ಗೌರಸಮುದ್ರ ಮಾರಮ್ಮ ದೇವಿ ಗ್ರಾಮಕ್ಕಿಲ್ಲ ಮೂಲ ಭೂತ ಸೌಲಭ್ಯ..! ಭಕ್ತಾಧಿಗಳ ಗೋಳು ಕೇಳುರ‍್ಯಾರು..?

ಚಳ್ಳಕೆರೆ : ಚಿತ್ರದುರ್ಗ ಜಿಲ್ಲೆಯ ಐತಿಹಾಸಿಕ ಜಾತ್ರೆಗಳಲ್ಲಿ ಒಂದಾದ ಜಿಲ್ಲೆಯ ಬಹುದೊಡ್ಡ ಜಾತ್ರೆಗಳಲ್ಲಿ ಎರಡನೆ ದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಶ್ರೀಗೌರಸಮುದ್ರ ಮಾರಮ್ಮ ದೇವಿ ಜಾತ್ರೆಗೆ ಸಲ್ಲುತ್ತದೆ.


ಬುಡಕಟ್ಟು ಸಂಪ್ರಾದಯಕ್ಕೆ ಒಂದಾದ ಗೌರಸಮುದ್ರ ಮಾರಮ್ಮನ ಜಾತ್ರೆ ಈ ಭಾಗದ ಸಂಸ್ಕೃತಿಯ ಪ್ರತೀಕವಾಗಿದೆ. ತಾಲ್ಲೂಕಿನ ಬಹುದೊಡ್ಡ ಜಾತ್ರೆಗಳಲ್ಲಿ ಒಂದಾದ ಈ ಜಾತ್ರೆಗೆ ವಿಶೇಷವಾಗಿ ಪ್ರತಿ ವರ್ಷವು ಕರ್ನಾಟಕದಿಂದ, ಆಂಧ್ರಪ್ರದೇಶದವರೆಗೂ ಲಕ್ಷಾಂತರ ಭಕ್ತರನ್ನು ತನ್ನತ ಸೇಳೆಯುವ ಆಗಾಧವಾದ ಶಕ್ತಿ ಈ ದೇವಿಗಿದೆ.


ಚಳ್ಳಕೆರೆ ತಾಲೂಕಿನ ಗೌರಸಮುದ್ರದ ಮಾರಮ್ಮ ದೇವಿ ಜಾತ್ರೆಯು ಕೊವಿಡ್ ಕಾರಣದಿಂದ ಎರಡು ವರ್ಷಗಳ ಕಾಲ ಸರಳವಾಗಿ ಆಚರಿಸಿರುವುದರಿಂದ ಈ ಸಲ ಜಾತ್ರೆಗೆ ಕನಿಷ್ಠ 7ರಿಂದ 8 ಲಕ್ಷ ಭಕ್ತಾದಿಗಳು ಸೇರುವ ನಿರೀಕ್ಷೆಯನ್ನು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.


ಸರಕಾರದ ಮುಜಾರಾಯಿ ಇಲಾಖೆಗೆ ಒಳಪಟ್ಟಿದ್ದರು ಕೂಡ ನಿಲ್ಯಕ್ಷö್ಯ ದೋರಣೆ ಸಲ್ಲದು.
ಇಷ್ಟು ಅದ್ದೂರಿಯಾಗಿ ನಡೆಯುವ ಈ ಜಾತ್ರೆಯಲ್ಲಿ ಸಕಲ ಮೂಲ ಭೂತ ಸೌಲಭ್ಯಗಳನ್ನು ಸರಕಾರದ ಅದೀನ ಅಧಿಕಾರಿಗಳು ಮಾಡಬೇಕಾದ ಅನಿವಾರ್ಯತೆ ಕೂಡ ಇದೆ.


ಆದರೆ ಈ ಜಾತ್ರೆಗೆ ಮೂಲ ಸೌಲಭ್ಯಗಳ ಕೊರತೆಯು ಎದ್ದು ಕಾಣುತ್ತದೆ.
ಇಂತಹ ಪವಾಡವುಳ್ಳ ಆದಿಶಕ್ತಿ ದೇವಿ ಶ್ರೀ ಮಾರಮ್ಮ ದೇವಿ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವು ವಿಪರ್ಯಾಸವೇ ಸರಿ.


