ಚಳ್ಳಕೆರೆ : ನಗರದ ವಾಸವಿ ಪದವಿ ಪೂರ್ವ ಕಾಲೇಜು ನಲ್ಲಿ ರೆಡ್ ಕ್ರಾಸ್ ಘಟಕ ಹಾಗೂ ಎನ್ ಎಸ್ ಎಸ್ ಸಹಯೋಗದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ಈ ರಕ್ತದಾನ ಶಿಬಿರದಲ್ಲಿ ರೆಡ್ ಕ್ರಾಸ್ ರಾಜ್ಯ ನಿರ್ವಹಣಾ ಮಂಡಳಿಯ ಸದಸ್ಯರಾದ ಅನಾಥ ರೆಡ್ಡಿ, ಜಿಲ್ಲಾ ರೆಡ್ ಕ್ರಾಸ್ ಘಟಕದ ಮಹಾಜಾರಲ್ಲ, ಜಿಲ್ಲಾ ರೆಡ್ ಕ್ರಾಸ್ ಡೈರೆಕ್ಟರ್ ಗುರುಮೂರ್ತಿ , ವಾಸವಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜೆ ಶ್ರೀರಾಮುಲು, ಹಾಗೂ ಶಿವಾರೆಡ್ಡಿ, ಕೆ ಆರ್ ಪ್ರಭಾಕರ್, ಎನ್ ಎಸ್ ಎಸ್ ಸಂಯೋಜನಾಧಿಕಾರಿಯದ ಕೆಎಸ್ ಪ್ರಭಾಕರ್, ಹಾಗೂ ಬಾಲಾಜಿ ರಕ್ತದಾನ ಕೇಂದ್ರದ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು

