ಹೊಸ ವರ್ಷವೆಂದರೆ ಕಳೆದ ವರ್ಷದ ವೈಫಲ್ಯಗಳನ್ನು ಶುದ್ಧೀಕರಿಸುವ ಸಂಕಲ್ಪವನ್ನು ಕೈಗೊಳ್ಳುವ ದಿವಸವಾಗಬೇಕೆಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು
ಅವರು ಇಂದು ನಾಯಕನಹಟ್ಟಿ ಪಟ್ಟಣದ ನಾಗರಿಕರು ಮತ್ತು ಹಟ್ಟಿಮಲ್ಲಪ್ಪ ನಾಯಕ ಸಂಘದ ವತಿಯಿಂದ ಹೊಸ ವರ್ಷದ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ ಹೊಸ ವರ್ಷವೆಂದರೆ 2025 ರಲ್ಲಿ ಕೈಗೂಡದ ಕೆಲವು ಸಂಕಲ್ಪದ ಕೆಲಸಗಳನ್ನು ಕೈಗೊಳ್ಳುವ ದಿನವಾಗಿರುತ್ತದೆ ಜನವರಿ ಒಂದರ ಹೊಸ ವರ್ಷ ಆಂಗ್ಲರ ಆಚರಣೆಯಾಗಿದ್ದು ಇದನ್ನು ಹಿಂದೂ ಸಂಸ್ಕೃತಿಯ ಬೇರಿನೊಂದಿಗೆ ಬೆಸೆಯುವಂತಾಗಬೇಕು ಅದರ ಅನುಸಾರವೇ ಇವತ್ತು ಶ್ರೀ ರಾಮಾಯಣ ಮಹಾ ಕಾವ್ಯವನ್ನು ಬರೆದಂತಹ ವಾಲ್ಮೀಕಿ ಅವರ ಆದರ್ಶಗಳೊಂದಿಗೆ ಈ ವಾಲ್ಮೀಕಿ ಭವನದಲ್ಲಿ ಸಮಸ್ತ ನಾಗರಿಕರೊಂದಿಗೆ ಹೊಸ ಭರವಸೆಗಳ ಮತ್ತು ಹಿಂದೂ ಸಂಸ್ಕೃತಿಯ ಪ್ರತೀಕವಾದ ಧಾರ್ಮಿಕ ಆಚರಣೆಗಳ ಪ್ರತೀಕವಾಗಿ ಹೊಸ ವರ್ಷವನ್ನು ಎಂದು ಇಲ್ಲಿ ಆಚರಿಸುತ್ತಿದ್ದೇವೆ ದ್ವೇಷ ಅಸೂಯೆ ವೈಶಮ್ಯ ಮುಂತಾದವುಗಳನ್ನು ತ್ಯಜಿಸೋಣ ಹೊಸ ವರ್ಷದಲ್ಲಿ ಶಾಂತಿ ಸಮೃದ್ಧಿ ಮತ್ತು ನಿಸ್ವಾರ್ಥ ಮನೋಭಾವಗಳನ್ನು ಮೈ ಗೂಡಿಸಿಕೊಳ್ಳೋಣ ಇಡೀ ಕ್ಷೇತ್ರದ ಪ್ರತಿಯೊಬ್ಬರೂ ಕೂಡ ಹೊಸ ವರ್ಷದಲ್ಲಿ ನಗು ನೆಮ್ಮದಿ ಮತ್ತು ಸಾಧನೆಗಳ ಭಾರವನ್ನು ಹೊತ್ತು ಇದರ ಬಾಹುಗಳು ಮುಗಿಲು ಮುಟ್ಟುವಂತಿರಬೇಕೆಂದು ಆಶಿಸಿದರು
ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ಹಾಗೂ ಹಟ್ಟಿ ಮಲ್ಲಪ್ಪ ನಾಯಕ ಸಂಘದ ಅಧ್ಯಕ್ಷರಾದ ಪಟೇಲ್ ಜಿ ತಿಪ್ಪೇಸ್ವಾಮಿ ಯತ್ನಟ್ಟಿ ಗೌಡ್ರು ಮಾತನಾಡಿ 2025 ರ ವರ್ಷದಲ್ಲಿ ನಾಯಕನಹಟ್ಟಿ ವಾಲ್ಮೀಕಿ ಸಮಾಜದವರು ಹಾಗೂ ಹಟ್ಟಿ ಮಲ್ಲಪ್ಪ ನಾಯಕ ಸಂಘದ ವತಿಯಿಂದ ಅನೇಕ ಸಮುದಾಯದ ಮತ್ತು ಸಾರ್ವತ್ರಿಕ ಕೆಲಸಗಳನ್ನು ಮಾಡಲಾಗಿದೆ ಸಂಘಟಿತ ಮನೋಭಾವದಿಂದ ಮಾತ್ರ ಇಂತಹ ಕೆಲಸಗಳನ್ನು ಮಾಡಲು ಸಾಧ್ಯ ಸಮಾಜದ ಕೆಲಸಗಳನ್ನು ಮಾಡುವಾಗ ನಿರ್ಲಕ್ಷತೆ ಮತ್ತು ವೈಫಲ್ಯಗಳನ್ನು ಕಾಣಬಾರದು 2026 ವರ್ಷದಲ್ಲಿ ಸಮಾಜದಲ್ಲಿ ಇನ್ನೂ ಹಲವಾರು ಕಾರ್ಯಗಳನ್ನು ಮಾಡುವ ಕಾರ್ಯ ಸೂಚಿ ರೂಪಿಸಲಾಗಿದೆ ಪ್ರತಿಯೊಬ್ಬರೂ ಕೂಡ ಇದಕ್ಕೆ ಕೈಜೋಡಿಸಬೇಕು ನಿಸ್ವಾರ್ಥ ಮನೋಭಾವ ಬದುಕಿಗೆ ಹಣತೆ ಇದ್ದಂತೆ 2026 ಬರುವ ವರ್ಷವು ಈ ಭಾಗದ ಎಲ್ಲ ಜನರಿಗೆ ಒಳ್ಳೆಯ ಸಮೃದ್ಧ ನೆಮ್ಮದಿಯ ಬದುಕು ನಮ್ಮದಾಗಲಿ ಎಂದು ಹೇಳಿದರು
ಸಮಾಜದ ಮುಖಂಡರಾದ ಕಾಕ ಸೂರಯ್ಯ ಬಸಪ್ಪ ನಾಯಕ ಇವರುಗಳು ಮಾತನಾಡಿದರು ಸಮಾಜದ ಎಲ್ಲರೂ ವಾಲ್ಮೀಕಿ ಭಾವಚಿತ್ರಕ್ಕೆ ಮತ್ತು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕೇಕ್ ಕತ್ತರಿಸಿ ಸಂಭ್ರಮ ಆಚರಿಸಿದರು ಮುತ್ತುರಾಜ್ ಅವರ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು ಸಭೆಯಲ್ಲಿ ಹಟ್ಟಿ ಮಲ್ಲಪ್ಪ ನಾಯಕ ಸಂಘದ ಎಲ್ಲ ಸರ್ವ ಸದಸ್ಯರು ಉಪಸ್ಥಿತರಿದ್ದರು

