ಚಳ್ಳಕೆರೆ : ಶ್ರೀ
ಗೌರಸಮುದ್ರ ಮಾರಮ್ಮ ದೇವಿಯ ಜಾತ್ರೆ ಮಹೋತ್ಸವಕ್ಕೆ ಪೂರ್ವ ಸಿದ್ಧತೆಯ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿವೆ ಅದರಂತೆ ಜಾತ್ರೆ ನಡೆಯುವ ಸ್ಥಳಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಶಿಧರ್ ರವರು ಭೇಟಿ ನೀಡಿ ಪರೀಶಿಲನೆ ನಡೆಸಿದರು.
ಇನ್ನೂ ದೇವಿ ನೆಲಸಿರುವ ಗ್ರಾಮದಿಂದ ಜಾತ್ರೆ ನಡೆಯುವ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷ ಓಬಣ್ಣ, ಸದಸ್ಯರ ತಂಡ
ತುಂಬಲಿನಲ್ಲಿ ಅಷ್ಟ ದಿಕ್ಕುಗಳ ಮೂಲಕ ಜಾತ್ರೆ ಆಗಮಿಸುವ ಭಕ್ತರಿಗೆ ಶೌಚಾಲಯ, ಪಾರ್ಕಿಂಗ್ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಬಗ್ಗೆ ವೀಕ್ಷಣೆ ಮಾಡಿದರು
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಓಬಣ್ಣ , ತಳಕು ಸಬ್ ಇನ್ಸ್ಪೆಕ್ಟರ್ ಶಿವಕುಮಾರ್, ಗ್ರಾಮ ಪಂಚಾಯಿತಿ ಸದ್ಯರಾದ ಶಶಿಕುಮಾರ ಜಿ ಎಂ, ಈರಣ್ಣ, ಮಲ್ಲಯ್ಯ ,ತಿಪ್ಪೇಸ್ವಾಮಿ ವಕೀಲರಾದ ಚಂದ್ರಣ್ಣ ತಿಪ್ಪೇಸ್ವಾಮಿ ಇತರರು ಇದ್ದರು

