ಚಿತ್ರದುರ್ಗ : ನಗರಕ್ಕೆ ಆಗಮಿಸಿದ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ (ರಿ,) ಬೆಂಗಳೂರು.ರಾಜ್ಯ ಸಂಘದ ನಿಕಟಪೂರ್ವ ಖಜಾಂಚಿ ಎಂ. ಜಯಣ್ಣ ರವರ ಸೇವೆಯನ್ನು ಗುರುತಿಸಿ ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್. ಲಕ್ಷ್ಮಣ ಸನ್ಮಾನಿಸಿದರು.

ಸನ್ಮಾನಿಸಿದ ನಂತರ ಮಾಜಿ ಅಧ್ಯಕ್ಷ ಎಸ್. ಲಕ್ಷ್ಮಣ ಮಾತನಾಡಿ ಎಂ.ಜಯಣ್ಣ ರವರು ನಮ್ಮ ರಾಜ್ಯ ಸಂಘಟನೆಯಲ್ಲಿ ಸುದೀರ್ಘ 13 ವರ್ಷಗಳ ಕಾಲ ನಿರಂತರವಾಗಿ ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರು ರಾಜ್ಯ ಸಂಘದಲ್ಲಿ ಹಣ ಇದ್ದಾಗ ಹಣವಿಲ್ಲದೆ ಇದ್ದಾಗ ರಾಜ್ಯ ಸಂಘ ಕೈಗೊಳ್ಳುವ ಎಲ್ಲಾ ಹೋರಾಟ ಮತ್ತು ಕಾರ್ಯಕ್ರಮಗಳಿಗೆ ಯಾವುದೇ ರೀತಿಯ ಹಣಕಾಸು ತೊಂದರೆಯಾಗದಂತೆ ನಿಭಾಯಿಸುತ್ತಿದ್ದರು.

ಈ ಹಿಂದೆ ಉಪನ್ಯಾಸಕರ ವೇತನ ತಾರತಮ್ಯ ನಿವಾರಣೆಗಾಗಿ 18 ದಿನಗಳ ಕಾಲ ಫ್ರೀಡಂ ಪಾರ್ಕ್ ಬೆಂಗಳೂರಿನಲ್ಲಿ ರಾಜ್ಯ ಉಪನ್ಯಾಸಕರ ಸಂಘ ಹಮ್ಮಿಕೊಂಡಿದ್ದ ಅನಿರ್ದಿಷ್ಟ ಕಾಲ ಮುಷ್ಕರವನ್ನು ಹಾಗೂ ಮುಷ್ಕರಕ್ಕೆ ತಗಲುವ ಹಣಕಾಸು ವ್ಯವಸ್ಥೆಯ ಬಗ್ಗೆ ಈ ಸಮಯದಲ್ಲಿ ಜ್ಞಾಪಿಸಿ. ಆ ಸಮಯದಲ್ಲಿನ ಜಯಣ್ಣ ರವರ ಹಣಕಾಸು ಸೇವೆಯನ್ನು ಸ್ಮರಿಸಿದರು.

ಇವರು ಮುಂದಿನ ದಿನಗಳಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ದೂರ ಶಿಕ್ಷಣ ಕಲ್ಪಿಸಬೇಕೆಂಬ ಗುರಿಯನ್ನಿ ಟ್ಟುಕೊಂಡಿದ್ದಾರೆ.
ಸನ್ಮಾನ ಸ್ವೀಕರಿಸಿದ ಎಂ.ಜಯಣ್ಣ ಮಾತನಾಡಿ. ಲಕ್ಷ್ಮಣ ಮತ್ತು ನಾನು ಸಂಘದಲ್ಲಿ ಸುಮಾರು ವರ್ಷಗಳಿಂದ ತುಂಬಾ ಒಡನಾಡಿಗಳು.ಅವರು ರಾಜ್ಯ ಸಂಘದ ಸಹ ಕಾರ್ಯದರ್ಶಿ, ಕಾರ್ಯದರ್ಶಿ ಹಾಗೂ ಜಿಲ್ಲಾಧ್ಯಕ್ಷರಾಗಿ ಅವರ ಸೇವ ಅವಧಿಯಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಇವರು ಅರೆಕಾಲಿಕ ಉಪನ್ಯಾಸಕರ ಸೇವೆ ಖಾಯಂಗೊಳಿಸುವುದಕ್ಕಾಗಿ ಮತ್ತು ಉಪನ್ಯಾಸಕರ ವೇತನ ತಾರತಮ್ಯ ನಿವಾರಣೆಗಾಗಿ ನಿರಂತರವಾಗಿ ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ಉತ್ತಮ ಹೋರಾಟಗಾರರಾಗಿ ಕೆಲಸ ನಿರ್ವಹಿಸಿದ್ದಾರೆ. ಇವರು ರಾಜ್ಯ ಉಪನ್ಯಾಸಕರ ಸಂಘ ಕೈಗೊಳ್ಳುವ ಯಾವುದೇ ಹೋರಾಟ, ಮುಷ್ಕರ ಮತ್ತು ಸಭೆ ಸಮಾರಂಭಗಳಿಗೆ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಇವರ ಸೇವೆ ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಪ್ರಾಚಾರ್ಯ ರಂಗಸ್ವಾಮಿ, ವಿನಯ್, ಚೈತ್ರ ಕುಮಾರ್ ,ರಂಗಸ್ವಾಮಿ ಇತರರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!