ರಾಮಾಂಜನೇಯ.ಕೆ ಚನ್ನಗಾನಹಳ್ಳಿ
ಚಳ್ಳಕೆರೆ: ಬಯಲು ಸೀಮೆ ಎಂದರೆ ಎಂಥವರಿಗೂ ನೆನಪಾಗುವುದು ಚಳ್ಳಕೆರೆ ತಾಲ್ಲೂಕು ಇಲ್ಲಿ ಕ್ಷಣಕ್ಷಣಕ್ಕೂ ಬಿಸಿಲ ಧಗೆಯು ಕಾವು ಹೆಚ್ಚಿ ಇದರ ಕಾವು ಪ್ರಾಣಿ ಸಂಕುಲಕ್ಕೆ ಬಡಿಯದೆ ಇರದು, ಇಂತಹ ಬರದ ನಾಡಿನಲ್ಲೂ ಅರಣ್ಯಕರಣ ಮಾಡುವುದು ಒಂದು ಸವಾಲೆ ಸರಿ. ಆದರೆ ಇಲ್ಲಿನ ಅರಣ್ಯ ಇಲಾಖೆ ಅಧಿಕಾರಿಗಳ ಸಹಾಯದಿಂದ ನಿರಂತರವಾಗಿ ಗಿಡಗಳ ಬೆಳೆಸುವಿಕೆ ರೈತರಿಗೆ ನೀಡುವುದು ವಾಡಿಕೆಯಾಗಿದೆ.
ಆದ್ದರಿಂದ ಈ ಬಾರಿ ಸುಮಾರು 1.50 ಲಕ್ಷÀ ಗಿಡಗಳ ನೆಡುವ ಗುರಿ ಹೊಂದಿದ್ದಾರೆ, ರೈತರಿಗೆ ಕೃಷಿ ಅರಣ್ಯ ಪ್ರೋತ್ಸಹ ಯೋಜನೆಯಡಿಯಲ್ಲಿ ಗಿಡಗಳನ್ನು ನೀಡಲಾಗುತ್ತಿದೆ, ಮತ್ತು ಶಾಲಾ ಕಾಲೇಜು, ಸಂಘ ಸಂಸ್ಥೆಗಳಿಗೆ ವಿತರಣೆ ಮಾಡಲಾಗುತ್ತದೆ ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ಬಾಬು ವಿಶ್ವವಾಣಿಗೆ ತಿಳಿಸಿದರು.
ಪ್ರಾದೇಶಿಕ ಅರಣ್ಯ ಇಲಾಖೆ ವತಿಯಿಂದ ಶಾಲಾ ಕಾಲೇಜು ಹಾಗೂ ಸರಕಾರಿ ಇಲಾಖೆಗಳ ಕಚೇರಿಗಳ ಆವರಣದಲ್ಲಿ ನಗರ ಹಸಿರೀಕರಣ ಯೋಜನೆಯಡಿಯಲ್ಲಿ ಗಿಡಗಳನ್ನು ಬೆಳೆಸಲು ಸಸಿಗಳನ್ನು ಉಚಿತವಾಗಿ ನೀಡುತ್ತಿದ್ದು, ಕೃಷಿ ಅರಣ್ಯ ಪ್ರೋತ್ಸಹ ಯೋಜನಡೆಯಡಿಯಲ್ಲಿ ರೈತರಿಗೆ 25 ಸಾವಿರ ಸಸಿಗಳನ್ನು 2 ರಿಂದ 3 ರೂ ನಂತೆ ಹೆಬ್ಬೇವು, ಟೀಕ್, ಸಿಲ್ಲವರ್, ಹೊಂಗೆ ಸಸಿಗಳನ್ನು ವಿತರಣೆ ಮಾಡಲಾಗುವುದು.
ಪ್ರೋತ್ಸವ ಧನ :
ಗಿಡಗಳನ್ನು ಪೋಷಣೆ ಮಾಡಲು ಮೂರು ವರ್ಷಗಳ ಪ್ರೋತ್ಸಹ ಧನವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಾಕಲಾಗುವುದು, ಪ್ರಥಮ ವರ್ಷಕ್ಕೆ 10 ರೂ, ಎರಡನೇ ವರ್ಷಕ್ಕೆ 15 ರೂ ಮೂರನೇ ವರ್ಷಕ್ಕೆ 20 ರೂ ನಂತೆ ರೈತರು ಪೋಷಣೆ ಮಾಡಿದ ಗಿಡಗಳನ್ನು ಲೆಕ್ಕಾ ಹಾಕಿ ಹಣವನ್ನು ನೀಡಲಾಗುವುದು ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ತಮ್ಮ ಜಮೀನಿನ ಬದು ಹಾಗೂ ಪಾಳು ಭೂಮಿಯಲ್ಲಿ ಗಿಡಗಳನ್ನು ನೆಡಲು ಮುಂದಾಗಿದ್ದಾರೆ ಎಂದು ಪತ್ರಿಕೆ ಮಾಹಿತಿ ನೀಡಿದರು.
