ಚಿತ್ರದುರ್ಗ: ಅಕ್ರಮ ಪಡಿತರ ಅಕ್ಕಿ ವಶಕ್ಕೆ
ಚಿತ್ರದುರ್ಗದಲ್ಲಿ ಗುರುವಾರ, ಅಕ್ರಮವಾಗಿ ಸಾಗಿಸಲಾಗುತ್ತಿದ್ದ
ಲೋಡ್ ಗಟ್ಟಲೇ ಪಡಿತರ ಅಕ್ಕಿಯನ್ನು ಎಸಿ ಮೆಹಬೂಬ್ ಜಿಲಾನಿ
ಖುರೇಶಿ ಅವರ ನೇತೃತ್ವದಲ್ಲಿ ದಾಳಿ ಮಾಡಿ ವಶಕ್ಕೆ ಪಡೆಯಲಾಗಿದೆ.
ಬಡವರಿಗೆ ಸೇರಬೇಕಾದ ಅನ್ನಭಾಗ್ಯದ ಅಕ್ಕಿಯನ್ನು ಟ್ರಕ್ ನಲ್ಲಿ
ಸಾಗಿಸಲಾಗುತ್ತಿತ್ತು. ದಾಳಿ ವೇಳೆ ಆರೋಪಿಗಳು ಟ್ರಕ್ ಬಿಟ್ಟು
ಪರಾರಿಯಾಗಿದ್ದಾರೆ. ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಟ್ರಕ್
ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