ಈಡೀ ರಾಜ್ಯದಲ್ಲಿ ಈ ದೇವಿ ಜಾತ್ರೆಯು ಆಗಸ್ಟ್ ತಿಂಗಳಲ್ಲಿ ನಡೆಯುವುದು ವಿಶೇಷವಾಗಿದೆ ಆದರೆ ಇಲ್ಲಿ ಬರುವ ಭಕ್ತಾಧಿಗಳಿಗೆ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಶೌಚಾಲಯದ ವ್ಯವಸ್ಥೆ ಇಲ್ಲ, ಸ್ನಾನದ ಗೃಹಗಳಿಲ್ಲ, ಹಾಗೂ ದೇವಿ ದರ್ಶನಕ್ಕೆ ಬಂದ ಭಕ್ತಾಧಿಗಳ ವಸತಿ ಗೃಹಗಂಳತ್ತೂ ಇಲ್ಲವೆ ಇಲ್ಲ, ಈಗೇ ಸಾಲು ಸಾಲು ಸಮಸ್ಯೆಗಳು ಈ ದೇವಿ ಗ್ರಾಮದಲ್ಲಿ ತಾಂಡವಾಡುತ್ತಿವೆ, ಇನ್ನೂ ಇದರ ಬಗ್ಗೆ ಎಚ್ಚೆತ್ತುಕೊಳ್ಳಬೇಕಾದ ಜಿಲ್ಲಾ ಆಡಳಿತ ಕೂಡ ದಿವ್ಯ ನಿಲ್ಯಕ್ಷö್ಯ ವಹಿಸಿರುವುದು ಶೋಚನೀಯ,
ದೇವಿ ದರ್ಶನಕ್ಕೆ ಬರುವ ಮಹಿಳೆಯರು ಸ್ನಾನದ ಗೃಹಗಳಿಲ್ಲದೆ ಸೀರೆ ಹಾಗೂ ಇನ್ನಿತರೆ ಬಟ್ಟೆಯನ್ನು ಶೌಚಾಲಯದಂತೆ ನಿರ್ಮಿಸಿಕೊಂಡು ಸ್ನಾನ ಮಾಡುವುದು ಪ್ರಜ್ಞಾನವಂತ ಸಮಾಜ ತಲೆ ತಗ್ಗಿಸುವಂತೆ ಇದೆ.

ಈಡೀ ಜಿಲ್ಲೆಯ ಆಡಳಿತದ ಚುಕ್ಕಾಣಿ ಹಿಡಿದ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕೂಡ ಮಹಿಳೆಯರು ಎಂಬುದು ಇಲ್ಲಿ ಮನಗಾಣಬೇಕಿದೆ,.


ಕೋಟಿ ಗಟ್ಟಲೆ ಅನುದಾನವನ್ನು ತಂದು ಕ್ಷೇತ್ರದ ಅಭಿವೃದ್ದಿಗೆ ಕಂಕಣ ಬದ್ದರಾದ ಸ್ಥಳೀಯ ಶಾಸಕರು ಈ ಗ್ರಾಮವನ್ನು ಮರೆತಂತಿದೆ ಹೌದು ನಿಜಕ್ಕೂ ಶೋಚನೀಯ , ಕ್ಷೇತ್ರವನ್ನು ಪ್ರತಿನಿಧಿಸಿದ ಕ್ಷೇತ್ರದ ಶಾಸಕ ಹಾಗೂ ಸಾರಿಗೆ ಸಚಿವರ ಸೇವೆಯಂತೆ ಮರಿಚೀಕೆಯಾಗಿದೆಯಂದು ಇಲ್ಲಿನ ಸಾರ್ವಜನಿಕರ ಮಾತಾಗಿದೆ.
ಇನ್ನೂ ಈ ದೇವಿಯ ಗ್ರಾಮಕ್ಕೆ ಯಾವುದೇ ಅನುದಾನ ಕೂಡ ನೀಡಿಲ್ಲ ಎಂಬ ಆರೋಪಗಳು ಬಲವಾಗಿ ಕೇಳಿ ಬರುತ್ತಿವೆ, ಈಗೇ ಲಕ್ಷಾಂತರ ಭಕ್ತರನ್ನು ಒಳಗೊಂಡ ಈ ಕ್ಷೇತ್ರದ ದೇವಿಯು ಸಂಕಷ್ಟದಲ್ಲಿ ಇದ್ದಾಳೆ ಎಂಬುದು ಮಾತ್ರ, ಸತ್ಯಕ್ಕೆ ಹತ್ತಿರವಾಗಿದೆ.

ಗೌರಸಮುದ್ರ ಮಾರಮ್ಮ ದೇವಿ ಗ್ರಾಮಕ್ಕಿಲ್ಲ ಮೂಲ ಭೂತ ಸೌಲಭ್ಯ..! ಭಕ್ತಾಧಿಗಳ ಗೋಳು ಕೇಳುರ‍್ಯಾರು..?

ಚಳ್ಳಕೆರೆ : ಚಿತ್ರದುರ್ಗ ಜಿಲ್ಲೆಯ ಐತಿಹಾಸಿಕ ಜಾತ್ರೆಗಳಲ್ಲಿ ಒಂದಾದ ಜಿಲ್ಲೆಯ ಬಹುದೊಡ್ಡ ಜಾತ್ರೆಗಳಲ್ಲಿ ಎರಡನೆ ದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಶ್ರೀಗೌರಸಮುದ್ರ ಮಾರಮ್ಮ ದೇವಿ ಜಾತ್ರೆಗೆ ಸಲ್ಲುತ್ತದೆ.
ಬುಡಕಟ್ಟು ಸಂಪ್ರಾದಯಕ್ಕೆ ಒಂದಾದ ಗೌರಸಮುದ್ರ ಮಾರಮ್ಮನ ಜಾತ್ರೆ ಈ ಭಾಗದ ಸಂಸ್ಕೃತಿಯ ಪ್ರತೀಕವಾಗಿದೆ. ತಾಲ್ಲೂಕಿನ ಬಹುದೊಡ್ಡ ಜಾತ್ರೆಗಳಲ್ಲಿ ಒಂದಾದ ಈ ಜಾತ್ರೆಗೆ ವಿಶೇಷವಾಗಿ ಪ್ರತಿ ವರ್ಷವು ಕರ್ನಾಟಕದಿಂದ, ಆಂಧ್ರಪ್ರದೇಶದವರೆಗೂ ಲಕ್ಷಾಂತರ ಭಕ್ತರನ್ನು ತನ್ನತ ಸೇಳೆಯುವ ಆಗಾಧವಾದ ಶಕ್ತಿ ಈ ದೇವಿಗಿದೆ.


ಚಳ್ಳಕೆರೆ ತಾಲೂಕಿನ ಗೌರಸಮುದ್ರದ ಮಾರಮ್ಮ ದೇವಿ ಜಾತ್ರೆಯು ಕೊವಿಡ್ ಕಾರಣದಿಂದ ಎರಡು ವರ್ಷಗಳ ಕಾಲ ಸರಳವಾಗಿ ಆಚರಿಸಿರುವುದರಿಂದ ಈ ಸಲ ಜಾತ್ರೆಗೆ ಕನಿಷ್ಠ 7ರಿಂದ 8 ಲಕ್ಷ ಭಕ್ತಾದಿಗಳು ಸೇರುವ ನಿರೀಕ್ಷೆಯನ್ನು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಸರಕಾರದ ಮುಜಾರಾಯಿ ಇಲಾಖೆಗೆ ಒಳಪಟ್ಟಿದ್ದರು ಕೂಡ ನಿಲ್ಯಕ್ಷö್ಯ ದೋರಣೆ ಸಲ್ಲದು.
ಇಷ್ಟು ಅದ್ದೂರಿಯಾಗಿ ನಡೆಯುವ ಈ ಜಾತ್ರೆಯಲ್ಲಿ ಸಕಲ ಮೂಲ ಭೂತ ಸೌಲಭ್ಯಗಳನ್ನು ಸರಕಾರದ ಅದೀನ ಅಧಿಕಾರಿಗಳು ಮಾಡಬೇಕಾದ ಅನಿವಾರ್ಯತೆ ಕೂಡ ಇದೆ.


ಆದರೆ ಈ ಜಾತ್ರೆಗೆ ಮೂಲ ಸೌಲಭ್ಯಗಳ ಕೊರತೆಯು ಎದ್ದು ಕಾಣುತ್ತದೆ.
ಇಂತಹ ಪವಾಡವುಳ್ಳ ಆದಿಶಕ್ತಿ ದೇವಿ ಶ್ರೀ ಮಾರಮ್ಮ ದೇವಿ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವು ವಿಪರ್ಯಾಸವೇ ಸರಿ.


