ಮೊಳಕಾಲ್ಕೂರು: ದೇಶಕ್ಕೆ ಸಂವಿಧಾನ ರೂಪಿಸುವುದು
ಸುಲಭದ ಮಾತಲ್ಲ
ಮೊಳಕಾಲ್ಕೂರು ಶಾಸಕ ಎನ್.ವೈ.ಗೋಪಾಲಕೃಷ್ಣ ಅವರು
ಭಾರತೀಯ ಸಂವಿಧಾನವು ವಿಶ್ವದಲ್ಲೇ ಅತ್ಯಂತ ವಿಶೇಷ ಸ್ಥಾನ
ಪಡೆದಿದೆ ಎಂದು ಹೇಳಿದ್ದಾರೆ. ಮೊಳಕಾಲ್ಕೂರಿನಲ್ಲಿ ಸಂವಿಧಾನ
ದಿನಾಚರಣೆಯನ್ನು ಆಚರಿಸುವ ಸಂದರ್ಭದಲ್ಲಿ ಮಾತನಾಡಿದ
ಅವರು, ನೂರಾರು ಜಾತಿ, ಹತ್ತಾರು ಧರ್ಮ, ವೈವಿಧ್ಯಮಯ
ಸಂಸ್ಕೃತಿಗಳಿರುವ ದೇಶಕ್ಕೆ ಸಂವಿಧಾನ ರಚಿಸುವುದು ಸುಲಭದ
ಕೆಲಸವಲ್ಲ. ಅಂಬೇಡ್ಕರ್ ಅವರು ಸಂವಿಧಾನವನ್ನು ರೂಪಿಸಿ
ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಇಂದಿನ
ವಿದ್ಯಾರ್ಥಿಗಳು ಸಂವಿಧಾನವನ್ನು ಅರಿತು ಬಾಳಬೇಕು ಎಂದು
ಅವರು ಕರೆ ನೀಡಿದರು.

