ಚಳ್ಳಕೆರೆ :
ಹೊಸದುರ್ಗ: ಈರುಳ್ಳಿ ಬಿತ್ತನೆಯಲ್ಲಿ ನಿರತರಾದ ರೈತರು
ಹೊಸದುರ್ಗ ತಾಲೂಕಿನಲ್ಲಿ ಕೆಲವು ದಿನಗಳಿಂದ ಸುರಿದ ಹದ
ಮಳೆಯಿಂದಾಗಿ, ರೈತರು ಈರುಳ್ಳಿ ಬಿತ್ತನೆಯಲ್ಲಿ ತೊಡಗಿದ್ದಾರೆ.
ಈಗಾಗಲೇ ಭೂಮಿ ಸಿದ್ಧತೆ ಮಾಡಿಕೊಂಡಿರುವ ಕೆಲ ರೈತರು
ಬಿತ್ತನೆ ಮಾಡುತ್ತಿದ್ದಾರೆ. ಇನ್ನು ಕೆಲವರು ಭೂಮಿ ಸಿದ್ಧತೆಯಲ್ಲಿ
ತೊಡಗಿದ್ದಾರೆ. ಮಾಗಿ ಉಳಿಮೆ ನಂತರ ರೈತರು ಭೂಮಿಗೆ ಕೊಟ್ಟಿಗೆ
ಗೊಬ್ಬರ ಬೆರೆಸಿ ಬಿತ್ತನೆಯಾದ ಮಾಡಿಕೊಂಡಿದ್ದರು. ಈರುಳ್ಳಿ
ಬಿತ್ತನೆಗೆ ಅನುಕೂಲಕರ ವಾತಾವರಣವಿದ್ದು, ರೈತರ ಮುಖದಲ್ಲಿ
ಮಂದಹಾಸ ಮೂಡಿದೆ.