ಈಡೀ ರಾಜ್ಯದಲ್ಲಿ ಈ ದೇವಿ ಜಾತ್ರೆಯು ಆಗಸ್ಟ್ ತಿಂಗಳಲ್ಲಿ ನಡೆಯುವುದು ವಿಶೇಷವಾಗಿದೆ ಆದರೆ ಇಲ್ಲಿ ಬರುವ ಭಕ್ತಾಧಿಗಳಿಗೆ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಶೌಚಾಲಯದ ವ್ಯವಸ್ಥೆ ಇಲ್ಲ, ಸ್ನಾನದ ಗೃಹಗಳಿಲ್ಲ, ಹಾಗೂ ದೇವಿ ದರ್ಶನಕ್ಕೆ ಬಂದ ಭಕ್ತಾಧಿಗಳ ವಸತಿ ಗೃಹಗಂಳತ್ತೂ ಇಲ್ಲವೆ ಇಲ್ಲ, ಈಗೇ ಸಾಲು ಸಾಲು ಸಮಸ್ಯೆಗಳು ಈ ದೇವಿ ಗ್ರಾಮದಲ್ಲಿ ತಾಂಡವಾಡುತ್ತಿವೆ, ಇನ್ನೂ ಇದರ ಬಗ್ಗೆ ಎಚ್ಚೆತ್ತುಕೊಳ್ಳಬೇಕಾದ ಜಿಲ್ಲಾ ಆಡಳಿತ ಕೂಡ ದಿವ್ಯ ನಿಲ್ಯಕ್ಷö್ಯ ವಹಿಸಿರುವುದು ಶೋಚನೀಯ,


ದೇವಿ ದರ್ಶನಕ್ಕೆ ಬರುವ ಮಹಿಳೆಯರು ಸ್ನಾನದ ಗೃಹಗಳಿಲ್ಲದೆ ಸೀರೆ ಹಾಗೂ ಇನ್ನಿತರೆ ಬಟ್ಟೆಯನ್ನು ಶೌಚಾಲಯದಂತೆ ನಿರ್ಮಿಸಿಕೊಂಡು ಸ್ನಾನ ಮಾಡುವುದು ಪ್ರಜ್ಞಾನವಂತ ಸಮಾಜ ತಲೆ ತಗ್ಗಿಸುವಂತೆ ಇದೆ.

ಈಡೀ ಜಿಲ್ಲೆಯ ಆಡಳಿತದ ಚುಕ್ಕಾಣಿ ಹಿಡಿದ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕೂಡ ಮಹಿಳೆಯರು ಎಂಬುದು ಇಲ್ಲಿ ಮನಗಾಣಬೇಕಿದೆ,.


ಕೋಟಿ ಗಟ್ಟಲೆ ಅನುದಾನವನ್ನು ತಂದು ಕ್ಷೇತ್ರದ ಅಭಿವೃದ್ದಿಗೆ ಕಂಕಣ ಬದ್ದರಾದ ಸ್ಥಳೀಯ ಶಾಸಕರು ಈ ಗ್ರಾಮವನ್ನು ಮರೆತಂತಿದೆ ಹೌದು ನಿಜಕ್ಕೂ ಶೋಚನೀಯ , ಕ್ಷೇತ್ರವನ್ನು ಪ್ರತಿನಿಧಿಸಿದ ಕ್ಷೇತ್ರದ ಶಾಸಕ ಹಾಗೂ ಸಾರಿಗೆ ಸಚಿವರ ಸೇವೆಯಂತೆ ಮರಿಚೀಕೆಯಾಗಿದೆಯಂದು ಇಲ್ಲಿನ ಸಾರ್ವಜನಿಕರ ಮಾತಾಗಿದೆ.


ಇನ್ನೂ ಈ ದೇವಿಯ ಗ್ರಾಮಕ್ಕೆ ಯಾವುದೇ ಅನುದಾನ ಕೂಡ ನೀಡಿಲ್ಲ ಎಂಬ ಆರೋಪಗಳು ಬಲವಾಗಿ ಕೇಳಿ ಬರುತ್ತಿವೆ, ಈಗೇ ಲಕ್ಷಾಂತರ ಭಕ್ತರನ್ನು ಒಳಗೊಂಡ ಈ ಕ್ಷೇತ್ರದ ದೇವಿಯು ಸಂಕಷ್ಟದಲ್ಲಿ ಇದ್ದಾಳೆ ಎಂಬುದು ಮಾತ್ರ, ಸತ್ಯಕ್ಕೆ ಹತ್ತಿರವಾಗಿದೆ.

Namma Challakere Local News
error: Content is protected !!