ಪತ್ರಕರ್ತರಿಗೆ ಆರೋಗ್ಯ ವಿಮೆ : ಶಾಸಕ ಟಿ.ರಘುಮೂರ್ತಿ ಭರವಸೆ
ಪತ್ರಕರ್ತರ ವೃತ್ತಿ ಬದುಕು ನಿಂತ ನೀರಲ್ಲ : ಪತ್ರಕರ್ತರ ಕಾರ್ಯಗಾರದಲ್ಲಿ ಹಿತನುಡಿ

ಚಳ್ಳಕೆರೆ : ಪತ್ರಕರ್ತರ ವೃತ್ತಿ ಬದುಕು ನಿಂತ ನೀರಲ್ಲ ಅವರ ಸಾಮಾಜಿಕ ಬದ್ಧತೆ ಹಾಗೂ ಅವರ ಸಾಮಾಜಿಕ ಜೀವನ ಈಡೀ ಸಮುದಾಯಕ್ಕೆ ಕೊಡುಗೆ ಎಂದು ಶಾಸಕ ಟಿ.ರಘುಮೂರ್ತಿ ಕಿವಿಮಾತು ಹೇಳಿದರು.
ನಗರದ ರೋಟರಿ ಬಾಲ ಭವನದಲ್ಲಿ ಕರ್ನಾಟಕ ಮಾಧ್ಯಮ ಮಹಾ ಒಕ್ಕೂಟ ಬೆಂಗಳೂರು ದಾವಣಗೆರೆ ಚಿತ್ರದುರ್ಗ ಇವರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಗಡಿನಾಡು ಪತ್ರಕರ್ತರ ಕಾರ್ಯಗಾರ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಪತ್ರಕರ್ತರು ಕಾರ್ಯ ನಿರ್ವಹಿಸಿ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದು ಧ್ವನಿ ಇಲ್ಲದವರ ಧ್ವನಿಯಾಗಿ ಕೆಲಸ ಮಾಡಬೇಕು. ಸಮಾಜದ ಅಂಕುಡೊAಕುಗಳನ್ನು ಸರಿಪಡಿಸುವ ಗುರುತರ ಜವಾಬ್ದಾರಿ ಪತ್ರಕರ್ತರ ಮೇಲಿದೆ ಸಂವಿಧಾನದಲ್ಲಿನ ಶಾಸಕಾಂಗ ಕಾರ್ಯಾಂಗ ನ್ಯಾಯಾಂಗ ಹಾಗೂ ಮಾಧ್ಯಮ ರಂಗ ಎಲ್ಲರೂ ಒಂದುಗೂಡಿ ಕಾರ್ಯ ನಿರ್ವಹಿಸಿದಾಗ ಸಮಸ್ಯೆಗಳಿಗೆ ಪರಿಹಾರ ಕಂಡುಕೊAಡು ಸದೃಢ ಸಮಾಜ ನಿರ್ಮಿಸಲು ಕಾರ್ಯಪ್ರವೃತ್ತರಾಗಬೇಕು, ಪತ್ರಕರ್ತರ ಅವಶ್ಯಕತೆಗಳನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ ತಾಲೂಕಿನ ಪತ್ರಕರ್ತರ ಕುಟುಂಬಗಳಿಗೆ ಆರೋಗ್ಯ ವಿಮೆ, ಬಸ್ ಪಾಸ್ ನಿವೇಶನ ಸೇರಿದಂತೆ ಎಲ್ಲ ಬೇಡಿಕೆಗಳನ್ನು ನನ್ನ ಅಧಿಕಾರ ಅವಧಿಯಲ್ಲಿ ಹಂತ ಹಂತವಾಗಿ ಈಡೇರಿಸಲು ಶ್ರಮಿಸುವುದಾಗಿ ತಿಳಿಸಿದರು.
