ಚಳ್ಳಕೆರೆ :
ಅವೈಜ್ಞಾನಿ ಕೋಡಿ ದುರಸ್ತಿ ಯಿಂದ ರೈತರ ಬೆಳೆಯಲ್ಲಿ ತುಂಬಿದ ನೀರು ಆಪಾರ ಬೆಳೆ ನಷ್ಟ ರೈತರು ಸಂಕಷ್ಟಕ್ಕೆ.
ಹೌದು ಇದು ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡ ಹೊಟ್ಟೆಕದ್ರಪ್ಪರ ಮಧು ಇವರ ಜಮೀನಿಗೆ ಬೃಹತ್ ಕಟ್ಟೆ ಇತ್ತು ಕಳೆದ ಸುಮಾರು ಮೂರು ವರ್ಷಗಳ ಹಿಂದೆ ಸಣ್ಣ ನೀರಾವರಿ ಇಲಾಖೆಯಿಂದ ಕೋಡಿ ನಿರ್ಮಿಸಿ ಬೃಹತ್ ರಾಜಕಾಲುವೆ ನಿರ್ಮಿಸಲಾಗಿದ್ದು ಗಿಡಗೆಂಟೆಗಳು ಬೆಳೆದು ನೀರು ಸರಾಗವಾಗಿ ಹೋಗುತ್ತಿಲ್ಲ
ಮಳೆ ಬಂದಿರಲಿಲ್ಲ ಶುಕ್ರವಾರ ರಾತ್ರಿ ಸುರಿದ ಮಳೆಗೆ ದೊಡ್ಡಹಳ್ಳ ಬರುತ್ತಿರುವ ಕಾರಣ ಬೃಹತ್ ಮಟ್ಟದ ನೀರು ಜಮೀನಿನಲ್ಲಿ ನಿಂತಿವೆ.
ಕೋಡಿ ದುರಸ್ಥಿ ಮಾಡವಾಗ ಜಮೀನು ಮಟ್ಟಕ್ಕಿ ಸ್ವಲ್ಪ ತಗ್ಗಿ ಎತ್ತರ ನಿರ್ಮಿಸಿದರು ನೀರು ಹೊರ ಹೋಗಿವುದಿಲ್ಲಎಂದು ಹೇಳಿದರೂ ಸಹ ಗುತ್ತಿಗೆದಾರರು ಹಣಕ್ಕಾ ಅವೈಜ್ಞಾನಿಕ ಕಾಮಗಾರಿ ಮಾಡಿ ಹೋಗಿದ್ದಾರೆ ಈಗ ಅಪಾರ ನೀರು ನಿಂತಿದ್ದು ಈ ನೀರು ಖಾಲಿಯಾಗ ಬೇಕಾದರೆ ಇನ್ನು ನಾಲ್ಕೈದು ತಿಂಗಳು ಬೇಕು ಜಮೀನಿಲ್ಲಿ ಅಡಿಕೆ.ತೆಂಗು. ಮೆಕ್ಕೆ ಜೋಳ.ತರಕಾರಿ ಸೇರಿದಂತೆ ವಿವಿಧ ಬೆಳೆಗಳಿವೆ ಮಳೆ ನೀರು ಹೋಗುವಷ್ಟರಲ್ಲಿ ಬೆಳೆ ತೇವಾಂಶ ಹೆಚ್ಚಾಗಿ ಕೊಳೆತು ಹೋಗುವ ಸಾಧ್ಯತೆ ಇದೆ ಹಾಗಾಗಿ ಕೂಡಲೆ ಸಂಬಂಧಪಟ್ಟ ಅಧಿಕಾರಿ ಕೋಡಿ ದುರಸ್ತಿ ಪಡಿ ನೀರು ಹೊರಹೋಗುವಂತೆ ಮಾಡಿ ಬೆಳೆ ಉಳಿಸುವರೇ ಕಾದು ನೋಡ ಬೇಕಾಗಿದೆ.

