ಚಳ್ಳಕೆರೆ :
ಚಿತ್ರದುರ್ಗ: ಕಡ್ಲೆ ಗುದ್ದು ಗ್ರಾಮದಲ್ಲಿ ಬೋನಿಗೆ ಬಿದ್ದ
ಚಿರತೆ
ಚಿತ್ರದುರ್ಗದ ಕಡ್ಲೆಗುದ್ದು ಹುಣಸೆಕಟ್ಟೆ ಗ್ರಾಮದ ಬಳಿ, ಗುರುವಾರ
ತಡರಾತ್ರಿ ಅರಣ್ಯ ಇಲಾಖೆ ಇಟ್ಟ ಬೋನಿಗೆ ಚಿರತೆ ಇಂದು
ಸೆರೆಯಾಗಿದೆ. ರೈತರು ಜಮೀನಿಗೆ ಹೋದ ವೇಳೆ ನೋಡಿದ್ದಾರೆ.
ತೋಟದಲ್ಲಿ ಮನೆಯಲ್ಲಿದ್ದ ಚಿರತೆ ಆಗಾಗ್ಗೆ ದಾಳಿ ಮಾಡಿ ಕುರಿ
ತಿಂದಿದೆ. ಇದರಿಂದ ರೈತರು ಭಯಪಡುವ ಪರಿಸ್ಥಿತಿ ಇದೆ. 3 ದಿನಗಳ
ಹಿಂದೆ ಚಿರತೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು, ಬೋನಿರಿಸಿದ್ದು
ಬೆಳಗ್ಗೆ ರೈತ ಎಂದಿನಂತೆ ಜಮೀನಿಗೆ ಹೋದಾಗ ಚಿರತೆ ಬೋನಿಗೆ
ಬಿದ್ದ ಘಟನೆ ಬೆಳಕಿಗೆ ಬಂದಿದೆ.

