ಚಳ್ಳಕೆರೆ : ರೈತರ ಪಂಪ್ ಸೆಟ್ ಗಳಿಗೆ ನಿರಂತರ ವಿದ್ಯುತ್ ಪೂರೈಕೆ ಮತ್ತು ಟಿಸಿ ಕೆಟ್ಟ ಸಂಧರ್ಭದಲ್ಲಿ ಅತೀ ತುರ್ತಾಗಿ ಪೂರೈಕೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಅವರು ಚಳ್ಳಕೆರೆ ತಾಲೂಕಿನ ತಳಕು ಹೋಬಳಿಯ ಬೆಸ್ಕಾಂ ಕಛೇರಿಯ ಮುಂದೆ ಹಲವಾರು ರೈತರು ಪ್ರತಿಭಟನೆ ನಡೆಸಿ ಎಇಇ ಮಮತಾ ರವರೆಗೆ ಮನವಿ ಸಲ್ಲಿಸಿದರು.

