ಕಳೆದ ಐದು ವರ್ಷಗಳ ಕಾಲ ಸುದಿರ್ಘ ಸೇವೆ ಸಲ್ಲಿಸಿದ ಅಧಿಕಾರಿಗಳು ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಜನ ಮನ್ನಣೆ ಗಳಿಸಿದ ಏಕೈಕ ಅಧಿಕಾರಿಗಳು ಇವರಾಗಿದ್ದಾರೆ.
ಹೌದು
ಚಳ್ಳಕೆರೆ ತಾಲೂಕು ಪಂಚಾಯತ್ ಕಾರ್ಯಾಲಯದಲ್ಲಿ ಸಂತೋಷ್ ನರೇಗಾ ಸಹಾಯಕ ನಿರ್ದೇಶಕರಾಗಿ ಐದು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಶಿವಮೊಗ್ಗ ತಾಲೂಕು ಪಂಚಾಯಿತಿ ವರ್ಗಾವಣೆಗೊಂಡ ಹಿನ್ನೆಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿ ಸಿಬ್ಬಂದಿಗಳಿಂದ ಆಯೋಜಿಸಿದ್ದ ಬೀಳ್ಕೊಡಿಗೆ ಸಮಾರಂಭ ಸಾಕ್ಷಿಯಾಗಿದೆ
ಮೆಚ್ಚಿನ ಅಧಿಕಾರಿ ವರ್ಗ, ನೆನಪುಳಿವ ಬೀಳ್ಕೊಡುಗೆ ನೀಡಿದ ಜನ
ಜನರ ಮೆಚ್ಚಿನ ಅಧಿಕಾರಿ ಸಂತೋಷ್ ಅವರಿಗೆ ವರ್ಗಾವಣೆ ಆಗಿದ್ದು,ಅಧಿಕಾರಿ ಸಿಬ್ಬಂದಿಗಳು ಅವರಿಗೆ ವಿಶಿಷ್ಟವಾಗಿ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಸೇವೆ ಸಲ್ಲಿದ ನೆನಪುಗಳನ್ನು ಕವನ ಗಳ ಮೂಲ ಹಾಡಿ ಹೊಗಳಿ ಮತ್ತೆ ತಾಪಂ ಇಒ ಅಗಿ ಇದೇ ಕಚೇರಿಗೆ ಬರುವಂತೆ ಆಶೀಸಿದ್ದಾರೆ.
ಗ್ಯಾರೆಂಟಿ ಸಮಿತಿ ಅಧ್ಯಕ್ಷ ಗದ್ದಿಗೆತಿಪ್ಪೇಸ್ವಾಮಿ ಜಿಪಂ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ.ತಾಪಂ ಇಒ ಶಶಿಧರ್. ವರ್ಗಾವಣೆಗೊಂಡ ನರೇಗಾ ಸಹಾಯಕ ನಿರ್ದೇಶಕ ಸಂತೋಷ್. ಸೇರಿದಂತೆ ಹಲವರು ಮಾತನಾಡಿದರು.

