ಚಳ್ಳಕೆರೆ :
ಚಿತ್ರದುರ್ಗ: ಕಾರ್ಯಕರ್ತರಿಗೆ ಸ್ಥಾನ ಮಾನ ನೀಡಿ
ಚಿತ್ರದುರ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲಲು ಕಾರ್ಯಕರ್ತರು
ಬಹಳಷ್ಟು ಶ್ರಮ ಪಟ್ಟಿದ್ದಾರೆ. ಅವರಿಗೂ ಸ್ಥಾನಮಾನ ಕೊಡಬೇಕಿದೆ.
ಆದ್ದರಿಂದ ಸಣ್ಣ ನೀರಾವರಿ ಇಲಾಖೆಯಡಿ, ಕೆರೆ ಅಭಿವೃದ್ಧಿ
ಸಮಿತಿಗಳಲ್ಲಿ ಸದಸ್ಯರನ್ನು ನೇಮಿಸಬೇಕೆಂದು ಚಿತ್ರದುರ್ಗ ಜಿಲ್ಲಾ
ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂಕೆ ತಾಜ್ ಪೀರ್ ಸಚಿವ ಬೋಸರಾಜು
ಅವರಿಗೆ ಮನವಿ ಮಾಡಿದರು. ಚಿತ್ರದುರ್ಗದ ಕಾಂಗ್ರೆಸ್
ಕಚೇರಿಯಲ್ಲಿಂದು ಜಿಪಂ ಹಾಗು ತಾಪಂ ಚುನಾವಣೆ ಹಿನ್ನೆಲೆಯಲ್ಲಿ
ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತಾಡಿದರು.

