ಚಳ್ಳಕೆರೆ: ಅದ್ದೂರಿಯಾಗಿ ನಡೆದ ರಂಗನಾಥಸ್ವಾಮಿ
ರಥೋತ್ಸವ
ಚಳ್ಳಕೆರೆ ತಾಲೂಕಿನ ದುರ್ಗಾವರ ಗ್ರಾಮದಲ್ಲಿ ಭಾನುವಾರದಿಂದ
ಮೂರು ದಿನಗಳ ರಥೋತ್ಸವ ಆರಂಭಗೊಂಡಿದೆ. ರಂಗನಾಥಸ್ವಾಮಿ
ರಥೋತ್ಸವವು ಅದ್ದೂರಿಯಾಗಿ ನಡೆಯುತ್ತಿದ್ದು, ನಂದಿಕೋಲು
ಕುಣಿತ, ಕೋಲಾಟ, ಭಜನೆ ಮತ್ತು ವಿಶೇಷ ವಾದ್ಯಗಳೊಂದಿಗೆ
ಗ್ರಾಮದ ಯುವಕರು ಹಾಗೂ ಭಕ್ತರು ರಥವನ್ನು ಎಳೆದರು.
ಕೆರೆಹಿಂದಲಹಟ್ಟಿ, ದುರ್ಗಾವರ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು
ಈ ಸಂಭ್ರಮದಲ್ಲಿ ಭಾಗವಹಿಸಿದ್ದರು.

