ಭಾರತ್ ಜೋಡೋ ಪಾದಯಾತ್ರೆಯಲ್ಲಿ ಬಿಜೆಪಿ ವಿರುದ್ಧ ಕುಟುಕಿದ ರಾಹುಲ್ ಗಾಂಧಿ

ಚಳ್ಳಕೆರೆ : ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡರು, ಮಾಜಿ ಸಿಎಂ ಯಡಿಯೂರಪ್ಪ, ಸಚಿವ ಈಶ್ವರಪ್ಪ ರಾಜಿನಾಮೆ ಏಕೆ ಕೊಟ್ಟರು ಎಂದು ಕಾಂಗ್ರೇಸ್ ಮುಖಂಡ ರಾಹುಲ್ ಗಾಂಧಿ ಬಿಜೆಪಿ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ.
ಅವರು ನಗರಕ್ಕೆ ಭಾರತ್ ಜೋಡೋ ಯಾತ್ರೆಯಲ್ಲಿ ಸಾಗಿ ಬಂದು ನಗರದ ಸಿದ್ದಾಪುರ ಬಳಿ ಸಾರ್ವಜನಿಕರ ಸಭೆಯಲ್ಲಿ ಜಿಟಿ ಜಿಟಿ ಮಳೆಯಲ್ಲಿ ಆಡಳಿತ ಪಕ್ಷ ಬಿಜೆಪಿಯನ್ನು ಕುಟುಕಿದರು.
ಕನಾಟಕ ರಾಜ್ಯ ಸರ್ಕಾರ ಪ್ರತಿಯೊಬ್ಬರಿಂದ ಹಣ ಲೂಟಿ ಮಾಡುತ್ತಿದೆ ಪಿಎಸ್‌ಐ 80ಲಕ್ಷ ಸಣ್ಣ ಪುಟ್ಟ ಕೆಲಸಕ್ಕೆ 5ಲಕ್ಷ ತೆಗೆದುಕೊಳ್ಳಿದ್ದಾರಂತೆ ಇನ್ನೂ 2.50ಲಕ್ಷ ಉದ್ಯೋಗ ಖಾಲಿಯಿದ್ದು ಯುವಕರು ಉದ್ಯೋಗಕ್ಕೆ ಪರದಾಡುತ್ತಿದ್ದಾರೆ.
ನಾವು ಕನ್ಯಾಕುಮಾರಿಯಿಂದ ಚಳ್ಳಕೆರೆಗೆ ನಡೆದುಕೊಂಡು ಬಂದಿದ್ದು ದಾರಿಯುದ್ದಕ್ಕೂ ಜನರು ಸಾಕಷ್ಟು ಪ್ರೀತಿ ತೋರಿತ್ತಿದ್ದಾರೆ.
ಪ್ರತಿಯೊಬ್ಬರು ಸಹ ಜಾತಿ ಬೇಧ ಮರೆತು ನನ್ನ ಜೊತೆ ಹೆಜ್ಜೆ ಹಾಕುತ್ತಿದ್ದಾರೆ. ನಾವು ನಡೆಯುವಾಗ ಮಳೆ, ಗಾಳಿ ಬಿಸಿಲಿಗೆ ಎಲ್ಲೂ ತಗ್ಗದೆ ನಡೆದು ಕೊಂಡು ಬರುತ್ತಿದ್ದು ಜನರ ಪ್ರೀತಿಗೆ ಇದ್ಯಾವುದೂ ಕಾಣಲಿಲ್ಲ ಜೀವನದಲ್ಲಿ ನಿತ್ಯ ಎಡವುತ್ತೆವೆ.
ಯಾತ್ರೆಯಲ್ಲಿ ಹಲವಾರು ನಡೆಯುವಾಗ ಬಿದ್ದರೆ ತಕ್ಷಣ ಯಾತ್ರೆಯಲ್ಲಿ ಜೊತೆಗಿರುವವರು ಎಬ್ಬಿಸಿ ನೀರು ಕೊಟ್ಟು ಸಂತೈಸಿ ಆರೈಕೆ ನೀಡುತ್ತಾರೆ. ಇದರಿಂದ ಅವನಿಗೂ ಸಹ ವಿಶ್ವಾಸ ಬರುತ್ತದೆ.
ಭಾರತ ದೆಶದಲ್ಲಿ ಒಬ್ಬ ರೈತ ಬಿದ್ದರೆ ಈಡೀ ಭಾರತ ರಕ್ಷÀಣೆ ಕೊಡುತ್ತದೆ ತಂದೆ ತಾಯಿಗೆ ಭರವಸೆ ಸಿಗುತ್ತದೆ. ನೀವು ಭಾರತ್ ಜೋಡೋ ಯಾತ್ರೆಯಲ್ಲಿ ಸಾವಿರಾರು ಮಹಿಳೆಯರು ಭಾಗಿಯಾಗುತ್ತಿದ್ದಾರೆ ಯಾರು ಎದುರುತ್ತಿಲ್ಲ.
