ಚಳ್ಳಕೆರೆ : ಜೀ ಕನ್ನಡ ಖ್ಯಾತಿಯ ಜೂನಿಯರ್ ಅಂಬರೀಶ್ ಅನ್ಯ ಕಾರ್ಯ ನಿಮಿತ್ತ ಚಳ್ಳಕೆರೆಗೆ ಆಗಮಿಸಿದ ಸಂದರ್ಭದಲ್ಲಿ ನಗರದ ನೇತಾಜಿ ಸ್ನೇಹ ಬಳಗದ ವತಿಯಿಂದ ಸುರಕ್ಷಾ ಪಾಲಿ ಕ್ಲಿನಿಕ್ ನಲ್ಲಿ ಆತ್ಮೀಯವಾಗಿ ಗೌರವಸಿ ಸನ್ಮಾನಿಸಲಾಯಿತು. ಇನ್ನೂ ಮುಂದಿನ ದಿನಗಳಲ್ಲಿ , ಚಳ್ಳಕೆರೆ ನಗರದಲ್ಲಿ ” ಜೂನಿಯರ್ ತಂಡದವರಿAದ ಮನೋರಂಜನೆ ಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದಾಗಿ ಹೇಳಿದರು.
ಇನ್ನೂ ಈದೇ ಸಂಧರ್ಭದಲ್ಲಿ ನೇತಾಜಿ ಸ್ನೇಹ ಬಳಗದ ನೇತಾಜಿ ಪ್ರಸನ್ನ, ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷ ಆರ್.ಪ್ರಸನ್ನ ಕುಮಾರ್, ಕಾಂಗ್ರೇಸ್‌ನ ಅಲ್ಪಸಂಖ್ಯಾತರ ವಿಭಾಗದ ಸಂಘಟನಾ ಕಾರ್ಯದರ್ಶಿ , ಸುರಕ್ಷಾ ಪಾಲಿ ಕ್ಲಿನಿಕ್ ಬಿ.ಪರೀದ್ ಖಾನ್, ಮುತ್ತುರಾಜ್, ಇತರರು ಹಾಜರಿದ್ದರು.

Namma Challakere Local News
error: Content is protected !!