ಚಳ್ಳಕೆರೆ : ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಳಕು ಗ್ರಾಮದಲ್ಲಿ ಮರು ನಿರ್ಮಾಣಗೊಂಡ ಶಿಲಾ ದೇವಾಲಯ ಮತ್ತು ನೂತನ ಶಿಲಾಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಇಂದು ನೂರಾರು ಭಕ್ತಾದಿಗಳು ಮುಂಜಾನೆ ಶಿವನಿಗೆ ವಿಶೇಷ ಹೋಮ , ಅರ್ಚನೆ ಪೂಜೆಸಲ್ಲಿಸುವ ಮೂಲಕ ದೇವರ ಕೃಪೆಗೆ ಸಾಕ್ಷಿಯಾದರು.
ಇನ್ನೂ ಗ್ರಾಮದಲ್ಲಿ ನೂತನ ವಿಗ್ರಹಗಳಿಗೆ ಪ್ರಾಣ ಪ್ರತಿಷ್ಠಾಪನೆ, ರುದ್ರಾಭಿಷೇಕ, ಪೂಜೆ ತದನಂತರ ಮಹಾರುದ್ರ ಹೋಮ, ಜಯದೇವ ಪೂರ್ಣಾಹುತಿ, ಪುಷ್ಮಾಂಡ ಬಲಿಪ್ರದಾನ, ದೇವರಿಗೆ ಅಷ್ಟೋತ್ತರ ಮಹಾಮಂಗಳಾರತಿ ರಾಜೋಪಚಾರ ಈಗೆ ಪರಮಪೂಜ್ಯ ಶ್ರೀಗಳ ಅಮೃತಸ್ತದಿಂದ ದೇವಾಲಯ ಉದ್ಘಾಟನೆ ಹಾಗೂ ಭಕ್ತಾದಿಗಳಿಗೆ ರುದ್ರಾಕ್ಷಿ ದೀಕ್ಷೆ ಮಹಾ ದಾಸೋಹ ಮಾಡುವ ಮೂಲಕ ಈಡೀ ಗ್ರಾಮದ ಮಹಿಳೆಯರು, ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