ಕರ್ನಾಟಕ ರಾಜ್ಯದ ಮಂತ್ರಿಗಳು ಹೇಳುತ್ತಾರೆ 2500 ಕೋಟಿ ಬೇಕು ಸಿಎಂ ಆಗಲು ಎನ್ನುತ್ತಾರೆ ಎಂದರೆ ರಾಜ್ಯದ ಪರಸ್ಥಿತಿ ಎಲ್ಲಿಗೆ ಬಂದಿದೆ ನೋಡಿ.
ಹೆಣ್ಣು ಮಕ್ಕಳು ಹುಡುವ ಬಟ್ಟೆಯಿಂದ ಅತ್ಯಾಚಾರ ಆಗುತ್ತದೆ ಎಂದು ಹೇಳುತ್ತಿದ್ದು ದೇಶದ ಹೆಣ್ಣು ಮಕ್ಕಳಿಗೆ ಮಾಡುವ ಅವಮಾನ ಆಗಿದೆ. ಒಬ್ಬ ಮನುಷ್ಯ ಒಂದು ಕಲ್ಲು ಬಂಡೆಯ ಮಧ್ಯೆ ತೂರುವ ಕಷ್ಟಕ್ಕೆ ಬಿಜೆಪಿ ತಂದು ಬಿಟ್ಟಿದೆ.
ನಾನು ರೈತರಿಗೆ ಗೊಬ್ಬರ ಬೀಜಕ್ಕೆ ಎಷ್ಟು ಖರ್ಚು ಮಾಡುತ್ತಾರೆ ಎಂದಾಗ, ನಾನು ಒಬ್ಬ ರೈತನು ನನಗೆ ಲಾಭ ಸಿಗುತ್ತಿಲ್ಲ. ಸರ್ಕಾರದಿಂದ ಯಾವುದೇ ಸೌಲಭ್ಯ ಇಲ್ಲ, ಕೃಷಿಕರು ಸರ್ಕಾರದ ಸಹಾಯದಿಂದ ಹಣ ಮಾಡಲು ಎಂದು ಸಾಧ್ಯವಿಲ್ಲ.
ಮೊಟ್ಟ ಮೊದಲ ಬಾರಿಗೆ ಒಬ್ಬ ರೈತ ಜಿಎಸ್‌ಟಿ ಕೊಡುತ್ತಿದ್ದಾನೆ ರೈತ ಉಪಕರಣ ಮೇಲೆ ಸಹ ಕಟ್ಟುತ್ತಾರೆ ಕರ್ನಾಟಕ 2023ರಲ್ಲಿ ಬರುವ ಕಾಂಗ್ರೇಸ್ ಸರ್ಕಾರ ರೈತರ ಬಗ್ಗೆ ಕಾಳಜಿ ವಹಿಸಬೇಕು ಬಿಜೆಪಿ ಪಕ್ಷ ರೈತರಿಗೆ ಕೂಲಿ ರ್ಕಾಮಿಕರು, ಬೀದಿ ವ್ಯಾಪಾರಿಗಳಿಗೆ, ಸಣ್ಣ ವ್ಯಾಪರಿಗಳಿಗೆ ಸಹಾಯ ಮಾಡದೆ ಶ್ರೀಮಂತರಿಗೆ ಸಹಾಯ ಮಾಡುತ್ತಿದೆ.
ಇಂತಹ ಎಲ್ಲಾ ಸಮಸ್ಯೆಗಳಿಗೆ ಬಿಜೆಪಿ ನೆರÀಹೊಣೆ ಎಂದು ಕುಟುಕಿದರು.
ಈ ಸಂಧರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ, ಎಐಸಿಸಿ ವೇಣುಗೋಪಾಲ್, ಪ್ರದಾನ ಕಾರ್ಯದರ್ಶಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್ ವಿಪಕ್ಷ ನಾಯಕ ಬಿಕೆ.ಹರಿಪ್ರಸಾದ್, ಡಿ.ಕೆ.ಸುರೇಶ್, ಪ್ರಿಯಾಂಕ ಖರ್ಗೆ, ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಮಾಜಿ ಸಚಿವ ಹೆಚ್. ಆಂಜನೇಯ, ಸುಧಾಕರ್, ಲಕ್ಷ್ಮೀ ಹೆಬ್ಬಾಳಕರ್, ಸೇರಿದಂತೆ ಹಲವು ಗಣ್ಯರು ಇದ್ದರು..

ಪೋಟೋ ಚಳ್ಳಕೆರೆ ಕ್ಷೇತ್ರದಲ್ಲಿ ಸಾಗುವ ಪಾದಯಾತ್ರೆಯ ದಾರಿಯಲ್ಲಿ ರಾಹುಲ್ ಬಿಜೆಪಿ ವಿರುಧ್ದ ಬ್ಯಾಟ್ ಮಾಡಿದರು.

Namma Challakere Local News
error: Content is protected !!