ವಿಶೇಷ ಉಪನ್ಯಾಸ ನೀಡಿದ ಲೋಕಾಯುಕ್ತ ಎಸ್‌ಪಿ.ಆರ್‌ಎನ್.ವಾಸದೇವ್ ಭ್ರಷ್ಟಾಚಾರವೆಂದರೆ ಕೇವಲ ಹಣ ನೀಡುವುದಲ್ಲ ಯಾವುದೇ ಒಬ್ಬ ಅಧಿಕಾರಿ ಹಣದ ಪರ್ಯಾಯವಾಗಿ ಯಾವುದೇ ವಸ್ತುವನ್ನು ಪಡೆದರು ಅದು ಭ್ರಷ್ಟಾಚಾರ ಎನಿಸುತ್ತದೆ ಭ್ರಷ್ಟಾಚಾರ ನಿರ್ಮೂಲನವಾಗಬೇಕಾದರೆ ಸಾರ್ವಜನಿಕರು ಲೋಕಾಯುಕ್ತ ಸಿಬ್ಬಂದಿಗಳಿಗೆ ಸಹಕಾರ ನೀಡಿದಾಗ ಮಾತ್ರ ಸಾಧ್ಯವಾಗುತ್ತದೆ, ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿದರೆ ಮಾತ್ರ ನಮ್ಮ ಕೆಲಸವಾಗುತ್ತದೆ ಎಂಬ ಮನೋಭಾವವನ್ನು ಸಾರ್ವಜನಿಕರು ಬೆಳೆಸಿಕೊಂಡಿರುವುದರಿAದ ಇಂದು ಭ್ರಷ್ಟಾಚಾರ ಹೆಚ್ಚಾಗಲು ಕಾರಣವಾಗಿದೆ
ನಮ್ಮ ಕಛೇರಿ ದಿನದ 24 ಗಂಟೆಯೂ ಲೋಕಾಯುಕ್ತ ಇಲಾಖೆ ಸಾರ್ವಜನಿಕರ ಸೇವೆಗೆ ಸಿದ್ಧವಿದ್ದು ಯಾವುದೇ ಸಂದರ್ಭದಲ್ಲಿಯೂ ನಮ್ಮನ್ನು ಸಂಪರ್ಕಿಸಿದರೆ ನ್ಯಾಯ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಇನ್ನೂ ನ್ಯೂಸ್ ಪೇಪರ್ ಅಸೋಸಿಯೇಷನ್ ಆಫ್ ಇಂಡಿಯಾ ಅಧ್ಯಕ್ಷ ಬಿ.ವಿ ವಾಸದೇವ ಮಾತನಾಡಿ ಗಡಿ ಭಾಗದ ಪತ್ರಕರ್ತರು ಸಮಸ್ಯೆಗಳು ಇಂದು ನೂರಾರು ಅಂತಹ ಸದ್ಗದ ಪರಸ್ಥಿತಿಯಲ್ಲಿ ಪತ್ರಕರ್ತರು ಜೀವನ ನಡೆಸುತ್ತಿದ್ದಾರೆ, ಪತ್ರಕರ್ತರ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸವನ್ನು ಕೊಡಿಸಲು ಸಾಧ್ಯವಾಗದ ಪರಿಸ್ಥಿತಿಗೆ ಇದ್ದಾರೆ, ಸರಕಾರ ಪತ್ರಕರ್ತರಿಗಾಗಿ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಸೂರು ಕಲ್ಪಿಸುವುದು ಪ್ರತಿ ತಾಲೂಕು ಮಟ್ಟದಲ್ಲಿ ಪತ್ರಕರ್ತರ ಭವನ ನಿರ್ಮಿಸುವುದು ಎಲ್ಲ ಪತ್ರಕರ್ತರಿಗೂ ಬಸ್ ಪಾಸ್ ವ್ಯವಸ್ಥೆ ಪತ್ರಕರ್ತರಿಗೆ ಪೊಲೀಸ್ ಇಲಾಖೆ ವತಿಯಿಂದ ಗುರುತಿನ ಚೀಟಿ ನಿವೃತ್ತಿ ಹೊಂದಿದ ಪತ್ರಕರ್ತರಿಗೆ ಮಾಸಾಶನ ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕಾಗಿದ್ದು ವಿಧಾನಸಭೆಯಲ್ಲಿ ಎಲ್ಲಾ ಶಾಸಕರು ಪತ್ರಕರ್ತರ ಪರವಾದ ಧ್ವನಿಯನ್ನು ಎತ್ತಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಮಾಧ್ಯಮ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ಕೆ ಶಿವಕುಮಾರ್, ಒಕ್ಕೂಟದ ಕಾರ್ಯದರ್ಶಿ ಡಿ.ಈಶ್ವರಪ್ಪ, ಚಿತ್ರದುರ್ಗ ಜಿಲ್ಲಾಧ್ಯಕ್ಷ ಅನಂತಮೂರ್ತಿ, ನಿವೃತ್ತ ಪ್ರಾಂಶುಪಾಲ ಎಚ್ ಜಯಪ್ಪ. ನಗರಸಭಾ ಸದಸ್ಯೆ ಸುಮಕ್ಕ .ನಾಗರಾಜ್ ಕಟ್ಟೆ .ದಾದಾಪೀರ್ ಚಿತ್ರನಟಿ ಸವಿತಾಮಲ್ಲೇಶ್ ನಾಯಕ್, ಸಂಜೀವಿನಿ ಲ್ಯಾಬ್ ಎಂ.ಎನ್ ಮೃತ್ಯುಂಜಯ. ನೃತ್ಯನಿಕೇತನ ವಿಷ್ಣುಮೂರ್ತಿ ರಾವ್, ಹರೀಶ್, ಹಿರಿಯ ಪತ್ರಕರ್ತ ಮೋಕ್ಷಗುಂಡA ವೆಂಕಟಸುಬ್ಬು. ಏಕಾಂತಪ್ಪ. ವೀಣಾ, ಗೌರಣ್ಣ, ರಮೇಶ್, ಮುತುವಲ್ಲಿ ನಾಯಕ್, ಸೇರಿದಂತೆ ಇತರರು ಉಪಸ್ಥಿತರಿದ್ದರು.

Namma Challakere Local News
error: Content is protected !!