ಕಳೆದ ಸಾಲಿನಲ್ಲಿ ಅರಣ್ಯ ಇಲಾಕೆಯಿಂದ ಬೃಹತ್ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡು, ಶಾಲೆ-ಕಾಲೇಜು, ಸರಕಾರಿ ಕಚೇರಿ, ಗ್ರಾಪಂ ಆವರಣ, ಸಾರಿಗೆ ಘಟಕ, ರಸ್ತೆ ಬದಿ ಸೇರಿದಂತೆ ಅರಣ್ಯ ಪ್ರದೇಶದಲ್ಲಿ 10 ಸಾವಿರ ಕ್ಕೂ ಹೆಚ್ಚು ಸಸಿಗಳನ್ನು ಹಾಕಲಾಗಿತ್ತು. ಈ ಬಾರಿ ಸಂಘ, ಸಂಸ್ಥೆಗಳು, ಸಾರ್ವಜನಿಕರಿಗೂ ಉಚಿತವಾಗಿ ÷ಬೇವು, ಕಾಡು ಬಾದಾಮಿ, ಅರಳಿ, ನೇರಳೆ, ಅಕೇಶಿಯ, ಸಂಪಿಗೆ, ಹಲಾ, ಹೊಂಗೆ, ತೇಗಾ, ಸಿಲ್ವಾರ್ ಹಲವಾರು ಜಾತಿಯ ಗಿಡಗಳನ್ನು ಬೆಳೆಸಿ ಶಾಲೆ, ಕಾಲೇಜು, ಸಂಘ, ಸಂಸ್ಥೆಗಳ, ರೈತರಿಗೆ ನೀಡಿದ ನಂತರ ಉಳಿಯುವ ಲಕ್ಷಾಂತರ ಸಸಿಗಳನ್ನು ಅರಣ್ಯ ಇಲಾಖೆ ನೆಡುತೋಪುಗಳಲ್ಲಿ ನೆಡಲಾಗಿತ್ತು ಎಂಬ ಮಾಹಿತಿಯನ್ನು ಮೆಲಕು ಹಾಕಿದರು.
ಬಾಕ್ಸ್ ಮಾಡಿ:
ಇಲಾಖೆಯಿಂದ ಸಸಿಗಳನ್ನು ಹಾಕಲು ಮತ್ತು ಬೆಳೆಸಲು ಪ್ರೋತ್ಸಹ ನೀಡುತ್ತಿದ್ದು ಎಲ್ಲಾ ಶಾಲಾ ಕಾಲೇಜುಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹಾಕಲು ಸೂಚಿಸಿದ್ದು ರಸ್ತೆ ಬದಿ, ಹಾಗೂ ಶಾಲಾ ಆವರಣದಲ್ಲಿ ಬೆಳೆಸಲು ತಿಳಿಸಿದೆ.-
—- ಬಾಬು ಸಾಮಾಜಿಕ ವಲಯ ಅರಣ್ಯಾಧಿಕಾರಿ

ಚಳ್ಳಕೆರೆ ಸುತ್ತಲೂ ಈಗಾಗಲೆ ಸುಮಾರು ಸಾವಿರಾರು ಎಕರೆ ಪರಿಸರದ ಜಾಗವನ್ನು, ಖಾಸಗಿ ಸಂಸ್ಥೆಗಳು ಆಕ್ರಮಿಸಿಕೊಂಡು ಇಂದು ತಾಲೂಕು ಬರಡು ಭೂಮಿಯ ತಾಲೂಕು ಬಂಜರು ಭೂಮಿಯಾಗುವ ಸಾಧ್ಯತೆಗಳು ಇದ್ದು, ಸಂಕಷ್ಠಕ್ಕೆ ಸಿಲುಕುವ ಪರಿಸ್ಥಿತಿ ಬಂದಿದೆ. ಆದ್ದರಿಂದ ಇರುವ ಖಾಲಿ ಪ್ರದೇಶದಲ್ಲಿ ಗಿಡಗಳ್ನು ಬೆಳೆಸಿಕೊಳ್ಳಬೇಕು.
—ದಯಾನಂದ ಮೂರ್ತಿ ಪ್ರಗತಿರ ರೈತ.
ಫೋಟೊ, ಚಳ್ಳಕೆರೆಯ ಸಸ್ಯಕ್ಷೇತ್ರದಲ್ಲಿ ಬೇವು, ಕಾಡು ಬಾದಾಮಿ,ಅರಳಿ, ನೇರಳೆ, ಅಕೇಶಿಯ, ಸಂಪಿಗೆ,ಅಲ, ಹೊಂಗೆ, ತೇಗಾ, ಸಿಲ್ವಾರ್ ಹಲವಾರು ಜಾತಿಯ ಗಿಡಗಳನ್ನು ಬೆಳೆಸಿರುವುದು.

Namma Challakere Local News
error: Content is protected !!