ನಾಯಕನಹಟ್ಟಿ ದೊಡ್ಡಕೆರೆ ಕೋಡಿ ಬಿದ್ದ ಹಿನ್ನಲೆಯಲ್ಲಿ -ಕೆರೆ ಬಳಿ ಮುಂಜಾಗ್ರತಾ ಕ್ರಮಗಳನ್ನು ಸೂಚಿಸಿದ : ತಹಶಿಲ್ದಾರ್ ಎನ್.ರಘುಮೂರ್ತಿ

ಚಳ್ಳಕೆರೆ : ಕಾಯಕ ಯೋಗಿ ಶ್ರೀ ಗುರು ತಿಪ್ಪೆರುದ್ರಸ್ವಾಮಿ, ಹಾಗೂ ಪವಾಡ ಪುರುಷನ ನೆಲೆಸಿರುವಂತಹ ನಾಯಕನಹಟ್ಟಿ ಐತಿಹಾಸಿಕ ದೊಡ್ಡಕೆರೆ ತುಂಬಿ ಕೋಡಿ ಬಿದ್ದುದರಿಂದ ಈ ಭಾಗದ ಜನರಲ್ಲಿ ಸಂತೋಷ ಮನೆ ಮಾಡಿದೆ.


ಇನ್ನೂ ತಹಶಿಲ್ದಾರ್ ಎನ್ ರಘುಮೂರ್ತಿ ಬೇಡಿನೀಡಿ ಪುರಾತನ
ಕಾಲದಿಂದಲೂ ಜನರ ಜೀವ ಜಲವಾದ ನಾಯಕನಹಟ್ಟಿ ದೊಡ್ಡ ಕೆರೆ ತುಂಬಿ ಕೊಡಿ ಬಿದ್ದಿದ್ದು ಈ ಭಾಗದ ಜನರ ದಾಹ ತೀರಿದಂತಾಗಿದೆ. ಆದ್ದರಿಂದ ಜನರು ಈ ಕೆರೆಯ ಅಸು ಪಾಸು ಮಕ್ಕಳು ಮತ್ತು ಮಹಿಳೆಯರನ್ನು ಬಟ್ಟೆ ತೊಳೆಯಲು ಮತ್ತು ಅನ್ನು ಕಾರ್ಯಗಳತ್ತದಾವಿಸಬಾರದು, ಸುರಕ್ಷಿತವಾಗಿ ಜನರು ಕೆರೆಯ ಬಳಿ ಹೋಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ನೀಡಲಾಗಿದೆ


ಸಾರ್ವಜನಿಕರಿಗೆ ಕುಡಿಯುವ ನೀರುಣಿಸಬೇಕಾಗಿರುವುದರಿಂದ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಹಾಗೂ ಪಟ್ಟಣ ಅಧ್ಯಕ್ಷರುಗಳೊಂದಿಗೆ ಸದರಿ ಕೆರೆಗೆ ಭೇಟಿ ನೀಡಿ 12 ವರ್ಷದ ತರುವಾಯ ಈ ಕೆರೆ ತುಂಬಿದೆ ಇನ್ನೂ ಮಾನ್ಸೂನ್ ನಂತರದ ಮಳೆಗಳು ಉತ್ತಮವಾಗಿ ಬೀಳುವ ನಿರೀಕ್ಷೆಯಿದ್ದು ಸಾರ್ವಜನಿಕರು ಅತ್ಯಂತ ಜೋಪಾನವಾಗಿರಬೇಕು
ಜನರು ಜಾಗ್ರತೆಯಿಂದ ಇರಬೇಕು ಪಟ್ಟಣದ ಜೀವ ಜಲ ಆಗಿರುವುದರಿಂದ ನೀರಿನ ಬಳಕೆ ಬಗ್ಗೆ ಮಹತ್ವ ವಹಿಸಬೇಕು ಕೆರೆಯನ್ನು ನೋಡಲು ಬರುವಂತಹ ಸಾರ್ವಜನಿಕರು ಕೆರೆ ನೀರೊಳಗಿಳಿಯ ಕೂಡದು ಅದರಲ್ಲೂ ಮಹಿಳೆಯರು ಮತ್ತು ಮಕ್ಕಳು ಅತ್ಯಂತ ಕಾಳಜಿ ವಹಿಸಬೇಕೆಂದು ಮನವಿ ಮಾಡಿದರು

ಇದೇ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಪಟ್ಟಣ ಪಂಚಾಯಿತಿ ಮುಖಂಡರಾದAತ ಬೋರುಸ್ವಾಮಿ, ಬಸಣ್ಣ, ಮುದಿಯಪ್ಪ, ಕುದಾಪುರ ಪ್ರಕಾಶ್ , ಎನ್ ದೇವರಲ್ಲಿ ಪಂಚಾಯಿತಿ ಅಧ್ಯಕ್ಷ ಡಾ.ಕಾಟಂ ಲಿಂಗಯ್ಯ ಮತ್ತಿತರು

Namma Challakere Local News
error: Content is protected !!