ಚಿತ್ರದುರ್ಗ: ತನ್ನನ್ನು ರಕ್ಷಿಸುವಂತೆ ಕಣ್ಣೀರಿಟ್ಟ ವೃದ್ಧ
ಮಹಿಳೆ
ಚಿತ್ರದುರ್ಗದ ಪಿವಿಎಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ
ಜೋಗತಿ ಮಹಿಳೆಯೊಬ್ಬರು, ತಮಗೆ ಆದ ಹಲ್ಲೆ ಮತ್ತು ಪೊಲೀಸರ
ಬೇಜವಾಬ್ದಾರಿತನದ ಬಗ್ಗೆ ಸಫಾಯಿ ಕರ್ಮಚಾರಿ ಆಯೋಗದ
ಅಧ್ಯಕ್ಷರ ಮುಂದೆ ಕಣ್ಣೀರಿಟ್ಟು ವಿವರಿಸಿದರು. ಆಯೋಗದ ಅಧ್ಯಕ್ಷ
ಪಿ. ರಘು ಕೆಳಗೋಟೆ ಅವರು ಪಿವಿಎಸ್ ಆಸ್ಪತ್ರೆಗೆ ಭೇಟಿ ನೀಡಿ
ಮಹಿಳೆಯಿಂದ ವಿವರಣೆ ಪಡೆದರು. ಪೊಲೀಸರ ವರ್ತನೆಯ ಬಗ್ಗೆ
ಮಾತನಾಡಿದ ಮಹಿಳೆ, ವ್ಯಕ್ತಿ ಮಂಜುನಾಥ್ ಎಂಬಾತ ತನ್ನ ತಲೆ
ಮೇಲೆ ಕಲ್ಲು ಎತ್ತಲು ಮುಂದಾಗಿದ್ದರಿಂದ ತಾನು ಭಯಗೊಂಡಿದ್ದಾಗಿ
ತಿಳಿಸಿದರು.

