ಚಳ್ಳಕೆರೆ : ಹೊಳಲ್ಕೆರೆ: ಗುಡಿಸಲುಗಳಿಗೆ ನುಗ್ಗಿದ ನೀರು, ಇವರ
ಗೋಳು ಕೇಳೋರಿಲ್ಲ
ಶುಕ್ರವಾರ ರಾತ್ರಿ ಹೊಳಲ್ಕೆರೆ ಚಿಕ್ಕಜಾಜೂರು ಗ್ರಾಮದಲ್ಲಿ ಸುರಿದ
ಭಾರೀ ಮಳೆಗೆ ಗುಡಿಸಲು ಮನೆಗಳಿಗೆ ನೀರು ನುಗ್ಗಿ ಜನತೆ ತೀವ್ರ
ತೊಂದರೆ ಅನುಭವಿಸಿದ್ದಾರೆ.

ಈ ಹಿಂದೆ ಬೆಂಕಿ ಅವಘಡದಿಂದ
ಸುಟ್ಟುಹೋಗಿದ್ದ ಈ ಮನೆಗಳಿಗೆ ಶಾಸಕ ಎಂ. ಚಂದ್ರಪ್ಪ ಅವರು
ಸೂರು ಕಲ್ಪಿಸುವುದಾಗಿ ಭರವಸೆ ನೀಡಿದ್ದರೂ, ಇದುವರೆಗೂ
ಯಾವುದೇ ಕ್ರಮ ಕೈಗೊಂಡಿಲ್ಲ.

ಅಧಿಕಾರಿಗಳು ಹಾಗೂ
ಜನಪ್ರತಿನಿಧಿಗಳು ಮನೆ ಕಟ್ಟಿಕೊಳ್ಳಲು ಜಾಗ ನೀಡುತ್ತಿಲ್ಲ ಎಂದು
ಸ್ಥಳೀಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.

About The Author

Namma Challakere Local News
error: Content is protected !!