaaS-ಆಧಾರಿತ ಪರಿಹಾರಗಳಂತಹ ಉತ್ಪನ್ನಗಳನ್ನು ವರ್ಧಿಸುವಲ್ಲಿ ಇದು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್ ರೂಪಾಂತರವನ್ನು ಹೆಚ್ಚಿಸಲು ಭಾರತ ತಂಡವು ಜಾಗತಿಕ ಪ್ರತಿರೂಪಗಳೊಂದಿಗೆ ನಿಕಟವಾಗಿ ಸಹಕರಿಸುತ್ತದೆ.
2024-2025 ರ ಆರ್ಥಿಕ ವರ್ಷದಲ್ಲಿ, ಎಲ್ಯೂಷಿಯನ್ ಇಂಡಿಯಾ ಹಲವಾರು CSR ಯೋಜನೆಗಳನ್ನು ಅನುಮೋದಿಸಿದೆ, ಅವುಗಳೆಂದರೆ:
ಚಿತ್ರದುರ್ಗಕ್ಕೆ STEM ಕಿಟ್ಗಳು – 180 ಶಾಲೆಗಳು
ಹಿಂದುಳಿದವರಿಗೆ 20,000+ ಊಟ
ಕೋಲಾರ ಜಿಲ್ಲೆಯ ಸರ್ಕಾರಿ ಶಾಲೆಗಳ 2000+ ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪುಸ್ತಕಗಳು, ಲೇಖನ ಸಾಮಗ್ರಿಗಳು, ಸಮವಸ್ತ್ರಗಳು
. ಟಿ ನರಸೀಪುರ ಜಿಲ್ಲೆಯ ತಲಕಾಡಿನಲ್ಲಿರುವ 2 ಸರ್ಕಾರಿ ಶಾಲೆಗಳಲ್ಲಿ ನವೀಕರಣ, ಚಿತ್ರಕಲೆ, ವೇದಿಕೆ ಮತ್ತು ಶೌಚಾಲಯ ನಿರ್ಮಾಣವು 300+ ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಯೋಜನವನ್ನು ನೀಡುತ್ತದೆ.
ಆಂಧ್ರಪ್ರದೇಶ ಮತ್ತು ಕರ್ನಾಟಕದ ಗ್ರಾಮೀಣ ಶಾಲೆಗಳಿಗೆ 125 ಲ್ಯಾಪ್ಟಾಪ್ಗಳನ್ನು ದಾನ ಮಾಡುವ ಮೂಲಕ 1500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಯೋಜನವನ್ನು ನೀಡುತ್ತದೆ.
ಈ ಯೋಜನೆಗಳು ಶೈಕ್ಷಣಿಕ ಅವಕಾಶಗಳನ್ನು ಹೆಚ್ಚಿಸುವ ಮತ್ತು ಸಮುದಾಯ ಕಲ್ಯಾಣವನ್ನು ಬೆಂಬಲಿಸುವ ಗುರಿಯನ್ನು ಹೊಂದಿವೆ. 
ಜಾಗತಿಕವಾಗಿ, ಎಲ್ಯೂಷಿಯನ್ ತನ್ನ ಸಿಎಸ್ಆರ್ ಪ್ರಯತ್ನಗಳಿಗಾಗಿ ಗುರುತಿಸಲ್ಪಟ್ಟಿದೆ, ಸಮುದಾಯ ಬದ್ಧತೆ ವಿಭಾಗದಲ್ಲಿ 2023 ರ ಅಂತರರಾಷ್ಟ್ರೀಯ ಸಿಎಸ್ಆರ್ ಶ್ರೇಷ್ಠತೆ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈ ಪ್ರಶಸ್ತಿಯು ಸುಸ್ಥಿರತೆ, ವೈವಿಧ್ಯತೆ, ಸಮಾನತೆ, ಸೇರ್ಪಡೆ ಮತ್ತು ನೈತಿಕ ವ್ಯವಹಾರ ಅಭ್ಯಾಸಗಳಿಗೆ ಕಂಪನಿಯ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ. 
2020ರಲ್ಲಿ ಪ್ರಾರಂಭವಾದಾಗಿನಿಂದ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿರುವ 1,100 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ $1 ಮಿಲಿಯನ್ಗಿಂತಲೂ ಹೆಚ್ಚಿನ ಬೆಂಬಲವನ್ನು ಒದಗಿಸಿರುವ PATH ವಿದ್ಯಾರ್ಥಿವೇತನ ಕಾರ್ಯಕ್ರಮದಂತಹ ಉಪಕ್ರಮಗಳ ಮೂಲಕ ಎಲ್ಯೂಷಿಯನ್ನ ಸಾಮಾಜಿಕ ಜವಾಬ್ದಾರಿಯ ಬದ್ಧತೆಯನ್ನು ಮತ್ತಷ್ಟು ಪ್ರದರ್ಶಿಸಲಾಗುತ್ತದೆ.
ಹೆಚ್ಚುವರಿಯಾಗಿ, ಎಲ್ಯೂಷಿಯನ್ ವಾರ್ಷಿಕವಾಗಿ 40 ಗಂಟೆಗಳ ವೇತನ ಸಹಿತ ದತ್ತಿ ರಜೆಯನ್ನು ನೀಡುವ ಮೂಲಕ ಸಮುದಾಯ ಸೇವೆಯಲ್ಲಿ ಉದ್ಯೋಗಿಗಳ ತೊಡಗಿಸಿಕೊಳ್ಳುವಿಕೆಯನ್ನು ಪ್ರೋತ್ಸಾಹಿಸುತ್ತದೆ, ಸಿಬ್ಬಂದಿ ಅವರು ಉತ್ಸಾಹಭರಿತ ಕಾರಣಗಳಿಗಾಗಿ ಸ್ವಯಂಸೇವಕರಾಗಲು ಅನುವು ಮಾಡಿಕೊಡುತ್ತದೆ.
ಈ ಪ್ರಯತ್ನಗಳ ಮೂಲಕ, ಎಲ್ಯೂಷಿಯನ್ ಇಂಡಿಯಾ ಮತ್ತು ಅದರ ಜಾಗತಿಕ ಪ್ರತಿರೂಪಗಳು ಸಮಾಜ ಮತ್ತು ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ಶ್ರಮಿಸುತ್ತವೆ.

