ಚಳ್ಳಕೆರೆ :
ಚಳ್ಳಕೆರೆ ತಾಲೂಕಿನ ಕಡಬನಕಟ್ಟೆ ಊರ ಮಾರಮ್ಮ ದೇವಿ ಜಾತ್ರೆಗೆ ಸಾವಿರಾರು ಭಕ್ತರು ಸಾಕ್ಷಿ
ಹೌದು ಚಳ್ಳಕೆರೆ ತಾಲೂಕಿನ ಕಡಬನಕಟ್ಟೆ ಗ್ರಾಮದ ಆರಾಧ್ಯದೈವ ಶ್ರೀ ಮಾರಮ್ಮ ದೇವಿ ಜಾತ್ರೆ ಕಳೆದ ಒಂದು ವಾರದಿಂದ ಪೂಜಾ ವಿಧಿ ವಿಧಾನಗಳ ಮೂಲಕ ಅದ್ದೂರಿಯಾಗಿ ಜರಗುತ್ತದೆ, ಅದರಂತೆ ಗ್ರಾಮದಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದ್ದು ಗ್ರಾಮದ ಇಷ್ಟ ದೇವರಿಗೆ ಹರಕೆ ಹಾಗೂ ಪೂಜಾ ವಿಧಾನಗಳನ್ನು ನೆರೆವೆರಿಸುವುದರ ಮೂಲಕ ದೇವಿ ಕೃಪೆಗೆ ಪಾತ್ರರಾಗುತ್ತಾರೆ ಅದರಲ್ಲಿ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಕಡಬನಕಟ್ಟೆ ಗ್ರಾಮದ ನಿವಾಸಿಯಾದ ಅವರು ಈಡೀ ಜಿಲ್ಲೆಯ ಜನತೆಯ ಹಬ್ಬದೂಟ ಉಣಬಡಿಸುವ ಮೂಲಕ ದೇವರ ಕೃಪೆಗೆ ಪಾತ್ರರಾಗುತ್ತಾರೆ..
ಊರ ಮಾರಮ್ಮನ ಜಾತ್ರೆಗೆ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದಿಂದ ಸಾವಿರಾರು ಭಕ್ತರು ಹಾಗೂ ಶಾಸಕರ ಅಭಿಮಾನಿ ಬಳಗದಿಂದ ಕಡಬನಕಟ್ಟೆ ಗ್ರಾಮಕ್ಕೆ ತೆರಲಿದ್ದಾರೆ, ಅದರಲ್ಲಿ ಬೈಕ್ ಹಾಗೂ ವಾಹನಗಳ ಮೆಕ್ಯಾನಿಕ್ ಸಿಬ್ಬಂದಿ ವರ್ಗದ ನೆಚ್ಚಿನ ಶಾಸಕ ಟಿ.ರಘುಮೂರ್ತಿ ಭಾವಚಿತ್ರ ವುಳ್ಳ ಟೀ ಶರ್ಟ್ ಹಾಕಿಕೊಂಡು ವಾಲ್ಮೀಕಿ ಪುತ್ಥಳಿ ಗೆ ಮಾರ್ಲಪಣೆ ಮಾಡಿ ಕಡಬನಕಟ್ಟೆ ಊರ ಮಾರಮ್ಮ ದೇವಿ ಜಾತ್ರೆಗೆ ಆಗಮಿಸುವ ದೃಶ್ಯ ಎಲ್ಲೆಡೆ ಕಂಡು ಬಂದಿತು.


